ಗ್ರಾಮೀಣ ಮಕ್ಕಳು ಡಿಜಿಟಲೀಕರಣ ಶಿಕ್ಷಣ ಪಡೆಯಲಿ

KannadaprabhaNewsNetwork | Published : Jan 15, 2024 1:47 AM

ಕಬ್ಬೂರ ಪಟ್ಟಣದ ಸುತ್ತು-ಮುತ್ತಲಿನ ಚಿಕ್ಕೋಡಿ, ಹುಕ್ಕೇರಿ, ರಾಯಬಾಗ ಹಾಗೂ ನಿಪ್ಪಾಣಿ ವಲಯದ 2ನೇ ಹಂತದ 25 ಸರ್ಕಾರಿ, ಖಾಸಗಿ ಶಾಲೆಗಳಿಗೆ ಓಂ ಸೆಂಟ್ರಲ್‌ ಪಬ್ಲಿಕ್‌ ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದ ನಿಮಿತ್ತ ಶನಿವಾರ ನಡೆದ ಇಂಟರ್‍ಯಾಕ್ಟಿವ್‌ ಬೋರ್ಡ್‌ಗಳ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಹೇಳಿಕೆ.

ಕನ್ನಡಪ್ರಭ ವಾರ್ತೆ ಕಬ್ಬೂರ

ಅಂಗೈಯಲ್ಲಿ ಜಗತ್ತು ಇರುವಾಗ ನಮ್ಮ ಗ್ರಾಮೀಣ ಮಕ್ಕಳು ಡಿಜಿಟಲೀಕರಣ ಶಿಕ್ಷಣ ಪಡೆಯಬೇಕು. ಈಗಿನ ಮಕ್ಕಳ ಭೌತಿಕ ಸಾಮರ್ಥ್ಯ ಹೆಚ್ಚಾಗಿದೆ ಎಂದು ಪಟ್ಟಣದ ಬಿ.ಜಿ.ಬೆಲ್ಲದ ಸಂಸ್ಥೆಯ ಓಂ ಸೆಂಟ್ರಲ್‌ ಪಬ್ಲಿಕ್‌ ಸ್ಕೂಲ್‌ನ ಸಂಸ್ಥಾಪಕ ಮಹೇಶ ಬ.ಬೆಲ್ಲದ ಹೇಳಿದರು.

ಪಟ್ಟಣದ ಸುತ್ತು-ಮುತ್ತಲಿನ ಚಿಕ್ಕೋಡಿ, ಹುಕ್ಕೇರಿ, ರಾಯಬಾಗ ಹಾಗೂ ನಿಪ್ಪಾಣಿ ವಲಯದ 2ನೇ ಹಂತದ 25 ಸರ್ಕಾರಿ, ಖಾಸಗಿ ಶಾಲೆಗಳಿಗೆ ಓಂ ಸೆಂಟ್ರಲ್‌ ಪಬ್ಲಿಕ್‌ ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದ ನಿಮಿತ್ತ ಶನಿವಾರ ನಡೆದ ಇಂಟರ್‍ಯಾಕ್ಟಿವ್‌ ಬೋರ್ಡ್‌ಗಳ ಉಚಿತ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಭಾಷಾ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಸಾಮರ್ಥ್ಯಗಳನ್ನು ಈ ಇಂಟರ್‍ಯಾಕ್ಟಿವ್‌ ಬೋರ್ಡ್‌ನಲ್ಲಿ ಅಳವಡಿಸಲಾಗಿದೆ. ಶಿಕ್ಷಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗಳಿಸಿದ ಸಂಪತ್ತನ್ನು ದಾನ ಮಾಡುವುದು ಮಾನವನ ಧರ್ಮ ಹಾಗೂ ಜೀವನದ ಧೇಯವಾಗಿದೆ ಎಂದರು.

ಪ್ರಾಂಶುಪಾಲ ಮಹೇಂದ್ರ ಕೆ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹೇಶ ಬೆಲ್ಲದ ಅವರು 25 ಶಾಲೆಗಳನ್ನು ದತ್ತು ತೆಗೆದುಕೊಂಡು 20 ವರ್ಷಗಳಿಂದ ಶೈಕ್ಷಣಿಕ ಮೂಲಭೂತ ಸೌಲಭ್ಯಗಳನ್ನು ನೋಡಿಕೊಂಡು ಬಂದಿದ್ದಾರೆ. ಅಲ್ಲದೇ ಕರ್ನಾಟಕದಲ್ಲೇ ಮೊಟ್ಟ ಮೊದಲು ಅಮೆರಿಕಾದಿಂದ ಟೆಲಿಸ್ಕೋಪನ್ನು ಅಳವಡಿಸಿಕೊಂಡು ಖಗೋಳ ಅಧ್ಯಯನಕ್ಕೆ ಈ ಭಾಗದ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಜಿ.ಬಿ.ಸಂಗಟೆ, ಎಸ್‌.ಆರ್.ಕುಂದರಗಿ ಶಿಕ್ಷಕರು ಈ ಇಂಟರ್‍ಯಾಕ್ಟಿವ್‌ ಬೋರ್ಡ್‌ ವಿತರಣಾ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಕೇಶ್ವರ ಹೀರಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸುರೇಶ ಬೆಲ್ಲದ, ದಿ.ಕಬ್ಬೂರ ಅರ್ಬನ್‌ ಬ್ಯಾಂಕ್‌ನ ಅಧ್ಯಕ್ಷ ರಮೇಶ ಬೆಲ್ಲದ, ಬಿ.ಜಿ.ಬೆಲ್ಲದ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಬೆಲ್ಲದ, ರಾಯಬಾಗ ಬಿಆರ್‌ಪಿ ಬಿ.ಆರ್.ಕಾಂಬಳೆ, ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಶಿವಪ್ಪಾ ಹುದ್ದಾರ, ಮಹೇಶ ಗೊಜಗೊಜ್ಜಿ, ಡಾ.ರಮೇಶ ಮದಿಹಳ್ಳಿ, ಮಹಾನಿಂಗ ಹಂಜಿ, ಬಸಲಿಂಗ ಕಾಡೇಶಗೋಳ, ಕಲ್ಲಪ್ಪ ಕರಗಾಂವಿ, ಶ್ರೀಶೈಲ ತೇರದಾಳ ಹಾಗೂ 25 ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಇದ್ದರು. ಉಪ ಪ್ರಾಂಶುಪಾಲ ರಾಜು ಮಹಿಪತಿ ಸ್ವಾಗತಿಸಿ, ವಂದಿಸಿದರು. ಕೋಟ್‌...

ನಾವು ಕಲಿಯುವಾಗ ಅನುಭವಿಸಿದ ಕಷ್ಟಗಳು ಈಗಿನ ಮಕ್ಕಳಿಗೆ ಆಗಬಾರದು. ಈ ದಿನಮಾನದಲ್ಲಿ ಶಿಕ್ಷಣ ಕಂಪ್ಯೂಟರ್‌, ಡಿಜಿಟಲೀಕರಣ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜಾಗತೀಕರಣ ಆಗಬೇಕೆಂಬುವುದು ನನ್ನ ಆಶಯ.

ಮಹೇಶ ಬ.ಬೆಲ್ಲದ, ಬಿ.ಜಿ.ಬೆಲ್ಲದ ಸಂಸ್ಥೆಯ ಓಂ ಸೆಂಟ್ರಲ್‌ ಪಬ್ಲಿಕ್‌ ಸ್ಕೂಲ್‌ನ ಸಂಸ್ಥಾಪಕರು.ಈ ಭಾಗದ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ, ಶಿಕ್ಷಕರ ಕೊರತೆ ನಿಗಿಸುವಲ್ಲಿ ಈ ಇಂಟರ್‍ಯಾಕ್ಟಿವ್‌ ಬೋರ್ಡ್‌ನ ಕಾರ್ಯ ಮಹತ್ವದ್ದಾಗಿದೆ. ಮಹೇಶ ಬೆಲ್ಲದ ಅವರ ಈ ಶೈಕ್ಷಣಿಕ ಪ್ರೀತಿ ಎಲ್ಲ ಹಳ್ಳಿಗಳ ಸರ್ಕಾರಿ, ಖಾಸಗಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಒಂದು ಒಳ್ಳೆಯ ಶೈಕ್ಷಣಿಕ ಬುನಾದಿಯಾಗಿದೆ.

ಸಂಪಾದನಾ ಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿ ಮಠ.13-ಕಬ್ಬೂರ-01-2ಕಬ್ಬೂರ ಪಟ್ಟಣದ ಬಿ.ಜಿ ಬೆಲ್ಲದ ಸಂಸ್ಥೆಯ ಓಂ ಸೆಂಟ್ರಲ್‌ ಪಬ್ಲಿಕ್‌ ಸ್ಕೂಲ್‌ನ ಸಂಸ್ಥಾಪಕ ಮಹೇಶ ಬ.ಬೆಲ್ಲದ ಅವರು ಕಬ್ಬೂರ ಪಟ್ಟಣದ ಸುತ್ತು-ಮುತ್ತಲಿನ 25 ಸರ್ಕಾರಿ, ಖಾಸಗಿ ಶಾಲೆಗಳಿಗೆ ಉಚಿತವಾಗಿ ಇಂಟರ್‍ಯಾಕ್ಟಿವ್‌ ಬೋರ್ಡ್‌ಗಳ ವಿತರಣಾ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಗಣ್ಯರು ಚಾಲನೆ ನೀಡಿದರು.