ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ ನಿಮಿತ್ತ ಕವಿವಿ ಮತ್ತು ಕರ್ನಾಟಕ ಪತ್ರಿಕೋದ್ಯಮ- ಸಂವಹನ ಅಧ್ಯಾಪಕರ ಸಂಘ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತೀಯ ಮಾಧ್ಯಮ ವಿಸ್ತಾರವಾಗಿದೆ. ತಂತ್ರಜ್ಞಾನದ ಭರಾಟೆಯಲ್ಲಿ ಭಾರತೀಯ ಮಾಧ್ಯಮ ತನ್ನದೇ ಸ್ಥಾನ ಪಡೆದಿದೆ. ಆದರೆ, ಮಾಧ್ಯಮ ಶಿಕ್ಷಣ ಮಾತ್ರ ಇನ್ನೂ ಹಳೆಯ ಕಾಲದ್ದಿದೆ. ಪಾಶ್ಚಾತ್ಯ ಪಠ್ಯಗಳನ್ನೇ ಬೋಧಿಸುವ ಸ್ಥಿತಿ ಇದೆ. ಹೀಗಾಗಿ ಮಾಧ್ಯಮ ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಂದಕ ಉಂಟಾಗಿದ್ದು, ಅದನ್ನು ಸರಿದೂಗಿಸುವಂತಹ ಪಠ್ಯಕ್ರಮದ ಅಗತ್ಯವಿದೆ ಎಂದರು.
ಭಾರತ ಹಾಗೂ ಕರ್ನಾಟಕ ಮಾಧ್ಯಮ ಲೋಕಕ್ಕೆ ಕವಿವಿ ಪತ್ರಿಕೋದ್ಯಮ ವಿಭಾಗದ ಕೊಡುಗೆ ಅಪಾರ. ಇದು ನಾಲ್ಕು ದಶಕಗಳ ಸಾರ್ಥಕ ಸೇವೆ ಸಲ್ಲಿಸಿದೆ. ಇಲ್ಲಿ ಕಲಿತ ಅನೇಕರು ರಾಜ್ಯ-ರಾಷ್ಟ್ರ ಮಾಧ್ಯಮ ಹಾಗೂ ಸರ್ಕಾರಿ ಕ್ಷೇತ್ರದ ಉನ್ನತ ಹುದ್ದೆಗಳು ಅಲಂಕರಿಸಿರುವುದು ಹೆಮ್ಮೆಯ ವಿಷಯ ಎಂದು ಪ್ರೊ. ಬಿ.ಕೆ. ರವಿ ಶ್ಲಾಘಿಸಿದರು.ಸಮ್ಮೇಳನಕ್ಕೆ ಚಾಲನೆ ನೀಡಿದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಕೃತಕ ಬುದ್ಧಿಮತ್ತೆಯಲ್ಲಿನ ಸಕಾರಾತ್ಮಕ ಅಂಶಗಳನ್ನು ಮಾತ್ರ ಬಳಸಿಕೊಂಡು ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಮಾಧ್ಯಮ ಶಿಕ್ಷಣ ಹಾಗೂ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಸವಾಲಾಗಲಿದ್ದು, ಮಾಧ್ಯಮ ಕ್ಷೇತ್ರದ ಶಿಕ್ಷಕರು ಹಾಗೂ ಪತ್ರಕರ್ತರು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ಪ್ರತಿ ಕ್ಷಣಕ್ಕೂ ಬದಲಾಗುವ ತಂತ್ರಜ್ಞಾನ ಅರಿವಿನ ಜತೆ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಆವಾಂತರಗಳ ಬಗ್ಗೆ ಜ್ಞಾನ ಹೊಂದಬೇಕು ಎಂದರು.
ಮಧ್ಯಾಹ್ನದ ನಂತರ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಹಾಗೂ ವಿದ್ಯುನ್ಮಾನ ಹಾಗೂ ಅಂತರ್ಜಾಲ ಮಾಧ್ಯಮದ ಪ್ರಮುಖರೊಂದಿಗೆ ಮುಖಾಮುಖಿ ಚರ್ಚೆ ನಡೆಯಿತು. ತದನಂತರ ಹಳೆಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಹಾಗೂ ಕವಿಪವಿ ನೂತನ ವೆಬ್ಸೈಟ್ ಉದ್ಘಾಟನೆ ಜರುಗಿತು. ಹಿರಿಯ ಪತ್ರಕರ್ತರಾದ ಆನಂದ ಯಮನೂರ, ರಾಮು ಪಾಟೀಲ, ಶಂಕರ ಪಾಗೋಜಿ, ಸಯ್ಯದ ಸನದಿ, ಪ್ರವೀಣ ಶಿರಿಯಣ್ಣವರ, ಹರ್ಷವರ್ಧನ ಶೀಲವಂತ, ಡಾ. ಶಿವಕುಮಾರ ಕಣಸೋಗಿ, ನಯನಾ ಗಂಗಾಧರಪ್ಪ ಇದ್ದರು. ವಿದ್ಯಾರ್ಥಿಗಳ ಜ್ಞಾನ ಕ್ಷಿತಿಜ ಹೆಚ್ಚಿಸಿ: