ಮಂಡ್ಯ ಜಿಲ್ಲೆಯ ಕಲಾವಿದರು ಕೌಶಲ್ಯತೆ ಬೆಳೆಸಿಕೊಳ್ಳಬೇಕು: ಪ್ರೊ.ಬಿ.ಜಯಪ್ರಕಾಶ್ ಗೌಡ

KannadaprabhaNewsNetwork |  
Published : Nov 05, 2024, 12:44 AM IST
3ಕೆಎಂಎನ್ ಡಿ25 | Kannada Prabha

ಸಾರಾಂಶ

ಉನ್ನತ ಜಾತಿಯವರೂ ಈಗ ಜಾನಪದವನ್ನು ಫ್ಯಾಷನ್ ಆಗಿ ಹಾಡುತ್ತಾರೆ. ಅದು ತಯಾರಾದ ದನಿ, ನಮ್ಮವರದು ಹುಟ್ಟು ದನಿ, ದೊಡ್ಡ ದೊಡ್ಡ ಉತ್ಸವ, ಮೇಳಗಳಲ್ಲಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡಿ ಹೆಚ್ಚಿನ ಸಂಭಾವನೆ ಕೊಡಬೇಕು ಎಂಬುದು ಜಿಲ್ಲಾಡಳಿತಕ್ಕೆ ನನ್ನ ಆಗ್ರಹಪೂರ್ವಕ ಒತ್ತಾಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಕಲಾವಿದರು ಕೌಶಲ್ಯತೆ ಬೆಳೆಸಿ ಕೊಂಡರೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಶಂಕರಗೌಡ ಸಭಾ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಕಲಾವಿದರ ಬಳಗ ಹಮ್ಮಿಕೊಂಡಿದ್ದ ಉಮಾಶಂಕರ್ -50 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಕಲಾವಿದರು ಸಿನೆಮಾದಲ್ಲಿ ಹಾಡುವ ಕಲಾವಿದರಿಗಿಂತ ಕಡಿಮೆಯೇನಿಲ್ಲ. ಸಾಧನೆ ಮಾಡಲು ಶ್ರಮ, ಪ್ರಯತ್ನ ಹಾಕಬೇಕು ಅಷ್ಟೇ ಎಂದು ಸಲಹೆ ನೀಡಿದರು.

ಉನ್ನತ ಜಾತಿಯವರೂ ಈಗ ಜಾನಪದವನ್ನು ಫ್ಯಾಷನ್ ಆಗಿ ಹಾಡುತ್ತಾರೆ. ಅದು ತಯಾರಾದ ದನಿ, ನಮ್ಮವರದು ಹುಟ್ಟು ದನಿ, ದೊಡ್ಡ ದೊಡ್ಡ ಉತ್ಸವ, ಮೇಳಗಳಲ್ಲಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡಿ ಹೆಚ್ಚಿನ ಸಂಭಾವನೆ ಕೊಡಬೇಕು ಎಂಬುದು ಜಿಲ್ಲಾಡಳಿತಕ್ಕೆ ನನ್ನ ಆಗ್ರಹಪೂರ್ವಕ ಒತ್ತಾಯ ಎಂದರು.

ಜಾನಪದ ಕಲಾವಿದ ಉಮಾಶಂಕರ್ ಅವರನ್ನು ಅಭಿನಂದಿಸಿದ ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಕಲಾವಿದರು ಈ ಭುವನದ ಗಂಧರ್ವರು. ಜಿಲ್ಲೆಯ ಕಲಾವಿದರು ಬಹಳ ಗಟ್ಟಿಗರು, ಮೃಧುಹೃದಯಿಗಳು, ಭಾಷಾಭಿಮಾನಿಗಳು, ನೆಲ ಜಲದ ಹೋರಾಟಕ್ಕೆ ಸದಾ ಸಿದ್ಧರು ಹೆಮ್ಮೆ ವ್ಯಕ್ತಪಡಿಸಿದರು.

ಇದೇ ವೇಳೆ ಕಲಾಕ್ಷೇತ್ರದಲ್ಲಿ ಸುಮಾರು 30 ವರ್ಷ ದುಡಿದ ಗೊರವಾಲೆ ಉಮಾಶಂಕರ್ ಅವರು 50 ವರ್ಷ ಪೂರೈಸಿದ ಕಾರಣ ಜಾನಪದ ಪರಿಷತ್ ಹಾಗೂ ಕಲಾವಿದರ ಬಳಗ ಅವರನ್ನು ಅಭಿನಂದಿಸಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ , ಹಿರಿಯ ತಬಲಾವಾದಕ ವೆಂಕಟೇಶ, ಹಿರಿಯ ಜಾನಪದ ಕಲಾವಿದೆ ಬೇವಿನಹಳ್ಳಿ ನಂಜಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾವಿದರಾದ ಶಿವಾರ ಉಮೇಶ, ಪ್ರದೀಪ, ಗೆಜ್ಜಲಗೆರೆ ಗಂಗಾರ್ಧ, ಹೊಂಬೇಗೌಡ ಹೆಬ್ಬಕವಾಡಿ, ಸೌಮ್ಯ ಶ್ರೀರಾಮ, ಸಂಪಹಳ್ಳಿ ಬಸವರಾಜು ಇತರರು ಹಾಡುಗಳ ಅಲೆಯಲ್ಲಿ ಪ್ರೇಕ್ಷಕರನ್ನು ತೇಲಿಸಿದರು. ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್, ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು, ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು, ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಪ್ರಧಾನ ಕಾರ್ಯದರ್ಶಿ ಹನಿಯಂಬಾಡಿ ಶೇಖರ್, ಶಿಕ್ಷಕಿ ರತ್ನಾಜೈನ್, ಇತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ