ಮಾಧವ ಗಾಡ್ಗೀಳ್ ವರದಿ ಪುನರ್ ವಿಮರ್ಶೆ ಅಗತ್ಯ: ಮನುಜೋಗಿಬೈಲು

KannadaprabhaNewsNetwork |  
Published : Aug 13, 2024, 01:04 AM IST
್ುು | Kannada Prabha

ಸಾರಾಂಶ

ಮಾದವ ಗಾಡ್ಗೀಳ್ ವರದಿ ಪರಿಸರ ಸಂರಕ್ಷಣೆಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಇರುವ ಕೆಲ ಗೊಂದಲ ಮಯ ಅಂಶಗಳ ಪುನರ್ ಪರಿಶೀಲನೆ ಮಾಡಿ ಗೊಂದಲ ನಿವಾರಿಸಬೇಕು. ಹವಾಗುಣ ಬದಲಾವಣೆಯಿಂದ ಮಲೆನಾಡು ಭಾಗದಲ್ಲಿ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕೊಳೆ ರೋಗಗಳ ಹೆಚ್ಚಳ ದಂತಹ ಸಮಸ್ಯೆ ಮತ್ತು ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳಿಂದ ಭೂಮಿ, ಗುಡ್ಡಕುಸಿತ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆ.

ಶೃಂಗೇರಿ: ಹವಾಗುಣ ಬದಲಾವಣೆ ಪರಿಣಾಮಗಳು ಜಗತ್ತಿನಾದ್ಯಂತ ಗೋಚರಿಸುತ್ತಿದ್ದು ಮಲೆನಾಡು ಭಾಗದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಠಿಸುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ಮಾದವ ಗಾಡ್ಗೀಳ್ ವರದಿ ಪುನರ್ ವಿಮರ್ಷೆ ಅಗತ್ಯವಾಗಿದೆ ಎಂದು ಪರಿಸರ ವಿಜ್ಞಾನ ಉಪನ್ಯಾಸಕ ಮನು ಜೋಗಿಬೈಲು ಹೇಳಿದ್ದಾರೆ.

ಮಾದವ ಗಾಡ್ಗೀಳ್ ವರದಿ ಪರಿಸರ ಸಂರಕ್ಷಣೆಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಇರುವ ಕೆಲ ಗೊಂದಲ ಮಯ ಅಂಶಗಳ ಪುನರ್ ಪರಿಶೀಲನೆ ಮಾಡಿ ಗೊಂದಲ ನಿವಾರಿಸಬೇಕು. ಹವಾಗುಣ ಬದಲಾವಣೆಯಿಂದ ಮಲೆನಾಡು ಭಾಗದಲ್ಲಿ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕೊಳೆ ರೋಗಗಳ ಹೆಚ್ಚಳ ದಂತಹ ಸಮಸ್ಯೆ ಮತ್ತು ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳಿಂದ ಭೂಮಿ, ಗುಡ್ಡಕುಸಿತ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆ.

ಇವುಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇವುಗಳಿಂದ ಮಲೆನಾಡು ಉಳಿಸಿಕೊಳ್ಳಲು ಬದಲಾಗುತ್ತಿರುವ ಹವಾಗುಣಕ್ಕೆ ಹೊಂದಿಕೊಳ್ಳುವುದು ಮತ್ತು ಅದಕ್ಕೆ ಸೂಕ್ತ ಅಭಿವೃದ್ಧಿ ಮಾದರಿ ಅಳವಡಿಸುವುದು ಅಗತ್ಯ.ಇದನ್ನು ಸಾಧಿಸುವಲ್ಲಿ ಗಾಡ್ಗೀಳ್ ವರದಿಯಲ್ಲಿ ಅನೇಕ ಅಂಶಗಳು ಮಾರ್ಗದರ್ಶಕವಾಗಿದೆ. ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ವರದಿಯಲ್ಲಿನ ಕೆಲವು ಗೊಂದಲಗಳನ್ನು ಪರಿಹರಿಸಿದರೆ ಮಲೆನಾಡಿನ ಸಮಸ್ಯೆಗಳಿಗೆ ಗಾಡ್ಗೀಳ್ ವರದಿಯೇ ಸೂಕ್ತ ಪರಿಹಾರ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!