ವರಕವಿ ಈಶ್ವರ ಸಣಕಲ್ಲ ಪ್ರತಿಷ್ಠಾನ ಸ್ಥಾಪನೆಯಾಗಲಿ: ಶಿವಾನಂದ ಶೆಲ್ಲಿಕೇರಿ

KannadaprabhaNewsNetwork |  
Published : Jan 16, 2024, 01:50 AM IST
ವರಕವಿ ಈಶ್ವರ ಸಣಕಲ್ಲ ಪ್ರತಿಷ್ಠಾನ ಸ್ಥಾಪನೆಗೆ ಶೆಲ್ಲಿಕೇರಿ ಆಗ್ರಹ. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ: ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂದು ಹೇಳಿದ ನಾಡಿನ ಖ್ಯಾತ ಕವಿ ಈಶ್ವರ ಸಣಕಲ್ಲ ಅವರ ಅಪ್ರಕಟಿತ ಕವನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಕೊಟ್ಟರೆ ಅಕಾಡೆಮಿ, ವಿಶ್ವವಿದ್ಯಾನಿಲಯ ಸಹಕಾರದೊಂದಿಗೆ, ಕಸಾಪ ಪುಸ್ತಕಗಳನ್ನು ಪ್ರಕಟಿಸಲು ಪ್ರಯತ್ನಿಸಲಿದೆ. ರಾಜ್ಯ ಸರ್ಕಾರ ಈಶ್ವರ ಸಣಕಲ್ಲ ಅವರ ಹೆಸರಿನಲ್ಲಿ ಸಾಹಿತ್ಯ ಪ್ರತಿಷ್ಠಾನ ಆರಂಭಿಸಬೇಕೆಂದು ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಗ್ರಹಿಸಿದರು. ರಾಮಪುರ ಶ್ರೀನೀಲಕಂಠೇಶ್ವರ ಮಠದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ತಾಲೂಕು ಘಟಕ ರಬಕವಿ-ಬನಹಟ್ಟಿ, ಕಸಾಪ ತೇರದಾಳ-ಮಹಾಲಿಂಗಪುರ ವಲಯಗಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-25, ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂದು ಹೇಳಿದ ನಾಡಿನ ಖ್ಯಾತ ಕವಿ ಈಶ್ವರ ಸಣಕಲ್ಲ ಅವರ ಅಪ್ರಕಟಿತ ಕವನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಕೊಟ್ಟರೆ ಅಕಾಡೆಮಿ, ವಿಶ್ವವಿದ್ಯಾನಿಲಯ ಸಹಕಾರದೊಂದಿಗೆ, ಕಸಾಪ ಪುಸ್ತಕಗಳನ್ನು ಪ್ರಕಟಿಸಲು ಪ್ರಯತ್ನಿಸಲಿದೆ. ರಾಜ್ಯ ಸರ್ಕಾರ ಈಶ್ವರ ಸಣಕಲ್ಲ ಅವರ ಹೆಸರಿನಲ್ಲಿ ಸಾಹಿತ್ಯ ಪ್ರತಿಷ್ಠಾನ ಆರಂಭಿಸಬೇಕೆಂದು ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಗ್ರಹಿಸಿದರು.

ರಾಮಪುರ ಶ್ರೀನೀಲಕಂಠೇಶ್ವರ ಮಠದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ತಾಲೂಕು ಘಟಕ ರಬಕವಿ-ಬನಹಟ್ಟಿ, ಕಸಾಪ ತೇರದಾಳ-ಮಹಾಲಿಂಗಪುರ ವಲಯಗಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-25, ಬೆಳ್ಳಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿ, ಅಲಕ್ಷಿತ ಕಲಾವಿದರು, ಸಾಹಿತಿಗಳು, ಯುವ ಬರಹಗಾರರನ್ನು ಗುರುತಿಸಿ ವೇದಿಕೆ ಕಲ್ಪಿಸಲು ಕಸಾಪ ಬದ್ಧವಾಗಿದೆ. ಜಿಲ್ಲಾದ್ಯಂತ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮುಧೋಳದ ಹಿರಿಯ ಜಾನಪದ ಸಾಹಿತಿ ಡಾ.ಸಿದ್ದು ದಿವಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕಗಳು ಜೀವನದಲ್ಲಿ ಹೊಸ ಆಯಾಮ ಸೃಷ್ಟಿಸುತ್ತವೆ. ಪುಸ್ತಕಾವಲೋಕನ ಸ್ತುತ್ಯಾರ್ಹವಾಗಿದೆ. ಇದು ನಿರಂತರ ನಡೆಯಬೇಕೆಂದು ಹೇಳಿದರು.

ಬನಹಟ್ಟಿಯ ಕಥೆಗಾರರಾದ ಆನಂದ ಕುಂಚನೂರ ವಸುಧೇಂದ್ರರ ಕೃತಿ ತೇಜೋ ತುಂಗಭದ್ರಾ ಅವಲೋಕಿಸಿದರು. ಗುರುರಾಜ ಖಾಸನೀಸ್‌, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟಮಠ ಸಂವಾದ ನಡೆಸಿದರು.ಹಿರಿಯರು, ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವಪ್ರಭು ಹಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜ್ಯೋತಿಷಿ ಶಂಕ್ರೆಪ್ಪಣ್ಣ ಅಮ್ಮಲಜೇರಿ ಗೀತೆ ಹಾಡಿದರು. ಮಹಾಲಿಂಗ ಚಿಮ್ಮಡ ವಚನ ಪ್ರಾರ್ಥನೆಗೈದರು. ಕಸಾಪ ತಾಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಸ್ವಾಗತಿಸಿದರು. ತೇರದಾಳ ವಲಯ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ ವಂದಿಸಿದರು.

ಹಿರಿಯ ಸಾಹಿತಿಗಳಾದ ಜಿ.ಎಸ್. ವಡಗಾಂವಿ, ಶಿವಾನಂದ ದಾಶಾಳ, ಶಿವಜಾತ ಉಮದಿ, ಮಲ್ಲಿಕಾರ್ಜುನ ಹುಲಗಬಾಳಿ, ಮಲಕಪ್ಪ ಜವಳಗಿ, ಗುರುನಾಥ ಸುತಾರ, ಕನ್ನಡಪರ ಹೋರಾಟಗಾರ ಚಿದಾನಂದ ಸೊಲ್ಲಾಪುರ, ಮಲ್ಲಪ್ಪ ಗಣಿ, ಮಹೇಶ ಮನ್ನಯ್ಯನವರಮಠ, ದಾನಪ್ಪ ಆಸಂಗಿ, ಎನ್.ಎನ್. ಕವಟಗಿ, ಶಿವಾನಂದ ಕೊಳಕಿ, ಈರಣ್ಣ ಬಾಣಕಾರ, ಮಹಾಲಿಂಗ ತೆಳಗಿನಮನಿ, ಮಹಾಲಿಂಗ ಘಂಟಿ, ಇಲಾಹಿ ಜಮಖಂಡಿ, ಕೆ.ಎಸ್. ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ