ಲಿಂಗಾಯತರು ನಿದ್ರೆಯಿಂದ ಎಚ್ಚರಗೊಳ್ಳಲಿ: ಚಂದ್ರಮೌಳಿ

KannadaprabhaNewsNetwork |  
Published : Sep 22, 2025, 01:00 AM IST
ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.  | Kannada Prabha

ಸಾರಾಂಶ

ಲಿಂಗಾಯತರಿಗೆ ಒಡೆಯ ನಿಜವಾಗ್ಲೂ ಗಣಪತಿ. ಅಲ್ಲದೇ ಸಾಂಸ್ಕೃತಿಕ ನಾಯಕ ಬಸವೇಶ್ವರ ಎಂದು ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಚಂದ್ರಮೌಳಿ ಹೇಳಿದ್ದಾರೆ.

- ಮಲೇಬೆನ್ನೂರು ಬಸವ ಮಂಟಪದಲ್ಲಿ ಜಿಲ್ಲಾ ಬಸವ ದಳದ ಶರಣರ ಸಭೆ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಲಿಂಗಾಯತರಿಗೆ ಒಡೆಯ ನಿಜವಾಗ್ಲೂ ಗಣಪತಿ. ಅಲ್ಲದೇ ಸಾಂಸ್ಕೃತಿಕ ನಾಯಕ ಬಸವೇಶ್ವರ ಎಂದು ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಚಂದ್ರಮೌಳಿ ಹೇಳಿದರು.

ಪಟ್ಟಣದ ಡಾ. ರಾಜ್‌ಕುಮಾರ್ ಬಡಾವಣೆಯ ಬಸವ ಮಂಟಪದಲ್ಲಿ ಭಾನುವಾರ ಜರುಗಿದ ದಾವಣಗೆರೆ ಜಿಲ್ಲಾ ಬಸವ ದಳದ ಶರಣರ ಸಭೆಯಲ್ಲಿ ಅವರು ಮಾತನಾಡಿದರು.

ಶರಣರು ಲಿಂಗಾಯತ ಧರ್ಮ ಜಾರಿಗೆ ತಂದು ೯೦೦ ವರ್ಷವಾದರೂ ನಿದ್ರೆಯಿಂದ ಎಚ್ಚರವಾಗೊದು ಯಾವಾಗ? ದೂರದ ಊಟಿ ಮತ್ತು ನೇಪಾಳ ದೇಶದ ಜಗುಲಿಯಲ್ಲಿ ಬಸವೇಶ್ವರ ಭಾವಿಚಿತ್ರವನ್ನು ಇಟ್ಟು ಪೂಜಿಸುತ್ತಾರೆ. ಇಂಥ ಸಂದರ್ಭದಲ್ಲಿ ಲಿಂಗಾಯತರು ಎನ್ನಿಸಿಕೊಂಡವರು ಬೇರೆಲ್ಲ ದೇವರುಗಳನ್ನು ಇಟ್ಟು ಪೂಜಿಸುವರು ಎಂದು ವಿಷಾದಿಸಿದರು.

ಫ.ಗು ಹಳಕಟ್ಟಿ, ಮಾತೆ ಮಹಾದೇವಿ, ಗಂಗಾಮಾತೆ, ಅಲ್ಲಮಪ್ರಭು, ಲಿಂಗಾನಂದ ಸ್ವಾಮೀಜಿ ಮತ್ತಿತರೆ ಶರಣರು ವಚನಗಳನ್ನು ಮತ್ತು ಅದರ ಸಾರವನ್ನು ಇಡೀ ಸಮಾಜಕ್ಕೆ ಹರಡಿದವರು, ಅವರಂತೆ ಲಿಂಗದ ಪೂಜೆ, ಕಾಯಕ ತತ್ವವನ್ನು ತಿಳಿದು ಸಂಸ್ಕಾರವಂತರಾದರೆ ಸಂಘಟನೆಯಾಗಲಿದೆ. ಅನಂತರ ನಿಜ ಲಿಂಗಾಯತರಾಗಬಹುದು. ಆಗ ಬಸವಣ್ಣನೆಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿ ಎಂದು ಕರೆ ನೀಡಿದರು.

ಗುಳ್ಳಹಳ್ಳಿ ಮಲ್ಲಿಕಾರ್ಜುನಪ್ಪ ಮಾತನಾಡಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರಲ್ಲ ಎಂದು ಶಾಸಕ ಬಸನಗೌಡ ಯತ್ನಾಳ್ ಒಬ್ಬ ಮೂರ್ಖರಂತೆ ಮಾತಾಡಿದ್ದಾರೆ. ಅಂಥ ಗಾಳಿಮಾತುಗಳನ್ನು ಯಾರೂ ನಂಬದೇ ಯುವಕರನ್ನು ಸಂಘಟಿಸಿ ಪಂಚಾಚಾರ, ಅಷ್ಠಾವರಣ, ಲಿಂಗದೀಕ್ಷೆ, ಬಸವ ತತ್ವವನ್ನು ತಿಳಿಸಬೇಕಿದೆ ಎಂದು ಹೇಳಿದ ಅವರು, ಗಣೇಶ ಉತ್ಸವಕ್ಕೆ ಮಾಡುವ ಖರ್ಚುಗಳಲ್ಲಿ ಇಡೀ ಭಾರತದ ತುಂಬೆಲ್ಲಾ ನೀರಾವರಿ ಪ್ರದೇಶ ಮಾಡಬಹುದಿತ್ತು ಎಂದರು.

ಕರೂರು ಹನುಮಂತಪ್ಪ ಮಾತನಾಡಿದರು. ಬಸವ ದಳದ ಜಿಲ್ಲಾಧ್ಯಕ್ಷ ವೈ ನಾರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಆವರಗೆರೆ ರುದ್ರಮುನಿ, ಶರಣ ರವೀಂದ್ರನಾಥ್, ಶಿವಕುಮಾರ್, ಫಕ್ಕೀರಗೌಡ, ವರದರಾಜ್, ಸರೋಜಮ್ಮ, ಕುಸುಮಾ, ನ್ಯಾಮತಿ ಮಹೇಶ್, ನಾಗರಾಜ್, ಸುವರ್ಣ, ಕೊಟ್ರೇಶ್, ಜಿ.ಮುರಿಗೆಪ್ಪ ಗೌಡ, ಶರಣಪ್ಪ, ಪ್ರಭುಸ್ವಾಮಿ ವೀರಯ್ಯ, ಶಿವಾಜಿ ಪಾಟೀಲ್,ಹಾಗೂ ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು, ಹರಿಹರ, ದಾವಣಗೆರೆ ತಾಲೂಕುಗಳ ನೂರಾರು ಬಸವದಳ ಕಾರ್ಯಕರ್ತರು ಹಾಜರಿದ್ದರು.

ಅಕ್ಕನಬಳಗದ ಶರಣೆಯರು ಇಂಪಾಗಿ ವಚನ ಗೀತೆ ಹಾಡಿದರು. ಮುಖಂಡ ಬಿ ಚಿದಾನಂದಪ್ಪ ಸಹೋದರರು ಪ್ರಸಾದ ವ್ಯವಸ್ಥೆ ಮಾಡಿದ್ದರು.

- - -

(ಟಾಪ್‌ ಕೋಟ್‌) ಲಿಂಗಾಯತರು ಸಂಘಟಿತರಾಗದಿದ್ದಲ್ಲಿ ಸಮಸ್ಯೆಯಾಗಲಿದೆ. ಬೇರೆಯವರಿಗೆ ೧೨ನೇ ಶತಮಾನದ ಪೂರ್ವದಲ್ಲಿನ ಜೀತರಾಗುವ ದಿನ ದೂರವಿಲ್ಲ. ಲಿಂಗಾಯತರ ಅಸ್ತಿತ್ವ ಉಳಿಯಲು ವಚನ ಸಾಹಿತ್ಯ, ಶರಣರ ಜೀವನ, ತ್ಯಾಗ ಭಾವನೆ ಇರಬೇಕು.

- ಬಸವಲಿಂಗ ಸ್ವಾಮೀಜಿ, ಬಸವ ಗಂಗೋತ್ರಿ ಆಶ್ರಮ, ಕುಂಬಳಗೋಡು.

- - -

-ಚಿತ್ರ-: ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ