ಕನ್ನಡಪ್ರಭ ವಾರ್ತೆ ಶಹಾಪುರ
ನಿಧನರಾದ ಮರಿಗೌಡ ಪಾಟೀಲ್ ಹುಲಕಲ್ ಅವರಿಗೆ ಅವರ ಅಭಿಮಾನಿ ಬಳಗದ ವತಿಯಿಂದ ಭಾನುವಾರ ನಗರದ ಸಂಗೊಳ್ಳಿ ರಾಯಣ್ಣ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1985 ರಿಂದ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಮುಖ್ಯಮಂತ್ರಿಗಳ ಹೆಸರೇಳಿಕೊಂಡು ಅಧಿಕಾರವನ್ನು ಎಂದು ದುರುಪಯೋಗ ಮಾಡಿಕೊಂಡವರಲ್ಲ. ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಪಕ್ಷದ ಪರ ಪರಿಶ್ರಮವಿಲ್ಲದೆ ಪ್ರಚಾರ ಮಾಡಿ ರಾಜ್ಯದಲ್ಲಿ ಪಕ್ಷಕ್ಕೆ ಅಧಿಕಾರ ತಂದು ಕೊಟ್ಟವರು ಎಂದರು.ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಮರಿಗೌಡರು ರಾಜಕೀಯವಾಗಿ ಯಾವುದೇ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿ. ಅವರ ಚಿಂತನೆಗಳು ಸದಾ ನೆನಪಿನಲ್ಲಿ ಉಳಿಯುತ್ತೇವೆ ಎಂದರು.
ಏಕದಂಡಗಿ ಮಠದ ಪೀಠಾಧಿಪತಿ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಸಾಮಾಜಿಕ ನ್ಯಾಯಯುತವಾದ ಕೆಲಸ ಮಾಡಿದ ಮರಿಗೌಡ ಹುಲಕಲ್ ಅವರು ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದಕ್ಕೆ ಇಂದಿನ ನುಡಿನಮನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮಾತೆಪ್ಪ ಸಾಹು, ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ, ಕರವೇ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶರಣು ಬಿ. ಗದ್ದುಗೆ, ಶರಣಪ್ಪ ಸಲಾದಪುರ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮುಂತಾದವರು ಮಾತನಾಡಿದರು.ಬಸವರಾಜ ವಿಭೂತಿಹಳ್ಳಿ, ಶಿವುಮಾಂತ ಸಾಹು ಚಂದಾಪುರ, ಡಾ. ಚಂದ್ರಶೇಖರ್ ಸುಬೇದಾರ್, ಆರ್. ಚನ್ನಬಸು ವನದುರ್ಗ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಮಾನಸಿಂಗ್ ಚವ್ಹಾಣ, ಧರ್ಮಣ್ಣ ಹೋತಪೇಠ, ನಿಂಗರಾಜ್ ಬಾಚಿಮಟ್ಟಿ, ಕಾಳಪ್ಪ ಕವತಿ, ಮಹಾದೇವಪ್ಪ ಸಾಲಿಮನಿ, ಮಲ್ಲಣ್ಣ ಉಳಂಡಗೇರಿ, ರವಿ ರಾಜಪುರ, ಶಾಂತಗೌಡ ನಾಗನಟಿಗಿ, ಅಯ್ಯಣ್ಣ ಕನ್ಯಾಕೋಳೂರು, ಬಲಭೀಮ ಮಡ್ನಾಳ, ಮಾಳಪ್ಪ ಸುಂಕದ ಕೆಂಭಾವಿ, ನಿಂಗಣ್ಣ ನಾಯ್ಕೋಡಿ, ಶರಬಣ್ಣ ರಸ್ತಾಪುರ, ಮಹೇಶ ರಸ್ತಾಪುರ ಮುಂತಾದವರಿದ್ದರು.