ಹುಬ್ಬಳ್ಳಿ:
ನವನಗರದ ಹು-ಧಾ ಪೊಲೀಸ್ ಆಯುಕ್ತಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಬಳಿಕ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈಚೆಗೆ ನಗರದಲ್ಲಿ ಹಿಂದೂ ಯುವತಿಗೆ ದೌರ್ಜನ್ಯವೆಸಗಿದ ಆರೋಪಿ ಸಮೀರ್ ಮುಲ್ಲಾನ ಸಹೋದರಿ ಹನಿಟ್ರ್ಯಾಪ್ ಮಾಡುತ್ತಿದ್ದಾಳೆ. ಅವಳಿಗೆ ಕೇರಳ ನಂಟಿದೆ. ಈ ಹಿಂದೆ ಹಲವು ಬಾರಿ ಕೇರಳಕ್ಕೆ ಹೋಗಿರುವ ಕುರಿತು ಮಾಹಿತಿಯಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಸಮೀರ್ನ ಇಡೀ ಕುಟುಂಬದ ಹಿಂದೆ ಇಸ್ಲಾಮಿಕ್ ಶಕ್ತಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.ಕೇಶ್ವಾಪುರದ ಹೋಟೆಲೊಂದರ ಮಾಲೀಕನು ಮದುವೆ ಮಾಡಿಸುವುದಾಗಿ ಹೇಳಿ ದುಡ್ಡು ಕೊಟ್ಟು ಲವ್ ಜಿಹಾದ್ಗೆ ಪ್ರೋತ್ಸಾಹಿಸುತ್ತಿದ್ದಾನೆ. ಕೇರಳ ಲವ್ ಜಿಹಾದ್ಗೂ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೂ ಸಂಬಂಧವಿದ್ದು ಈ ಪ್ರಕರಣಗಳನ್ನು ಎನ್ಐಎಗೆ ಒಪ್ಪಿಸಬೇಕು ಎಂದಿರುವ ಮುತಾಲಿಕ್, ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತಿದ್ದು ನೈಜ ಆರೋಪಿಗಳನ್ನು ಬಂಧಿಸಿದೆ ಹಿಂದೂಗಳನ್ನೇ ಬಂಧಿಸಿ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲವ್ ಜಿಹಾದ್ಗೆ ಸಂಬಂಧಪಟ್ಟಂತೆ ನಮ್ಮ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 60 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂಧನ ಆಗುವುದಿದ್ದರೆ ನನ್ನನ್ನೇ ಮೊದಲ ಎ1 ಆರೋಪಿ ಮಾಡಿ ಬಂಧಿಸಬೇಕು. ನಮ್ಮ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣವನ್ನು ವಾರದೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.