ದಾವಣಗೆರೆ: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ವತಿಯಿಂದ ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯುಬ್, ಪ್ರಧಾನ ಕಾರ್ಯದರ್ಶಿ ಎಚ್.ಹರೀಶ್, ಮಹಾನಗರ ಪಾಲಿಕೆ ಸದಸ್ಯರಾದ ಎಲ್.ಎಂ.ಎಚ್.ಸಾಗರ್, ಅಲ್ಪಸಂಖ್ಯಾತರ ಅಧ್ಯಕ್ಷ ಎಂ.ಕೆ.ಕೊಡಪಾನ ದಾದಾಪೀರ್, ಬಾಪೂಜಿ ಅಂಜಿನಪ್ಪ, ಗೌರಮ್ಮ, ಶಂಕುತಲಮ್ಮ, ಶಾಂತಕ್ಕ, ಗಿರಿಜಮ್ಮ, ಪೂಜಾ, ಶಾಂತಣ್ಣ, ಅಕ್ಬರ್ ಭಾಷಾ, ಫಯಾಜ್ ಅಹಮದ್ ಸೇರಿದಂತೆ ಇನ್ನಿತರರಿದ್ದರು.