ಜನಪದ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸವಾಗಲಿ

KannadaprabhaNewsNetwork |  
Published : Aug 15, 2026, 02:30 AM IST
 ಕೆ ಕೆ ಪಿ ಸುದ್ದಿ 01(01): : ಧಮ್ಮ ದೀವಿಗೆ  ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಜನಪದ ಕಲೆ ಪ್ರದರ್ಶನ ಮಾಡಿದರು.    | Kannada Prabha

ಸಾರಾಂಶ

ಕನಕಪುರ: ಪೂರ್ವಜರು ಕಟ್ಟಿ ಬೆಳೆಸಿದ ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದರೆ ಇಂದಿನ ಮಕ್ಕಳಿಗೆ ಜಾನಪದ ಕಲೆಯ ಅರಿವು ಮೂಡಿಸಬೇಕಾಗಿದೆ ಎಂದು ಆಕಾಶವಾಣಿ ಕಲಾವಿದ ಬಾನಂದೂರು ಕೆಂಪಯ್ಯ ತಿಳಿಸಿದರು

ಕನಕಪುರ: ಪೂರ್ವಜರು ಕಟ್ಟಿ ಬೆಳೆಸಿದ ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದರೆ ಇಂದಿನ ಮಕ್ಕಳಿಗೆ ಜಾನಪದ ಕಲೆಯ ಅರಿವು ಮೂಡಿಸಬೇಕಾಗಿದೆ ಎಂದು ಆಕಾಶವಾಣಿ ಕಲಾವಿದ ಬಾನಂದೂರು ಕೆಂಪಯ್ಯ ತಿಳಿಸಿದರು. ತಾಲೂಕಿನ ಬರಡನಹಳ್ಳಿ ಬಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಬಾಯಿಂದ ಬಾಯಿಗೆ ಬಂದ ಕಲೆಯೇ ಜನಪದ ಕಲೆ. ಪರಂಪರಾಗತವಾಗಿ ಬಂದಿರುವ ಜನಪದ ಕಲೆ ಅವಸಾನದ ಅಂಚಿನಲ್ಲಿದ್ದು, ಇಂದಿನ ಯುವ ಪೀಳಿಗೆಗೆ ಜನಪದ ಕಲೆಗಳ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಜನಪದ ಕಲೆಯನ್ನು ಕಟ್ಟಿ ಬೆಳೆಸಿದ ಜನಪದರಿಗೆ ಒಂದು ದೇಶವನ್ನು ಕಟ್ಟುವ ಮತ್ತು ಮುನ್ನಡೆಸುವ ಶಕ್ತಿ ಇತ್ತು. ಕನ್ನಂಬಾಡಿ ಕಟ್ಟೆ ಕಟ್ಟಲು ಜನಪದರು ಸಹ ದುಡಿದಿದ್ದಾರೆ ಜನಪದರು ನಮಗೆ ಜನಪದ ಕಲೆ ಮತ್ತು ಅದರ ಪರಿಕರಗಳನ್ನು ಮಾತ್ರ ಬಿಟ್ಟು ಹೋಗಿದ್ದಾರೆ ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂದಿನ ಯುವ ಸಮೂಹ ಜನಪದ ಕಲೆಯ ಬಗ್ಗೆ ಅಧ್ಯಯನ ಮಾಡಿ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಪ್ರಾಂಶುಪಾಲ ಎಸ್.ಬಸವರಾಜು ಮಾತನಾಡಿ, ಜನಪದ ಕಲೆ ನಮ್ಮ ಪೂರ್ವಿಕರಿಂದ ಬಂದಿರುವ ಕೊಡುಗೆ. ಸಾಕಷ್ಟು ಕಲಾವಿದರು ಈ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಜನಪದ ಕಲೆಯನ್ನ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಚಿಲಿಪಿಲಿ ಗೊಂಬೆ ಕುಣಿತ, ವೀರಗಾಸೆ, ತಮಟೆ ವಾದನ ಕಲಾತಂಡಗಳ ಉತ್ಸವ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ಜನಪದ ಕಲಾತಂಡಗಳ ಉತ್ಸವಕ್ಕೆ ಗೀತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಜವಾಹರ್ ನವೋದಯ ವಿದ್ಯಾಲಯದ ಸಹಶಿಕ್ಷಕರಾದ ರಾಕೇಶ್ ನಾಡಕರ್ಣಿ, ಅರುಳ್ ಧನಸಿಂಹ, ವಕೀಲ ಸುರೇಶ್, ಸಾಹಿತಿ ಕೂ ಗಿ ಗಿರಿಯಪ್ಪ, ಜಿಲ್ಲಾ ಜಾಗೃತಿ ವೇದಿಕೆ ಸಮಿತಿ ಸದಸ್ಯ ಚನ್ನಪಟ್ಟಣ ಕುಮಾರ್, ಹರೀಶ್, ಕಾಳಯ್ಯ, ನಿಂಗರಾಜು, ಗೀತಾ ಮಲ್ಲಿಕಾರ್ಜುನ್, ಶಿವಮಾದು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01(01): :

ಕನಕಪುರ ತಾಲೂಕಿನ ಬರಡನಹಳ್ಳಿ ಬಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಧಮ್ಮ ದೀವಿಗೆ ಟ್ರಸ್ಟ್ ಆಯೋಜಿಸಿದ್ದ ಜನಪದ ಉತ್ಸವದಲ್ಲಿ ವಿವಿಧ ಕಲಾತಂಡಗಳು ಜನಪದ ಕಲೆ ಪ್ರದರ್ಶನ ಮಾಡಿದರು.

ಕೆ ಕೆ ಪಿ ಸುದ್ದಿ 01(2) :

ಕನಕಪುರ ತಾಲೂಕಿನ ಬರಡನಹಳ್ಳಿ ಬಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಧಮ್ಮ ದೀವಿಗೆ ಟ್ರಸ್ಟ್ ಆಯೋಜಿಸಿದ್ದ ಜನಪದ ಉತ್ಸವವನ್ನು ಆಕಾಶವಾಣಿ ಕಲಾವಿದ ಬಾನಂದೂರು ಕೆಂಪಯ್ಯ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೀಲ್ಸ್ ಕಾಲದಲ್ಲೂ ಚಿತ್ರಮಂದಿರ ನಿರ್ಮಾಣ ಧೈರ್ಯದ ಕೆಲಸ
ಆಟೋ ನಿಲ್ದಾಣ ನಿರ್ಮಾಣ ಸಾಮಗ್ರಿಗಳ ತೆರವು: ಆಟೋ ಚಾಲಕರ ಸಂಘ ಆಕ್ರೋಶ