ಕನ್ನಡಪ್ರಭ ವಾರ್ತೆ ಮಾಲೂರು
₹20 ಕೋಟಿ ವಿಶೇಷ ಅನುದಾನ
ಈಗಾಗಲೇ ಪಟ್ಟಣದಲ್ಲಿ ಅಲ್ಪಸಂಖ್ಯಾತರ ನಿಧಿಯ ಅಡಿಯಲ್ಲಿ ಬಿಡುಗಡೆಯಾಗಿರುವ 5 ಕೋಟಿ ವೆಚ್ಚದ ಸಿ.ಸಿ.ರಸ್ತೆಗಳು ಪಟ್ಟಣದ ಹಲವಡೆ ಪ್ರಾರಂಭವಾಗಿದೆ. ನಗರೋತ್ಧಾನ ಹಾಗೂ ಅಲ್ಪಸಂಖ್ಯಾತರ ನಿಧಿ ಅಡಿಯಲ್ಲಿ ಒಟ್ಟು 10 ಕೋಟಿ ಈಗಾಗಲೇ ಬಂದಿದ್ದು, ಹೆಚ್ಚುವರಿಯಾಗಿ ಇನ್ನೂ ವಿಶೇಷ ಅನುದಾನದಡಿಯಲ್ಲಿ 20 ಕೋಟಿ ರು.ಗಳ ಮಂಜೂರಾತಿಗೆ ಸರ್ಕಾರದಿಂದ ಹಸಿರು ನಿಶಾನೆ ತೋರಿಸಿದೆ ಎಂದರು.ಮೂಲಭತ ಸೌಕರ್ಯ:
ಇದಲ್ಲದೇ ಈ ಬಾರಿ ಬಜೆಟ್ನಲ್ಲಿ 35 ಕೋಟಿ ಮಂಜೂರಾಗಿದೆ. ಅದು ಬಂದ ಮೇಲೆ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಈ ಕಾಮಗಾರಿಗಳನ್ನು ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಮಾಡಲಾಗುತ್ತಿದ್ದೆ ಹೂರತು ಪಕ್ಷ ತಾರತಮ್ಯ ಇಲ್ಲ. ಈ ಬಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಪಟ್ಟಣ ಉದ್ದದ ರಸ್ತೆಯನ್ನು ತೆಗೆದುಕೊಳ್ಳಲಾಗುತ್ತಿದ್ದು, ಅವುಗಳನ್ನು ಮೂರು-ನಾಲ್ಕು ವಾರ್ಡ್ ಗಳನ್ನು ಒಳಗೂಳ್ಳಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪೌರಡಳಿತ ಇಲಾಖೆಯ ಎ.ಇ.ಇ.ಚಲಪತಿ ,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಪುರಸಭೆ ಸದಸ್ಯೆ ವಿಜಯಲಕ್ಷ್ಮಿ ,ಸದಸ್ಯರಾದ ಮುರಳಿ,ಶ್ರೀನಿವಾಸ್ ,ಹನುಮಂತರೆಡ್ಡಿ ,ಪುರಸಭೆ ಅಧಿಕಾರಿ ನಾಗರಾಜ್,ಗುತ್ತಿಗೆದಾರರು ಇದ್ದರು.