ಶಾಸಕರು ಹೇಳಿದ್ದೇನು?- ಕಳೆದ ವರ್ಷ ಕೊನೆಯ ತಿಂಗಳಲ್ಲಿ ಟ್ಯಾಂಕರ್ ಬಳಸಿ ಕುಡಿಯುವ ನೀರು ಒದಗಿಸಲಾಗಿತ್ತು
- ಅಧಿಕಾರಿಗಳು ತಮ್ಮಲ್ಲಿ ಇರುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ತುರ್ತು ಕ್ರಮ ಕೈಗೊಳ್ಳಬೇಕು
- - - ಕನ್ನಡಪ್ರಭ ವಾರ್ತೆ ಹೊಸನಗರರಾಜ್ಯದಲ್ಲಿ ಈ ಬಾರಿ ಮಳೆ ತೀವ್ರತರದಲ್ಲಿ ಕೈ ಕೊಟ್ಟಿದೆ. ಪರಿಣಾಮ ಜನವರಿಯಿಂದಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಧಿಕಾರಿಗಳು ಈಗಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ಯಾವೂಬ್ಬ ವ್ಯಕ್ತಿಗೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಹಲವಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತಿದೆ. ಕಳೆದ ವರ್ಷ ಕೊನೆಯ ತಿಂಗಳಲ್ಲಿ ಟ್ಯಾಂಕರ್ ಬಳಸಿ ಕುಡಿಯುವ ನೀರು ಒದಗಿಸಲಾಗಿತ್ತು. ಭಾರೀ ಮಳೆ ಬೀಳುವ ಪ್ರದೇಶದಲ್ಲೂ ನೀರಿಗೆ ತತ್ವಾರ ಉಂಟಾಗಿತ್ತು. ಈ ಸಾರಿಯೂ ಬಾರಿ ಪ್ರಮಾಣದಲ್ಲಿ ಮಳೆ ಹಿನ್ನೆಡೆಯಾಗಿದೆ. ಕುಡಿಯುವ ನೀರು ಸಮಸ್ಯೆಯಾಗಿ ಕಾಡಲಿದೆ. ಹಾಗಾಗಿ, ಅಧಿಕಾರಿಗಳು ತಮ್ಮಲ್ಲಿ ಇರುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಹೊಸನಗರ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಿಗೂ ನೀರುಣಿಸಲು ಜೆ.ಜೆ.ಎಂ. ಯೋಜನೆಯೊಂದು ಪರಿಣಾಮಕಾರಿ ಯೋಜನೆ ಆಗಿದೆ. ಹಳ್ಳಿಗೂ ನೀರು ಸರಬರಾಜು ಮಾಡಲು ಯೋಜನೆಯಲ್ಲಿ ಅವಕಾಶವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಇದನ್ನು ತಾಲ್ಲೂಕಿನಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಪಿಡಿಒಗಳು ಯೋಜನೆಯ ಬಗ್ಗೆ ಹದ್ದಿನ ಕಣ್ಣಿಟ್ಟುಕಾಯಬೇಕು. ಯಾವುದೇ ರಾಜಿ ಪಂಚಾಯ್ತಿ, ಮರ್ಜಿಗೆ ಒಳಗಾಗಬಾರದು. ಯೋಜನೆ ಅನುಷ್ಟಾನದಲ್ಲಿ ಯಾವುದೇ ದೂರು ಬಂದರೂ ಪಿಡಿಒಗಳನ್ನು ಪ್ರಶ್ನೆ ಮಾಡಲಾಗುತ್ತದೆಎಂದು ಎಚ್ಚರಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರು ಅಗತ್ಯ ಇದ್ದಲ್ಲಿ ಖಾಸಗಿ ವ್ಯಕ್ತಿಗಳಿಂದ ನೀರು ಯರವಲು ಪಡೆದು ಟ್ಯಾಂಕರ್ ಮೂಲಕ ಸರಭರಾಜು ಮಾಡುವ ಕಾರ್ಯಕ್ರಮ ರೂಪಿಸಬೇಕು. ಮತ್ತೆ ನೀರು ಲಭ್ಯವಾಗುವ ಪ್ರದೇಶದಲ್ಲಿ ಬೋರ್ ಹೊಡೆಸಿ ನೀರು ಒದಗಿಸಬೇಕು ಎಂದು ಸಲಹೆ ನೀಡಿದರು.ಕಳೆದ ವರ್ಷ ನೀರಿಗೆ ಸಮಸ್ಯೆಆದ ಗ್ರಾಮಗಳಲ್ಲಿ ಮೊದಲುಜೆ.ಜೆ.ಎಂ ಯೋಜನೆ ಮಂಜೂರು ಆಗಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ತಹಸೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರಕುಮಾರ್, ಕುಡಿಯುವ ನೀರುಯೋಜನೆ ಎಇಇ ಶಿವಪ್ರಸಾದ್ ಇದ್ದರು.---------------------------
ಚಿತ್ರ:20ಎಚ್ಒಎಸ್1ಪಿ. ಹೊಸನಗರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಸಮಸ್ಯೆ ಕುರಿತ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಆರಗ ಜ್ಞಾನೇಂದ್ರ ಮಾಹಿತಿ ಪಡೆದರು.