ಸಮಾಜದಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಲಿ: ಪುರುಷೋತ್ತಮಾನಂದ ಶ್ರೀಗಳು

KannadaprabhaNewsNetwork |  
Published : Apr 21, 2025, 12:54 AM IST
ಫೋಟೋ: 20 ಜಿಎಲ್ಡಿ2:  ತಾಲೂಕಿನ ಪರ್ವತಿ ಗ್ರಾಮದಲ್ಲಿ ಶ್ರೀ ಭಗೀರಥ ಮಹಾಋಷಿ ಜಯಂತ್ಯೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಆಡಂಬರದ, ದುಂದುವೆಚ್ಚದ ಮದುವೆಗಾಗಿ ಸಾಲ ಮಾಡಿ ಜೀವನಪೂರ್ತಿ ತೊಂದರೆ ಪಡಬೇಕಾಗುತ್ತದೆ. ಸಾಮೂಹಿಕ ವಿವಾಹ ಮಾಡುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪಾಲಕರ ಆರ್ಥಿಕ ಹೊರೆ ಇಳಿಸುತ್ತವೆ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದ ಪುರಿ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಆಡಂಬರದ, ದುಂದುವೆಚ್ಚದ ಮದುವೆಗಾಗಿ ಸಾಲ ಮಾಡಿ ಜೀವನಪೂರ್ತಿ ತೊಂದರೆ ಪಡಬೇಕಾಗುತ್ತದೆ. ಸಾಮೂಹಿಕ ವಿವಾಹ ಮಾಡುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪಾಲಕರ ಆರ್ಥಿಕ ಹೊರೆ ಇಳಿಸುತ್ತವೆ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದ ಪುರಿ ಶ್ರೀಗಳು ಹೇಳಿದರು.

ಸಮೀಪದ ಪರ್ವತಿ ಗ್ರಾಮದಲ್ಲಿ ರಾಜಋಷಿ ಭಗೀರಥ ಉಪ್ಪಾರರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಮಹಾಋಷಿ ಜಯಂತ್ಯೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಮೂಹಿಕ ಮದುವೆಗಳು ಬಡವರಿಗೆ ವರದಾನವಾಗಿದ್ದು, ಇವು ಭಾಗ್ಯವಂತರ ಮದುವೆಗಳು. ಸಮಾಜದಲ್ಲಿ ಸಾಮೂಹಿಕ ಮದುವೆಗಳು ಹೆಚ್ಚುಹೆಚ್ಚು ನಡೆಯಬೇಕು. ನವದಂಪತಿಗಳು ದಾಂಪತ್ಯ ಜೀವನದಲ್ಲಿ ಪರಸ್ಪರ ಅರಿತುಕೊಂಡು ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕು ಸಾಗಿಸಬೇಕು. ಉಪ್ಪಾರ ಸಮಾಜ ಬಾಂಧವರು ಸಾಮೂಹಿಕ ಮದುವೆ ಸಮಾರಂಭ ಹಮ್ಮಿಕೊಂಡು ಬಡವರಿಗೆ ನೆರವಾಗಿದ್ದು ಶ್ಲಾಘನೀಯ. ರಾಜಋಷಿ ಭಗೀರಥ ಮಹರ್ಷಿಗಳ ಜಯಂತಿಯಂದು ನವದಾಂಪತ್ಯಕ್ಕೆ ಕಾಲಿಟ್ಟ ನೀವು,ಶರಣರ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಂತೋಷದಿಂದ ಜೀವನ ನಡೆಸಿರಿ ಎಂದು ಹಾರೈಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ನವದಾಂಪತ್ಯಕ್ಕೆ ಕಾಲಿಟ್ಟಿರುವ ನವದಂಪತಿಗಳು ಒಂದಾಗಿ, ಹಿರಿಯ ಮಾರ್ಗದರ್ಶನದಲ್ಲಿ ಸುಂದರವಾದ ಬದುಕು ಕಟ್ಟಿಕೊಳ್ಳಬೇಕು. ಉತ್ತಮ ಸಂಸ್ಕಾರವಂತರಾಗಿ ಸಮಾಜದಲ್ಲಿ ಬದುಕಿಬಾಳಬೇಕು. ನಿಮ್ಮ ಜೀವನ ಸುಖಕರವಾಗಿ ಬೆಳಯಲಿ ಎಂದು ಹಾರೈಸಿದರು.

ಐದು ಜೋಡಿ ವಧುವರರು ನವಜೀವನಕ್ಕೆ ಕಾಲಿಟ್ಟರು. ಗುರುಸಿದ್ದೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಹೊಸೂರಿನ ಗುರುಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ರಮೇಶ ಬೂದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮಹಾಂತಯ್ಯ ಗಣಾಚಾರಿ, ಕರವೇ ಅಧ್ಯಕ್ಷ ರವಿ ಅಂಗಡಿ, ಹೇಮಂತ ಮಲ್ಹಾರ, ಚಂದ್ರು ಪಟ್ಟಣಶೆಟ್ಟಿ, ಅನ್ವರಖಾನ ಪಠಾಣ, ಆಸಂಗೆಪ್ಪ ನಕ್ಕರಗುಂದಿ, ಮುತ್ತಣ್ಣ ಕಳ್ಳಿಗುಡ್ಡ, ಸುಭಾಷಚಂದ್ರ ಗೌಡರ, ಮರಿಯಪ್ಪ ತೋಗುಣಶಿ, ಗ್ರಾಪಂ ಸದಸ್ಯೆ ಜ್ಯೋತಿ ದಾಸರ, ಸಚಿನ ಗಾಣಿಗೇರ, ಪುಂಡಲೀಕ ಉಪ್ಪಾರ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ರೂಪಾ ಅಂಗಡಿ ಹಾಗೂ ರಾಜಋಷಿ ಭಗೀರಥ ಉಪ್ಪಾರರ ಸಂಘ ಹಾಗೂ ಸಮಾಜ ಬಾಂಧವರು, ಗ್ರಾಮಸ್ಥರು, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''