ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಮಂಗಳವಾರ ಹುಚ್ಚು ನಾಯಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇನ್ನೂ ಮೂರ್ನಾಲ್ಕು ಜನರ ಮೇಲೂ ದಾಳಿ ನಡೆಸಿದೆ.
ಹೊಸಪೇಟೆಯಲ್ಲೂ ನಾಯಿ ಹಾವಳಿ
ನಗರದ ಎಂ.ಪಿ. ಪ್ರಕಾಶ್ ನಗರ, ಸಿದ್ದಲಿಂಗಪ್ಪ ಚೌಕಿ ಹಾಗೂ ಚಿತ್ತವಾಡ್ಗಿಯಲ್ಲಿ ಸೋಮವಾರ ಬೀದಿ ನಾಯಿಗಳು ದಾಳಿ ಮಾಡಿದ್ದು, ಮಕ್ಕಳು ಸೇರಿದಂತೆ ಆರೇಳು ಜನರು ಗಾಯಗೊಂಡಿದ್ದಾರೆನಗರದ ಸಿದ್ದಲಿಂಪ್ಪ ಚೌಕಿಯ ಮಂಜುನಾಥ (23), ಚಿತ್ತವಾಡ್ಗಿಯ ಚಂದ್ರಿಕಾ (22), ಬಿಟಿಆರ್ ನಗರದ ಮುಬಾರಕ್ (14), ಎಂ.ಪಿ. ಪ್ರಕಾಶ್ ನಗರದ ಭಾವನ (13), ವಿಹಾನ್ (5), ನಯನ (5) ಎಂಬರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ನಗರದಲ್ಲಿ ಒಂದೇ ದಿನಕ್ಕೆ ಮಕ್ಕಳು ಸೇರಿದಂತೆ ಆರೇಳು ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಇನ್ನು ಸಾಕು ಪ್ರಾಣಿಗಳ ಮೇಲೂ ನಾಯಿಗಳು ದಾಳಿ ನಡೆಸಿವೆ. ಹಾಗಾಗಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕ್ರಮ
ಧರ್ಮಸಾಗರ ಗ್ರಾಮ ಸೇರಿದಂತೆ ಹೊಸಪೇಟೆ ನಗರದಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಮಕ್ಕಳ ಮೇಲೆಯೇ ನಾಯಿಗಳು ದಾಳಿ ಮಾಡುತ್ತಿವೆ.ಸಿ.ಆರ್. ಭರತ್ಕುಮಾರ, ಯುವ ಮುಖಂಡರು, ಹೊಸಪೇಟೆ.