ಕನ್ನಡಪ್ರಭ ವಾರ್ತೆ ಅರಕಲಗೂಡು
ರೈತರು ಬೆಳೆ ಸಂರಕ್ಷಣೆ ಮಾಡಲು ಅಳವಡಿಸಿಕೊಂಡಿರುವ ವಿದ್ಯುತ್ ತಂತಿ ಬೇಲಿಯನ್ನು ದಾಟುವ ವೇಳೆ 25 ವರ್ಷದ ಗಂಡಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕೃಷಿ ಜಮೀನಿನಲ್ಲಿ ಪ್ರಾಣಬಿಟ್ಟಿದೆ.
ಶುಕ್ರವಾರ ರಾತ್ರಿ ಮರಿಯೊಂದಿಗೆ 2 ಆನೆಗಳು ನೆಲಬಳ್ಳಿ ಗ್ರಾಮದ ಸುತ್ತ ಮುತ್ತ ಆಹಾರವನ್ನು ಅರಸಿ ಸುತ್ತಾಡಿ ಹಲವು ಬೆಳೆಗಳನ್ನು ನಾಶಗೊಳಿಸಿದ್ದವು. ಇದೇ ಗ್ರಾಮದ ಪ್ರಕಾಶ್ ಎಂಬುವವರ ತೋಟದಲ್ಲಿ 80ಕ್ಕು ಅಧಿಕ ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿವೆ. ಮೂರು ನಾಲ್ಕು ದಿನಗಳಿಂದ ಬೈಸೂರು ಅರಣ್ಯದಲ್ಲಿ ಬೀಡುಬಿಟ್ಟಿದ್ದ ಆನೆಗಳ ಗುಂಪಿನ ಗಂಡಾನೆ ಇಂದು ಬೆಳಗಿನ ಜಾವ ಗೆಣಸು ಹೊಲದಲ್ಲಿ ಸಾವನ್ನಪ್ಪಿದೆ.ರೈತರ ಆಕ್ರೋಶ:
ರೈತರ ಮೇಲೆ ಕೇಸ್ ದಾಖಲಿಸಬೇಡಿ:
ಸ್ಥಳದಲ್ಲಿ ತಹಸೀಲ್ದಾರ್ ಸೌಮ್ಯ, ಅರಣ್ಯಾಧಿಕಾರಿಗಳಾದ ಯಶ್ಮಾ ಮಾಚಮ್ಮ, ಶಂಕರ್, ಕಂದಾಯ ಅಧಿಕಾರಿಗಳಾದ ಹರೀಶ್ ಇತರರು ಹಾಜರಿದ್ದರು. ಹಾಸನ ಪಶು ವೈಧ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ನೆಲಬಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಸಾವನ್ನಪ್ಪಿರುವ ಆನೆಯನ್ನು ನೋಡಲು ಜಮಾಯಿಸಿದ್ದರು.
ಆನೆ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎ.ಮಂಜುಅವರು ಆನೆ ಸಾವಿಗೆ ಕಂಬನಿ ಮಿಡಿದರು. ರೈತರು ಹಾಗೂ ಆನೆಗಳ ನಡುವಿನ ಸಂಘರ್ಷ ಹಲವಾರು ವರ್ಷಗಳಿಂದ ನಡೆಯುತ್ತಲೆ ಬರುತ್ತಿದೆ. ನಾನು ಮಂತ್ರಿಯಾಗಿದ್ದಾಗ ಈ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸಿದ್ದೆ. ಆದರೆ ಯಾವುದೇ ಸರ್ಕಾರಗಳು ಕಾಮಗಾರಿಗೆ ಮುಂದಾಗದ ಕಾರಣ ಈ ಪರಿಸ್ಥಿತಿ ತಲೆದೋರಿದೆ. ಸೋಮವಾರ ವಿಧಾನಸಭಾ ಕಲಾಪದಲ್ಲಿ ಆನೆ ಕಾರಿಡಾರ್, ಬೆಳೆ ಪರಿಹಾರ ಕುರಿತು ಸರ್ಕಾರದ ಗಮನ ಸೆಳೆದು ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ಆನೆ ಕಾರಿಡಾರ್ ನಿರ್ಮಾಣಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.