ಅಸೂಯೆಯಿಂದ ಬದುಕು ಹಸನಾಗದು

KannadaprabhaNewsNetwork |  
Published : Sep 14, 2025, 01:04 AM IST
13ಕೆಪಿಎಲ್23 ಕೊಪ್ಪಳ ತಾಲೂಕಿನಡೊಂಬರಳ್ಳಿ ಗ್ರಾಮದಲ್ಲಿ ನಡೆದ ಪುರಾಣ ಮಹಾಮಂಗಲದ ಕಾರ್ಯಕ್ರಮ. | Kannada Prabha

ಸಾರಾಂಶ

ಅವರಿವರ ಸಾಧನೆ ನೋಡಿ, ನಾವು ಅವರ ಸಾಧನೆಯ ಹಾದಿ ತುಳಿಯಬೇಕು. ಆದರೆ, ನಾವು ಕೊರಗುತ್ತಾ ಕುಳಿತುಕೊಳ್ಳುತ್ತೇವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅವರವರ ಬದುಕು ಅವರಿಗೆ, ನಮ್ಮ ಬದುಕು ನಾವು ಎಂದು ನೆಮ್ಮದಿಯ ಜೀವನ ನಡೆಸಬೇಕು.

ಕೊಪ್ಪಳ:

ಅಕ್ಕಪಕ್ಕದವರ ಬೆಳವಣಿಗೆ ನೋಡಿ, ಅಸೂಯೇಪಟ್ಟರೆ ಬದುಕು ಹಸನಾಗದು. ಅದರಿಂದ ಅವಸಾನವಾಗುತ್ತದೆ ಎಂದು ಕುಕನೂರು ಅನ್ನದಾನೀಶ್ವರ ಶಾಖಾ ಮಠದ ಡಾ. ಮಹದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಶ್ರೀಶಂಕರಲಿಂಗಜ್ಜನ 41ನೇ ಪುಣ್ಯತಿಥಿ ನಿಮಿತ್ತ ಹಮ್ಮಿಕೊಂಡಿದ್ದ ಪುರಾಣಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅವರಿವರ ಸಾಧನೆ ನೋಡಿ, ನಾವು ಅವರ ಸಾಧನೆಯ ಹಾದಿ ತುಳಿಯಬೇಕು. ಆದರೆ, ನಾವು ಕೊರಗುತ್ತಾ ಕುಳಿತುಕೊಳ್ಳುತ್ತೇವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅವರವರ ಬದುಕು ಅವರಿಗೆ, ನಮ್ಮ ಬದುಕು ನಾವು ಎಂದು ನೆಮ್ಮದಿಯ ಜೀವನ ನಡೆಸಬೇಕು ಎಂದರು.

ದೇವರು ನಮಗೆ ಏನು ಕರುಣಿಸಿದ್ದಾನೆ, ಅದನ್ನು ಆನಂದಿಸಬೇಕು. ಅನುಭವಿಸಬೇಕು. ಅದು ಬಿಟ್ಟು ಬೇರೆಯವರ ಬದುಕನ್ನು ನೋಡುತ್ತಾ ಕುಳಿತರೇ ಅದರಿಂದ ಏನು ಪ್ರಯೋಜನವಾಗವುದಿಲ್ಲ ಎಂದರು.ಪ್ರತಿಯೊಬ್ಬರಿಗೂ ದೇವರು ಸಮಯವನ್ನು ಅಷ್ಟೇ ನೀಡಿದ್ದಾರೆ. ಹೀಗಾಗಿ, ಸಮಯ ಅಮೂಲ್ಯವಾಗಿದ್ದು, ಅದನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮೈನಳ್ಳಿ-ಬಿಕನಳ್ಳಿ ಗ್ರಾಮದ ಉಜ್ಜಯನಿ ಶಾಖಾಮಠದ ಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ, ಶರಣರ ತತ್ವ ಅರಿತು ನಡೆಯಬೇಕು. ಬದುಕಿನಲ್ಲಿ ಹಿರಿಯರು, ಗುರುಗಳು ಕಲಿಸಿದ ಪಾಠ ಅಳವಡಿಸಿಕೊಂಡು ಮುನ್ನಡೆದರೇ ಬದುಕು ಬಂಗಾರವಾಗುತ್ತದೆ. ಶರಣರ ತತ್ವ ಅರಿಯಲು ಇಂಥ ಪುರಾಣದಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ಅದರಲ್ಲೂ ಡೊಂಬರಳ್ಳಿ ಗ್ರಾಮದಲ್ಲಿ ಜಾಗೃತ ಮನಸ್ಸುಗಳು ಇರುವುದರಿಂದ ಸಾಕಷ್ಟು ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.

ಡೊಂಬರಳ್ಳಿ ಗ್ರಾಮದಲ್ಲಿ ಬಂದು ನೆಲೆಸಿದ್ದ ಶಂಕರಲಿಂಗಜ್ಜನ ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು.

ಮೆರವಣಿಗೆ:

ಪುರಾಣ ಮಹಾಮಂಗಲ ನಿಮಿತ್ತ ಶಂಕರಲಿಂಗಜ್ಜನ ಭಾವಚಿತ್ರ ಮೆರವಣಿಗೆ ಶನಿವಾರ ವಿಜೃಂಭಣೆಯಿಂದ ನೆರವೇರಿತು. ವಾದ್ಯ, ವೃಂದಗಳಿಂದ ಮೆರವಣಿಗೆಗೆ ಕಳೆ ಹೆಚ್ಚಾಗಿರುವುದು ಕಂಡು ಬಂದಿತು. ಬಿ.ಎಸ್. ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಹಿರಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’