ಶಿವಾನಂದ ಗೊಂಬಿ
ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಕೊಲೆ, ಸುಲಿಗೆ, ದರೋಡೆ ಮಾಮೂಲಿ ಎಂಬಂತಾಗಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಇತಿಶ್ರೀ ಹಾಡಲು ವಿವಿಧ ಠಾಣೆಗಳಲ್ಲಿನ ಬರೋಬ್ಬರಿ 200ಕ್ಕೂ ಅಧಿಕ ಸಿಬ್ಬಂದಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಪೊಲೀಸ್ ಕಮಿಷನರೇಟ್ನ ಆಡಳಿತಕ್ಕೆ ನೂತನ ಕಮಿಷನರ್ ಈ ಮೂಲಕ ಚುರುಕು ಮುಟ್ಟಿಸಿದ್ದಾರೆ.
ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಮಹಾನಗರದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿದ್ದವು. ಇದರೊಂದಿಗೆ ಕಳೆದ ಆರೇಳು ತಿಂಗಳ ಹಿಂದೆ ಒಂದು ವಾರ ದಿನಕ್ಕೊಂದರಂತೆ ಕೊಲೆ ಪ್ರಕರಣಗಳು ನಗರದ ನಾಗರಿಕರ ನಿದ್ದೆ ಗೆಡಿಸಿದ್ದವು. ಇವಷ್ಟೇ ಅಲ್ಲದೇ, ಕೊಲೆಗೆ ಯತ್ನ, ಕಳ್ಳತನ, ಗಾಂಜಾ ಮಾರಾಟದಂತಹ ಪ್ರಕರಣಗಳು ಮಾಮೂಲಿ ಎಂಬಂತಾಗಿತ್ತು. ಎಲ್ಲರೂ ಪೊಲೀಸ್ ಕಮಿಷನರ್ರತ್ತ ಬೊಟ್ಟು ತೋರಿಸಲಾರಂಭಿಸಿದ್ದರು. ಸಂಘ ಸಂಸ್ಥೆಗಳು, ಸಾರ್ವಜನಿಕರು ಪೊಲೀಸ್ ಇಲಾಖೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು ಅಲ್ಲದೇ, ಕಮಿಷನರ್ ಬದಲಾವಣೆಗೆ ಪಟ್ಟು ಹಿಡಿದು ಪ್ರತಿಭಟನೆ ಕೂಡ ನಡೆದಿತ್ತು.ಕೊನೆಗೆ ಸರ್ಕಾರ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಡಿಸಿಪಿ, ಪಿಐ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿತ್ತು. ಬಳಿಕ ಕೆಲವೇ ದಿನಗಳಲ್ಲಿ ಕಮಿಷನರ್ರನ್ನು ಇಲ್ಲಿಂದ ಎತ್ತಂಗಡಿ ಮಾಡಿ ಎನ್. ಶಶಿಕುಮಾರ ಅವರನ್ನು ಕಳೆದ 10 ದಿನಗಳ ಹಿಂದೆಯಷ್ಟೇ ನಿಯೋಜಿಸಿತ್ತು.
ಈ ನಡುವೆ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಪೊಲೀಸ್ ಕಮಿಷನರೇಟ್ಗೆ ಖದರ್ ತರುವ ಕೆಲಸಕ್ಕೆ ಕೈ ಹಚ್ಚಿದ್ದಾರೆ. ಪ್ರತಿನಿತ್ಯ ಸ್ವತಃ ತಾವೇ ಫಿಲ್ಡಿಗಿಳಿದು ಒಂದು ಸುತ್ತು ಹಾಕುತ್ತಿದ್ದಾರೆ. ರೌಡಿಶೀಟರ್ ಪರೇಡ್, ಹಳೆ ಕಳ್ಳತನ, ಕೊಲೆ ಪ್ರಕರಣಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಗಳನ್ನೆಲ್ಲ ಮಾಡುತ್ತಿದ್ದಾರೆ.
203ಕ್ಕೂ ಅಧಿಕ ಜನರ ವರ್ಗ:
ಇದು ಕಾಯಂ ಆಗಲಿ: