ಸಾರ್ವಭೌಮ ತತ್ವ ಅಳವಡಿಸಿಕೊಂಡು ಸದೃಢ ರಾಷ್ಟ್ರ ಕಟ್ಟೋಣ: ತಹಶೀಲ್ದಾರ ನಾಯಕಲ್‌ ಮಠ

KannadaprabhaNewsNetwork | Published : Jan 27, 2024 1:21 AM

ಸಾರಾಂಶ

ಕೊಲ್ಹಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡ 75 ನೇ ಗಣರಾಜ್ಯೋತ್ಸವದಲ್ಲಿ ತಹಶೀಲ್ದಾರ ನಾಯಕಲ್‌ ಮಠ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಜಾತ್ಯತೀತ, ಪ್ರಜಾಸತ್ತಾತ್ಮಕ, ಸಮಾಜವಾದಿ, ಸಾರ್ವಭೌಮ ಸ್ವತಂತ್ರ ಸಾಮ್ರಾಜ್ಯದ ತತ್ವಗಳನ್ನು ಅಳವಡಿಸಿಕೊಂಡು ಸದೃಢ ರಾಷ್ಟ್ರ ಕಟ್ಟೊಣ ಎಂದು ತಹಶೀಲ್ದಾರ ಎಸ್.ಎಸ್.ನಾಯಕಲ್ ಮಠ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಕೊಲ್ಹಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡ 75 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಭಾರತದ ಸಂವಿಧಾನವು ದೇಶದ ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ ಎಂದರು.

ನಮ್ಮ ದೇಶವು ಸ್ವಾತಂತ್ರ್ಯ ನಂತರ ಅನೇಕ ಸವಾಲುಗಳನ್ನು ಎದುರಿಸಿತು. ಈ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸುವುದು, ಸಂಸ್ಥಾನಗಳ ವಿಲಿನೀಕರಣ, ಕಾನೂನು ಸುವ್ಯವಸ್ಥೆಗೊಳಿಸುವುದು ಹೀಗೆ ಮುಂತಾದ ಸಾವಲುಗಳಿದ್ದವು. ಸಂಸ್ಥಾನಗಳ ವಿಲಿನೀಕರಣವನ್ನು ವಲ್ಲಾಬಾಯಿ ಪಟೇಲರು ಯಶಸ್ವಿಯಾಗಿ ನಿಭಾಯಿಸಿದರು ಎಂದು ಹೇಳಿದರು.

ಇಡೀ ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂದು ತಿಳಿಸಿ ಕೊಡುವ ವ್ಯವಸ್ಥೆಯನ್ನು ಸಂವಿಧಾನ ಎನ್ನುತ್ತಾರೆ. ಡಾ.ಬಾಬು ರಾಜೇಂದ್ರ ಪ್ರಸಾದ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು. ಈ ಸಭೆಯಲ್ಲಿ ಜವಾಹರಲಾಲ ನೆಹರು, ವಲ್ಲಾಭಭಾಯಿ ಪಟೇಲ, ಡಾ.ಬಿ ಆರ್.ಅಂಬೇಡ್ಕರ, ಮೌಲಾನಾ ಅಬ್ದುಲ್ ಕಲಾಂ ಸಜಾದ್, ಸಿ.ರಾಜಗೋಪಾಲಚಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಅನೇಕ ಸಭೆಗಳನ್ನು ನಡೆಸಿ ಒಂದು ಸುಭದ್ರ ಸಂವಿಧಾನ ಕೊಟ್ಟರು. ಅದು ಜ.26 ,1950 ರಂದು ಜಾರಿಗೆ ಬಂದಿತು ಎಂದರು.

75 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಲಿಟಲ್ ಸ್ಟಾರ ಪ್ರಸಸ್ತಿಯನ್ನು ಪಡೆದುಕೊಂಡ ಹೇಮಂತ ಕೊಟ್ಟಗಿ, ಹೊಸ ವರ್ಷಕ್ಕೆ ಹೊಸ ಸಂದೇಶ ನೀಡುವ ಚಿತ್ರಗಳನ್ನು ರಚಿಸಿ ಕಲಾವಿಕಾಸ ಪ್ರಶಸ್ತಿ ಪಡೆದುಕೊಂಡು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪತ್ರದ ಮೂಲಕ ಪ್ರಶಂಸೆಗೊಳಗಾದ ಸಿಕ್ಯಾಬ್ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಸಲೀಂ ಢಾಂಗೆ ಹಾಗೂ 1971 ರಲ್ಲಿ ಇಂಡಿಯಾ ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ತಾಲೂಕಿನ ಮಲಘಾಣ ಗ್ರಾಮದ ಯೋಧನ ಪತ್ನಿ ಶಿವಗಂಗವ್ವ ಅವರು ಸರ್ಕಾರದ ಯಾವುದೇ ಅನುದಾನ ಪಡೆಯದೆ ಸ್ವಂತ ₹5.5 ಲಕ್ಷ ಹಣದಿಂದ ಪತಿ ದಿ.ಮಲ್ಲಪ್ಪ ಚಂದ್ರಪ್ಪ ಮಾದರ ಅವರ ಪ್ರತಿಮೆಯನ್ನು ಸ್ವಗ್ರಾಮದಲ್ಲಿ ನಿರ್ಮಿಸಿದ್ದಕ್ಕಾಗಿ ಅವರನ್ನು ತಾಲೂಕಾಡಳಿತದಿಂದ ಸನ್ಮಾನಿಸಿ,ಗೌರವಿಸಲಾಯಿತು.

ಪಟ್ಟಣದ ಎ.ಪಿ.ಜೆ.ಅಬ್ದುಲ್ ಕಲಾಂ ಕಿರಿಯ ಪ್ರಾಥಮಿಕ ಶಾಲೆ,ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಕೆ.ಜಿ.ಎಸ್.ಶಾಲೆ, ಸಂಗಮೇಶ್ವರ ಪ್ರೌಢ ಶಾಲೆ ಹಾಗೂ ಸಿಕ್ಯಾಬ್ ಪ್ರೌಢ ಶಾಲೆಯ ಮಕ್ಕಳಿಂದ ದೇಶಭಕ್ತಿ ಮೂಡಿಸುವ ಸಾಂಸ್ಖತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಮಾರಂಭದಲ್ಲಿ ತಹಸೀಲ್ದಾರ ಎಸ್.ಎಸ್.ನಾಯಕಲಮಠ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮುದ್ದಿನ್ , ಪ.ಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ, ಖಜಾನೆ ಅಧಿಕಾರಿ ವಿನೋದಕುಮಾರ ಡೋಣೂರು, ಕೃಷಿ ಅಧಿಕಾರಿ ಪುರೋಹಿತ, ಪಿಎಸ್‌ಐ ಪ್ರವೀಣಕುಮಾರ ಗರೇಬಾಳ ಉಪಸ್ಥಿತರಿದ್ದರು.

ಪ.ಪಂ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ನಿಂಗಪ್ಪ ಗಣಿ, ಬಾಬು ಭಜಂತ್ರಿ, ಅಪ್ಪಾಸಿ ಮಟ್ಯಾಳ, ತೌಸೀಪ್ ಗಿರಗಾಂವಿ, ಶಿಕ್ಷಣ ಸಂಯೋಜಕ ಜಿ.ಎಸ್.ಗಣಿಯವರ, ಸಿಆರ್‌ಪಿ ಜಿ.ಐ.ಗೊಡ್ಯಾಳ ಎಂ,,ಆರ್.ಕಲಾದಗಿ.ದಸ್ತಗೀರ ಕಲಾದಗಿ ಸೇರಿದಂತೆ ಪಟ್ಟಣದ ಗಣ್ಯಮಾನ್ಯರು ಇದ್ದರು.

ಶಿಕ್ಷಕಿ ಸಿ.ಎಚ್.ಗೌಡರ ಸ್ವಾಗತಿಸಿದರು.ಶಿಕ್ಷಕ ಜಿ.ಪಿ.ಕುಲಕರ್ಣಿ ವಂದಿಸಿದರು, ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ, ಮಂಜುನಾಥ ಮುಳವಾಡ, ಸುರೇಶ ಉತ್ನಾಳ ಕಾರ್ಯಕ್ರಮ ನಡೆಸಿಕೊಟ್ಟರು.

Share this article