ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಕೈಗಾರಿಕಾ ಪ್ರದೇಶದ ಅರ್ಫದ್ ಹುಸೇನ್ ಕಿಂಗ್ ಟಿಂಬರ್ಸ್ ಅಂಡ್ ಟ್ರೇಡರ್ಸ್ ಗೋದಾಮಿಗೆ ೧೬ ಚಕ್ರಗಳಿರುವ ಲಾರಿಯಲ್ಲಿ ೨೫ ಟನ್ ಅಕೇಶಿಯಾ ಮರದ ತುಂಡುಗಳನ್ನು ತುಂಬಿಕೊಂಡು ಬಂದು ಇಳಿಸುತ್ತಿದ್ದ ವೇಳೆ ಕೆಲವರು ಮೊಬೈಲ್ನಲ್ಲಿ ಫೋಟೋ ತೆಗೆಯಲು ಯತ್ನಿಸಿದಾಗ ಮರವನ್ನು ಇಳಿಸುತ್ತಿದ್ದವರೆಲ್ಲಾ ಲಾರಿಬಿಟ್ಟು ಓಡಿಹೋಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿದಾಗ ಇದನ್ನು ಬೀದರ್ನಿಂದ ತಂದಿದ್ದಾರೆ. ಇದಕ್ಕೆ ಪರವಾನಗಿ ಇದೆ ಎಂದು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕೆಲವರು ಬೀದರ್ನಿಂದ ಇಲ್ಲಿಗೆ ತರಲು ಕಾರಣ ಏನು. ಈ ಬೆಲೆಬಾಳುವ ಅಕೇಶಿಯಾ ಇಲ್ಲಿಂದ ಎಲ್ಲಿಗೆ ಹೋಗುತ್ತದೆ. ಇಲ್ಲಿಂದ ಈ ಬೆಲೆಬಾಳುವ ಮರ ಹೊರಹೋಗಲು ಪರವಾನಗಿ ನೀಡಲು ಇಲ್ಲಿನ ಅರಣ್ಯ ಇಲಾಖೆಯವರಿಗೆ ಅಧಿಕಾರ ಇದೆಯೇ ಎಂದರೆ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಇಲ್ಲ ಎಂದು ತಿಳಿಸಿದ್ದಾರೆ. ಇಂತಹ ಮರದ ಲಾರಿಗಳು ಇದುವರೆವಿಗೂ ಅನೇಕ ಬಾರಿ ಇಲ್ಲಿಂದ ಹೋಗಿದ್ದು ಈ ಬೆಲೆಬಾಳುವ ಮರಕ್ಕೆ ಕಾಡುಮರ ಎಂದು ಪರವಾನಗಿ ಕೊಟ್ಟು ಕಳುಹಿಸುತ್ತಿದ್ದಾರೆ ಎಂದಿದ್ದಾರೆ.