ರೌಡಿ ಶೀಟರ್ ಎಂಬುದನ್ನು ದಾಖಲೆ ಸಮೇತ ಸಾಬೀತುಪಡಿಸಲಿ: ಸ್ನೇಹಮಯಿ ಕೃಷ್ಣ ಸವಾಲು

KannadaprabhaNewsNetwork |  
Published : Aug 29, 2024, 12:47 AM IST
ಸ್ನೇಹಮಯಿ ಕೃಷ್ಣ ಸವಾಲು | Kannada Prabha

ಸಾರಾಂಶ

ನಾನು ಹೇಗೆ ರೌಡಿ ಶೀಟರ್?, ಎಷ್ಟು ಕೊಲೆ ಮಾಡಿದ್ದೀನಿ?, ಎಷ್ಟು ಸುಲಿಗೆ ಮಾಡಿದ್ದೀನಿ?, ಯಾರ ಮೇಲೆ ಹಲ್ಲೆ ಮಾಡಿದ್ದೀನಿ ಅಂತ ದಾಖಲೆ ಬಿಡುಗಡೆ ಮಾಡಲಿ. ಈಗ ನಾನು ಎಂಡಿಎ ಪ್ರಕರಣದಲ್ಲಿ ಹೆಚ್ಚು ಗಮನಹರಿಸಬೇಕಿದೆ. ಸದ್ಯಕ್ಕೆ ಲಕ್ಷ್ಮಣ್ ಆರೋಪದ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ನನ್ನನ್ನು ಒಬ್ಬ ರೌಡಿ ಶೀಟರ್ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣಗೆ ತಿರುಗೇಟು ನೀಡಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ನಾನು ರೌಡಿ ಶೀಟರ್ ಅಂತ ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ರೌಡಿ ಶೀಟರ್ ಅಲ್ಲ ಎಂದು ನ್ಯಾಯಾಲಯವೇ ಘೋಷಿಸಿದೆ. ಅದನ್ನು ಲಕ್ಷ್ಮಣ ಓದಿಕೊಳ್ಳಲಿ. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜದಲ್ಲಿ ಆಗುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಒಬ್ಬ ಭ್ರಷ್ಟ ಪೋಲಿಸ್ ಅಧಿಕಾರಿ ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ರೌಡಿ ಶೀಟರ್ ಓಪನ್ ಮಾಡಿದ್ದ. ಆದರೆ, ನ್ಯಾಯಾಲಯದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತ ರೌಡಿ ಶೀಟರ್ ಅಲ್ಲ ಎಂದು ತೀರ್ಪು ನೀಡಿದೆ.

ನಾನು ಹೇಗೆ ರೌಡಿ ಶೀಟರ್?, ಎಷ್ಟು ಕೊಲೆ ಮಾಡಿದ್ದೀನಿ?, ಎಷ್ಟು ಸುಲಿಗೆ ಮಾಡಿದ್ದೀನಿ?, ಯಾರ ಮೇಲೆ ಹಲ್ಲೆ ಮಾಡಿದ್ದೀನಿ ಅಂತ ದಾಖಲೆ ಬಿಡುಗಡೆ ಮಾಡಲಿ. ಈಗ ನಾನು ಎಂಡಿಎ ಪ್ರಕರಣದಲ್ಲಿ ಹೆಚ್ಚು ಗಮನಹರಿಸಬೇಕಿದೆ. ಸದ್ಯಕ್ಕೆ ಲಕ್ಷ್ಮಣ್ ಆರೋಪದ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇನೆ ಎಂದರು.

ನಾನು ಸಿಎಂ ಸಿದ್ದರಾಮಯ್ಯ ಅವರ ಒಂದು ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಂಡು ದೂರು ಕೊಟ್ಟಿದ್ದೇನೆ. ಆದರೆ, 1990 ರಿಂದ ಮುಡಾದಲ್ಲಿ ಎಷ್ಟು ಅಕ್ರಮ ನಡೆದಿದೆ ಏನೂ ಎಂದು ಸಮಗ್ರ ತನಿಖೆಗೆ ನಾನು ಒತ್ತಾಯಿಸಿದ್ದೇನೆ. ಪ್ರಕರಣದಲ್ಲಿ ಯಾರು ಎಷ್ಟು ಪ್ರಭಾವಿಗಳಾದರೂ ಸರಿ, ಯಾವ ಪಕ್ಷದವರಾದರೂ ಸರಿ ಸಮಗ್ರ ತನಿಖೆಗೆ ಆಗಲಿ ಎಂಬುದು ನನ್ನ ಆಗ್ರಹ. ನನಗೆ ಯಾವುದೇ ಬಿಜೆಪಿ, ಜೆಡಿಎಸ್ ನಾಯಕರ ಸಂಪರ್ಕ ಇಲ್ಲ. ಯಾರ ಆಸೆ ಆಮಿಷಗಳಿಗೂ ಒಳಗಾಗಿಲ್ಲ. ಸ್ವಯಂ ಆಸಕ್ತಿಯಿಂದ ಈ ಪ್ರಕರಣ ಕುರಿತು ದೂರು ಸಲ್ಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ