ಧಾರವಾಡ ಪ್ರತ್ಯೇಕ ಪಾಲಿಕೆಗೆ ಲಿಂಗಾಯತ ಅಭಿವೃದ್ಧಿ ಸಂಸ್ಥೆ ಬೆಂಬಲ

KannadaprabhaNewsNetwork |  
Published : May 21, 2026, 02:15 AM IST
ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಅಂಗ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬೆಂಬಲಿಸಿ ಪತ್ರ ನೀಡಿದರು. | Kannada Prabha

ಸಾರಾಂಶ

ಪ್ರತ್ಯೇಕ ಪಾಲಿಕೆಯಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ. ದಾಖಲಾತಿ ತಿದ್ದುಪಡಿ ಸೇರಿದಂತೆ ಪ್ರಮುಖ ಕೆಲಸ-ಕಾರ್ಯಗಳಿಗೆ ಹುಬ್ಬಳ್ಳಿಗೆ ಹೋಗುವುದು ತಪ್ಪಿ ಸ್ಥಳೀಯವಾಗಿ ಕೆಲಸಗಳು ಶೀಘ್ರ ಆಗಲಿವೆ.

ಧಾರವಾಡ:

ಇಲ್ಲಿಯ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಅಂಗ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬೆಂಬಲಿಸಿ ಸಂಸ್ಥೆಯ ಟೌನ್‌ಹಾಲ್‌ನಿಂದ ಜಗ್ಗಲಗಿ ಮೇಳದೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಮಾತನಾಡಿ, ಪ್ರತ್ಯೇಕ ಪಾಲಿಕೆಯಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ. ದಾಖಲಾತಿ ತಿದ್ದುಪಡಿ ಸೇರಿದಂತೆ ಪ್ರಮುಖ ಕೆಲಸ-ಕಾರ್ಯಗಳಿಗೆ ಹುಬ್ಬಳ್ಳಿಗೆ ಹೋಗುವುದು ತಪ್ಪಿ ಸ್ಥಳೀಯವಾಗಿ ಕೆಲಸಗಳು ಶೀಘ್ರ ಆಗಲಿವೆ. ಸಮಯ ಹಾಗೂ ಹಣದ ಉಳಿತಾಯ ಆಗಲಿದೆ ಎಂದರು. ಕನ್ನಡ ನಾಡು-ನುಡಿಯ, ನಗರದ ಅಭಿವೃದ್ಧಿ ವಿಷಯವಾಗಿ ಯಾವುದೇ ಹೋರಾಟಗಳಿದ್ದರೂ ಸಂಸ್ಥೆಯು ತನು, ಮನ, ಧನದಿಂದ ಪಾಲ್ಗೊಳಲಿದೆ ಎಂದರು.

ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಎಸ್.ಎಂ. ಅಗಡಿ, ಸದಸ್ಯರಾದ ಬಿ.ಎಸ್. ತಾಳಿಕೋಟಿ, ಎಂ.ಆರ್. ಇಂಡಿ, ಎ.ಎಸ್. ಹಿರೇಮಠ, ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ, ಪ್ರಾಚಾರ್ಯ ಎಸ್.ಎಂ. ಬಮ್ಮನಗೌಡರ, ಸವಿತಾ ಪಾಟೀಲ, ಭುವನೇಶ್ವರಿ ದಂಡಿನ, ಡಿ.ಬಿ. ಹೊಂಬಳ, ಪ್ರಾಧ್ಯಾಪಕ ಅಭಿಷೇಕ ಯಮನೂರ, ಅಭಿಷೇಕ ಜಹಗೀರದಾರ, ಟಿಪ್ಪುರಾಜ, ಮಹಾಂತೇಶ ಮೂಲ್ಕಿಪಾಟೀಲ, ನಾಗರಾಜ ಗೊಂದಿ, ಕಿರಣ ಬಣಕಾರ, ಎಸ್.ಎಂ. ಹೂಗಾರ, ಸಾವಿತ್ರಿ ಪಾಟೀಲ, ಸ್ನೇಹಾ ವಾಲಗಳ್ಳಿ, ಪ್ರಭಾವತಿ ಗದಗಕರ, ಎಲ್.ಎಸ್. ತಳ್ಳಿ, ಮಹಾಂತೇಶ ಕ್ವಾಟಿ, ಸೋಮಶೇಖರ ಕರಡಿಗುಡ್ಡ, ರಾಘವೇಂದ್ರ ಗುಡೆಣ್ಣವರ, ಮೃತ್ಯುಂಜಯ ಅಮರಗೋಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾಪಟುಗಳು ತಾಲೂಕಿಗೆ ಕೀರ್ತಿ ಹೆಚ್ಚಿಸಿ
ಪುರಸಭೆ ಅಧ್ಯಕ್ಷರ ವಿರುದ್ಧ ಮುಖ್ಯಾಧಿಕಾರಿ ಪ್ರತಿಭಟನೆ