ಕನ್ನಡಪ್ರಭ ವಾರ್ತೆ ಇಂಡಿ
ಪುರಾತನ ಐತಿಹಾಸಿಕ ಹಿನ್ನೆಲೆಯುಳ್ಳ ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನವು ಸುಕ್ಷೇತ್ರವಾಗಿ ಹೊರಹೊಮ್ಮಿದೆ. ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಭೂಮಿಯ ಮೇಲೆ ಸುಂದರ ಜೀವನದ ಬದುಕನ್ನು ಕಲಿಯಬೇಕು.ಮಕ್ಕಳನ್ನು ಸುಂಸ್ಕೃತರನ್ನಾಗಿ ಬೆಳೆಸುವ ಜವಾದ್ಬಾರಿ ಪಾಲಕರ ಮೇಲಿದೆ. ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು ಎಂದು ಸೋಮನಾಥ ಶಿವಾಚಾರ್ಯರು ಹೇಳಿದರು.
ಹೊರ್ತಿ ಶ್ರೀರೇವಣಸಿದ್ಧೇಶ್ವರ ದೇವಸ್ಥಾನ ಅಧ್ಯಕ್ಷ ಅಣ್ಣಪ್ಪ ಖೈನೂರ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ತಾಳಿಕೋಟೆ ವಿರಕ್ತಮಠದ ಅಧ್ಯಕ್ಷ ಮುರಘೆಂದ್ರ ಶಿವಚಾರ್ಯರು, ಆಡಳಿತಾಧಿಕಾರಿ ಮಲ್ಲಿಕಾರ್ಜುನ ಗೋಗಿ, ತಾಳಿಕೋಟೆ ವಿದ್ಯಾವರ್ದಕ ಸಂಘದ ನಿರ್ದೇಶಕ ರಮೇಶ ಸಾಳುಂಕೆ, ಹೊರ್ತಿಯ ಸಹಕಾರಿ ಧುರೀಣ ಶ್ರೀಮಂತ ಇಂಡಿ, ಇಂಡಿ ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪಗೌಡ ಪಾಟೀಲ, ನಿರ್ದೇಶಕ ಗುರಪ್ಪ ಪೂಜಾರಿ, ಸರ್ವೋದಯ ಶಿಕ್ಷಣ ಸಂಸ್ಥೆಯ ರೂವಾರಿ ರೇವಣಸಿದ್ಧ ಪೂಜಾರಿ, ಬುದ್ದಪ್ಪ ಭೋಸಗಿ, ನಿಂಗಣ್ಣ ಬಿರಾದಾರ, ಎಸ್.ಎಸ್.ಪೂಜಾರಿ, ಬಿ.ಜಿ.ಸಾವಕಾರ, ಬಸವರಾಜ ಜಂಬಗಿ ಹಾಗೂ ಹೊರ್ತಿ ಗ್ರಾಮ ಸೇರಿದಂತೆ ಸುತ್ತಲಿನ ನೂರಾರು ಭಕ್ತರು ಉಪಸ್ಥಿತರಿದ್ದರು. ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾದ್ದು, ಆದ್ದರಿಂದ ಸಕಲ ಸದ್ಭಕ್ತರು ಜು.28ರಿಂದ ಆಗಷ್ಟ್ರ11ವರೆಗೆ ನಡೆಯವ ಆಧ್ಯಾತ್ಮಿಕ ಚಿಂಥನ-ಮಂಥನ ಪ್ರವಚನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಣ್ಣಪ್ಪ ಖೈನೂರ ಕೋರಿದರು.