-ಅ.13ರಿಂದ ಸೆ.13ರ ವರೆಗೆ ‘ವ್ಯಸನ ಮುಕ್ತ ಬದುಕಿಗಾಗಿ ವಚನ ಶ್ರವಣ’-2026 ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸಿಂಧನೂರು
ಸ್ಥಳೀಯ ಬಸವಕೇಂದ್ರ, ಮಹಿಳಾ ಬಸವ ಕೇಂದ್ರ, ಬಸವ ಚಾರಿಟೇಬಲ್ ಟ್ರಸ್ಟ್ ಮತ್ತು ವಿವಿಧ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅ.13ರಿಂದ ಸೆ.13ರ ವರೆಗೆ ಒಂದು ತಿಂಗಳ ಕಾಲ ‘ವ್ಯಸನ ಮುಕ್ತ ಬದುಕಿಗಾಗಿ ವಚನ ಶ್ರವಣ’-2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ ಹೇಳಿದರು.ಅವರು ಬುಧವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದರು. ಯುವ ಸಮುದಾಯ ಹಲವು ಬಗೆಯ ವ್ಯಸನಗಳಿಂದ ಬದುಕನ್ನ ಹಾಳು ಮಾಡಿಕೊಳ್ಳುತ್ತಿರುವ ಸಂಗತಿಗಳು ಪ್ರತಿನಿತ್ಯ ನಡೆಯುತ್ತಿವೆ. ಇದರ ದುಷ್ಪರಿಣಾಮದಿಂದ ಸಮಾಜದಲ್ಲಿ ಸಂಕಟಗಳು ತಲೆದೋರುತ್ತಿವೆ.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ಕುರುಕುಂದಿ ಮಾತನಾಡಿ ಅಂತರAಗದ ಪ್ರಜ್ಞೆಯನ್ನು ವಿಸ್ತರಿಸುವುದರಿಂದ ದೇವ ಸ್ವರೂಪವಾಗಿ ಸೂಕ್ತವಾಗಿ ಅಡಗಿರುವ ಆತ್ಮಭಾವ ಅನಾವರಣಗೊಳ್ಳುತ್ತದೆ. ಆ ಮೂಲಕ ಸಹೋದರತೆ, ಭಾತೃತ್ವ ಮತ್ತು ಸೌಹಾರ್ದತೆಯನ್ನು ಬೆಳೆಸಲು ವಚನ ಶ್ರವಣ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು.
ಬಸವ ಕೇಂದ್ರ ಮುಖಂಡರಾದ ಹೆಚ್.ಜಿ.ಹಂಪಣ್ಣ, ಗುಂಡಪ್ಪ ಬಳಿಗಾರ, ಚಂದ್ರೇಗೌಡ ಹರೇಟನೂರು, ಅಮರೇಶ ಪಗಡದಿನ್ನಿ, ಚಂದ್ರುಗೌಡ ಚನ್ನಳ್ಳಿ ಉಪಸ್ಥಿತರಿದ್ದರು.
12ಕೆಪಿಎಸ್ಎನ್ಡಿ1: ಕರೇಗೌಡ ಕುರುಕುಂದಿ