ಮಂಡ್ಯ ನಗರಸಭೆ: ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ

KannadaprabhaNewsNetwork |  
Published : Aug 05, 2025, 11:45 PM IST
ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ | Kannada Prabha

ಸಾರಾಂಶ

ಮಂಡ್ಯ ನಗರಸಭಾ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಮತ್ತು ನಿವೇಶನ ಹೊಂದಿರುವ ಆಸ್ತಿಯ ಮಾಲೀಕರು ಅವಶ್ಯ ದಾಖಲಾತಿಗಳೊಂದಿಗೆ ಇ-ಸ್ವತ್ತು ಪಡೆಯಲು ನಗರದ ಎಲ್ಲಾ ವಾರ್ಡ್‌ಗಳಲ್ಲೂ ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭಾ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಮತ್ತು ನಿವೇಶನ ಹೊಂದಿರುವ ಆಸ್ತಿಯ ಮಾಲೀಕರು ಅವಶ್ಯ ದಾಖಲಾತಿಗಳೊಂದಿಗೆ ಇ-ಸ್ವತ್ತು ಪಡೆಯಲು ನಗರದ ಎಲ್ಲಾ ವಾರ್ಡ್‌ಗಳಲ್ಲೂ ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ ಆರಂಭಿಸಿದೆ.

ಮಂಗಳವಾರದಿಂದ ಮೂರು ತಂಡಗಳನ್ನು ರಚಿಸಿಕೊಂಡು ನಗರದ ತಾವರೆಗೆರೆ, ಕುವೆಂಪುನಗರ, ಜೈನರ ಬೀದಿಯಲ್ಲಿ ಅಭಿಯಾನ ಆರಂಭಿಸಿದೆ. ಈ ತಂಡದಲ್ಲಿ ಕಂದಾಯ ನಿರೀಕ್ಷಕ, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರಿದ್ದು, ಇವರು ಸ್ಥಳದಲ್ಲೇ ಆಸ್ತಿ ಮಾಲೀಕರಿಂದ ಅವಶ್ಯ ದಾಖಲೆಗಳನ್ನು ಪಡೆದು ಅವರಿಂದ ಆಸ್ತಿ ತೆರಿಗೆಯನ್ನು ೨೦೨೫-೨೬ನೇ ಸಾಲಿನವರೆಗೆ ಪಾವತಿಸಿಕೊಂಡು ಅಧಿಕೃತ ಸ್ವತ್ತುಗಳಿಗೆ ರಿಜಿಸ್ಟರ್-ಎ ಯಂತೆ ನಮೂನೆ-೩ ಮತ್ತು ಅನಧಿಕೃತ ಸ್ವತ್ತುಗಳಿಗೆ ರಿಜಿಸ್ಟರ್-ಬಿ ಯ ನಮೂನೆ-೩ನ್ನು ಸ್ಥಳದಲ್ಲೇ ವಿತರಿಸಲು ಕ್ರಮ ವಹಿಸಲಾಗಿದೆ.

ಪೌರಾಡಳಿತ ನಿರ್ದೇಶನಾಲಯದನ್ವಯ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿರುವ ಎಲ್ಲಾ ರೀತಿಯ ಕಟ್ಟಡ ಮತ್ತು ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು ಪಾವತಿಕೊಳ್ಳಲು ಸೂಚಿಸಿರುವುದರಿಂದ ವಾರ್ಡ್‌ಗೊಂದು ಇ-ಖಾತಾ ಅಭಿಯಾನ ಆರಂಭಿಸಿದೆ.

ಈ ಅಭಿಯಾನದ ವೇಳೆ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಹಾಗೂ ಅನಧಿಕೃತ ಸ್ವತ್ತುಗಳಿಗೆ ಬಿ-ಖಾತೆ ಮಾಡಿಸದವರನ್ನು ಮನೆ ಮನೆಗೆ ತೆರಳಿ ಗುರುತಿಸಿ ಆಸ್ತಿ ತೆರಿಗೆ ಪಾವತಿಗೆ ಕ್ರಮ ವಹಿಸಲಾಗುವುದು. ಆಸ್ತಿಗಳನ್ನು ಗಣಕೀಕರಣಗೊಳಿಸಿಕೊಳ್ಳುವವರು ಅಭಿಯಾನ ನಡೆಯುವ ಸ್ಥಳಕ್ಕೆ ಆಗಮಿಸಿ ಅಗತ್ಯ ದಾಖಲೆಗಳೊಂದಿಗೆ ನಮೂನೆ-೩ ಮತ್ತು ರಿಜಿಸ್ಟರ್ ಬಿನಲ್ಲಿ ನಮೂನೆ-೩ ದಾಖಲಿಸಿ ಪಡೆದುಕೊಳ್ಳಬಹುದು ಎಂದು ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಮತ್ತು ಕಂದಾಯ ಅಧಿಕಾರಿ ರಾಜಶೇಖರ್ ಮನವಿ ಮಾಡಿದ್ದಾರೆ.

ನಿಗದಿತ ಅವಧಿಯೊಳಗೆ ಆಸ್ತಿಗಳ ಗಣಕೀಕರಣ ಮಾಡಿಸಿಕೊಂಡು ನಮೂನೆ ೩ ಮತ್ತು ನಮೂನೆ-೩ಎಗಳನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿಸಿದ ಆಸ್ತಿ ಮಾಲೀಕರಿಗೆ ನಿಯಮಾನುಸಾರ ಪರಿಶೀಲಿಸಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''