ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣ

KannadaprabhaNewsNetwork |  
Published : Aug 01, 2024, 12:26 AM IST
ಫೋಟೋ- ಹನುಮಾನ್‌ ಚಾಲೀಸ | Kannada Prabha

ಸಾರಾಂಶ

16 ವರ್ಷದೊಳಗಿನ ಮಕ್ಕಳಿಗಾಗಿ ನಡೆದ ಹನುಮಾನ್‌ ಚಾಲೀಸಾ ಪಠಣ ಸ್ಪರ್ಧೆಯಲ್ಲಿ ಶ್ರೀಗೌರಿ, ಅಂಜಲಿ ರೆಡ್ಡಿ ಹಾಗೂ ಶ್ರದ್ಧಾ ಬಹುಮಾನ ಪಡೆದರು. ಮಕ್ಕಳಿಗಾಗಿ ನಡೆದ ಹನುಮಂತ ದೇವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಚೈತ್ರಾ, ಸುಮೇಧ ಹಾಗೂ ಇಶಿಕಾ ಬಹುಮಾನ ಪಡೆದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ವೆಂಕಟೇಶ ನಗರದ ವೀರಾಂಜನೇಯ ಮಂದಿರದಲ್ಲಿ ಅಂತಾರಾಷ್ಟ್ರೀಯ ಹಿಂದು ಪರಿಷತ್‌ ಹಾಗೂ ರಾಷ್ಟ್ರೀಯ ಬಜರಂಗ ದಳ ಸಂಘಟನೆಯವರು ಸ್ಥಳೀಯ ಭಕ್ತರ ಸಹಯೋಗದಲ್ಲಿ ಕಳೆದೊಂದು ವರ್ಷದಿಂದ ಇಲ್ಲಿ ನಡೆಸುತ್ತಿರುವ ಹನುಮಾನ್‌ ಚಾಲೀಸಾ ಸಾಮೂಹಿಕ ಪಠಣಕ್ಕೆ ಇದೀಗ 1 ವರ್ಷದ ಸಂಭ್ರಮ.

ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಸಮರಂಭ ನಡೆಸುವ ಮೂಲಕ ಮಕ್ಕಳಲ್ಲಿ ಸನಾತನ ಹಿಂದು ಸಂಸ್ಕೃತಿ ಹಾಗೂ ಪರಂಪರೆಯ ವಿಷಯಗಳನ್ನು ಬಿತ್ತುವದಕ್ಕೋಸ್ಕರ ಸಮಾರಂಭ ನಡೆಸಿ ಗಮನ ಸೆಳೆದರು.

16 ವರ್ಷದೊಳಗಿನ ಮಕ್ಕಳಿಗಾಗಿ ನಡೆದ ಹನುಮಾನ್‌ ಚಾಲೀಸಾ ಪಠಣ ಸ್ಪರ್ಧೆಯಲ್ಲಿ ಶ್ರೀಗೌರಿ, ಅಂಜಲಿ ರೆಡ್ಡಿ ಹಾಗೂ ಶ್ರದ್ಧಾ ಬಹುಮಾನ ಪಡೆದರು. ಮಕ್ಕಳಿಗಾಗಿ ನಡೆದ ಹನುಮಂತ ದೇವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಚೈತ್ರಾ, ಸುಮೇಧ ಹಾಗೂ ಇಶಿಕಾ ಬಹುಮಾನ ಪಡೆದರು.

ರಮೇಶ ಕುಲಕರ್ಣಿ ಮಾತನಾಡಿ, ಇಂತಹ ಸಮಾರಂಭಗಳಿಂದ. ಹನುಮಾನ್‌ ಚಾಲೀಸಾ ಪಠಣದಿಂದ ಮಕ್ಕಳಲ್ಲಿ ಸನಾತನ ಧರ್ಮ ಜಾಗೃತಿ ಮೂಡುತ್ತದೆ ಎಂದರಲ್ಲದೆ ಕಲಬುರಗಿ ಸಮಾರಂಭದ ಯಶಸ್ಸಿಗೆ ಕಾರಣರಾದವರಿಗೆ ಅಭಿನಂದಿಸಿದರು.

ಮಕ್ಕಳಿಗೆ ಬಹುಮಾನ ವಿತರಿಸಿ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣದಲ್ಲಿ ಪಾಲ್ಗೊಂಡು ಮಾತನಾಡಿದ ಪತ್ರಕರ್ಥ ಶೇಷಮೂರ್ತಿ ಅವಧಾನಿ ಮಕ್ಕಳಲ್ಲಿ ಧರ್ಮ ಜಾಗೃತಿಗೆ ಎಲ್ಲರೂ ಶ್ರಮಿಸಬೇಕಾಗಿದೆ. ಮೋಬೈಲ್‌ ಹಾವಳಿಯ ಯುಗದಲ್ಲಿ ಮಕ್ಕಳನ್ನು ಹೀಗೆ ಸಾಮೂಹಿಕ ಸಮಾರಂಭಗಳಲ್ಲಿ ಹಿಡಿದಿಟ್ಟು ಧರ್ಮ ಜಾಗೃತಿಗೆ ಮುಂದಾಗಬೇಕು ಎಂದು ಹೇಳುತ್ತ ವೀರಾಂಜನೇಯ ಮಂದಿರದ ಈ ಪ್ರಯತ್ನ ಮಾದರಿ ಎಂದರು.

ಇಸ್ಕಾನ್‌ನ ಬಸಮ್ಮ, ಬಡಾವಣೆಯ ಹಿರಿಯರಾದ ಚೌಡೇಕರ್‌ ಪಾಲ್ಗೊಂಡು ಮಕ್ಕಳಿಗೆ ಶುಭ ಕೋರಿದರು. ಪಾಲಿಕೆ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ ಮಾತನಾಡುತ್ತ ಹನಮಾನ್ ಚಾಲೀಸ್‌ ಹಾಗೂ ತುಲಸಿದಾಸರ ಕುರಿತಾದ ಅನೇಕ ಸಂಗತಿಗಳನ್ನು ವಿವರಿಸುತ್ತ ತುಂಬ ಪ್ರಭಾವವಿರುವ ಹನುಮಾನ್‌ ಚಾಲೀಸಾ ಬದುಕಿನ ಸಕಲ ಸಂಕಷ್ಟಗಳ ನಿವಾರಕ ಮಂತ್ರ ಎಂದರಲ್ಲದೆ ಮಕ್ಕಳು ನಿತ್ಯ ಪಠಣ ಮಾಡೋದರಿಂದ ಸರಿ ದಾರಿಯಲ್ಲಿ ಸಾಗುತ್ತಾರೆಂದರು.

ಸಮಾರಂಭದಲ್ಲಿ ಯುವತಿಯರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಲಕ್ಷ್ಮೀ ಲೋಖಂಡೆ, ಸುಜಾತಾ, ಬಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!