ಹುಬ್ಬಳ್ಳಿ:
ಅವರು ಇಲ್ಲಿನ ಕಿಮ್ಸ್ನಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಹಾಗೂ ಕಿಮ್ಸ್ ವತಿಯಿಂದ ಆಯೋಜಿಸಿದ್ದ ಡಾ. ಪ್ರಹ್ಲಾದ ಅಗಸನಕಟ್ಟೆ ಕಥಾ ಬಹುಮಾನ ಪ್ರದಾನ ಸಮಾರಂಭದಲ್ಲಿ ಯುವ ಬರಹಗಾರ ಸಂಜಯ್ ಚಿತ್ರದುರ್ಗ ಅವರ ದ್ಯಾಮಜ್ಜಿ ಪುರಾಣ ಕಥೆಗೆ ಬಹುಮಾನ ವಿತರಿಸಿ ಮಾತನಾಡಿದರು.
ಬರವಣಿಗೆಕಾರರಿಗೂ ಮತ್ತು ಓದುಗರಿಗೂ ಇಂದು ಸಂಪರ್ಕ ಸಂವಹನ ಇಲ್ಲದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಮೋಜಿಯಂತಹ ಚಿತ್ರಗಳು ಬಂದು ಭಾಷೆಯಿಂದ ನಾವು ದೂರ ಉಳಿಯುವಂತಾಗುತ್ತಿದೆ. ಇದರಿಂದ ಕನ್ನಡ ಭಾಷೆ, ಬರಹಗಾರರಿಗೆ ತೊಂದರೆಯಾಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಆರ್ಥೈಸಿಕೊಳ್ಳಬೇಕಿದೆ. ಇನ್ನು ಮುಂದಾದರೂ ಯುವ ಬರಹಗಾರರು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಕರೆ ನೀಡಿದರು.ಡಾ. ಪ್ರಹ್ಲಾದ ಅಗಸನಕಟ್ಟೆ ನಮ್ಮ ಮನೆಯವರೊಂದಿಗೆ ಆಪ್ತರಾಗಿದ್ದರು. ಸರಳವಾಗಿದ್ದರೂ ವೈಚಾರಿಕತೆಯಿಂದ ಗಟ್ಟಿಯಾಗಿದ್ದರು. ಅವರ ಬರವಣಿಗೆಯಲ್ಲಿ ತಾತ್ವಿಕತೆ, ಸಮಾಜ ಕಟ್ಟುವಿಕೆ ನೆಲೆಯೂರಿತ್ತು. ಅಗಸನಕಟ್ಟೆ ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಸಂಶೋಧನಾ ಕೃತಿ ಓದಬೇಕು ಎಂದರು.
ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಕನ್ನಡ ಕಾರ್ಯಕ್ರಮಗಳು ನಮ್ಮ ಸಂಸ್ಥೆಯಲ್ಲಿ ಹೆಚ್ಚಾಗಲಿ. ವಿದ್ಯಾರ್ಥಿಗಳಿಗೂ ಕನ್ನಡದ ಅರಿವು ಮೂಡುವಂತಾಗಲಿ ಎಂದರು.
ಕವಿ ಮಹಾಂತಪ್ಪ ನಂದೂರ ಡಾ. ಪ್ರಹ್ಲಾದ ಅವರ ಕಾವ್ಯ ಕುರಿತು ಮಾತನಾಡಿದರು. ವಿಜಯಾ ಅಗಸನಕಟ್ಟೆ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ಅಡ್ನೂರ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ಸಾಹಿತ್ಯ ವೇದಿಕೆಯ ಪ್ರಮುಖರಾದ ಸುನಂದಾ ಕಡಮೆ, ಡಾ. ಸಿದ್ದೇಶ್ವರ ಕಟಕೋಳ, ಡಾ. ಬಸು ಬೇವಿನಗಿಡದ, ಚನ್ನಪ್ಪ ಅಂಗಡಿ ಸೇರಿದಂತೆ ಹಲವರಿದ್ದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು.