ಮಾಲೂರು:
ತಾಲೂಕಿನ ಮಿಂಡಹಳ್ಳಿ ಕೆರೆ ಬಳಿ ಕಳೆದ ರಾತ್ರಿ ಕೊಲೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಯೋಗಿನಿ (೨೧) ಕೊಲೆಯಾದ ಮಹಿಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿ ಮೂಲದ ಗಣೇಶ್ ಎಂಬಾತನೆ ಕೊಲೆ ಮಾಡಿ ಸದ್ಯ ಪೊಲೀಸರಿಗೆ ಶರಣಾಗಿದ್ದಾನೆ.
ಎರಡು ವರ್ಷಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಯೋಗಿನಿ ಹಾಗೂ ಗಣೇಶ್ ಕಳೆದ ೨ ವರ್ಷಗಳಿಂದಲೂ ಪ್ರತಿನಿತ್ಯ ಕಿತ್ತಾಟ, ಅಲ್ಲದೆ ಇತ್ತೀಚೆಗೆ ಸಂಸಾರದಲ್ಲಿ ಗಲಾಟೆ ಮಾಡಿಕೊಂಡು ಹೆಂಡತಿ ಮೇಲೆ ಅನುಮಾನಪಡುತ್ತಿದ್ದ ಎನ್ನಲಾಗಿದೆ.ಕಳೆದ ಒಂದು ವಾರದಿಂದ ತವರು ಮನೆಯಲ್ಲೆ ಇದ್ದ ಯೋಗಿನಿ ನಿನ್ನೆ ಟಾಟಾ ಕಂಪನಿಗೆ ಇಂಟರ್ ವ್ಯೂಗೆ ಬಂದಿದ್ದಾಳೆ. ಈ ವೇಳೆ ಆಕೆಯನ್ನ ಕರೆಸಿಕೊಂಡು ಕೊಲೆ ಮಾಡಿ ಬಳಿಕ ಯೋಗಿನಿ ತಾಯಿ ಕಲ್ಪನಾಗೆ ತಿಳಿಸಿದ್ದಾನೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಬರುತ್ತಿದ್ದ ಯೋಗಿನಿಯನ್ನು ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ ಬಳಿಕ ಕೆರೆ ಬಳಿ ಕೊಲೆ ಮಾಡಿದ್ದೇನೆ ಹೋಗಿ ನೋಡಿ ಎಂದು ಅವನೆ ಹೇಳಿದ್ದಾನೆ.