ಕನ್ನಡಪ್ರಭ ವಾರ್ತೆ. ಕಲಬುರಗಿ
ಗುಲ್ಬರ್ಗ ವೈದಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಆಯೋಜಿಸಿದ್ದ 2018 ರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಉತ್ಕಷ್ಟ ಆರೋಹಣ ಘಟಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಅವರು ಭವಿಷ್ಯದಲ್ಲಿ ರೋಬೋಗಳ ಸಂಖ್ಯೆ ಹೆಚ್ಚಾಗಲಿದೆ. ವೈದ್ಯಕೀಯ ನ್ಯಾನೋ ಟೆಕ್ನಾಲಜಿ ಚಿಕಿತ್ಸೆಗೆ ಬೆಂಗಳೂರು ಹಬ್ ಆಗಲಿದೆ ಎಂದರು.
ಹೈದರಬಾದಿನ್ ಉಸ್ಮಾನಿಯಾ ಮೆಡಿಕಲ್ ಕಾಲೇಜು ಅರ್ಥೊಪಿಡಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಮಹ್ಮದ್ ಅಬ್ಬಾಸ್ ಅಲ್ಲಿ ಮಾತನಾಡಿ, ಸಮಾಜ ವೈದ್ಯರಿಂದ ಅತ್ಯತ್ತಮ ಚಿಕಿತ್ಸೆ ಮಾತ್ರ ನಿರೀಕ್ಷಿಸುತ್ತಿದೆ. ರೋಗಿಗುಣ ಹೊಂದಿದರೆ ನಿಮಗೆ ಗೌರವದ ಜತೆಗೆ ಸದಾ ಸ್ಮರಿಸುತ್ತಾರೆ. ನೂತನವಾಗಿ ಹೊರಬರುವ ವೈದ್ಯ ವಿದ್ಯಾರ್ಥಿಗಳು ಉದ್ಯೋಗ ಭೀತಿ, ಆರ್ಥಿಕತೆ ಲೆಕ್ಕಾಚಾರ ಹಾಕುತ್ತಾರೆ. ವೈದ್ಯರಿಗೆ ಉದ್ಯೋಗ ಭೀತಿ ಬೇಡ, ಹಣದ ಚಿಂತೆ ಮಾಡಬೇಡಿ ಜೀವನ ಕೌಶಲ್ಯ ಅರಿತು ಉದ್ಯೋಗದಾತರಾಗಲು ಪ್ರಯತ್ನಿಸಿ ಹಣದ ನಿರ್ವಹಣೆ ಅರಿತು ಜೀವನ ಸಾಗಿಸಿ ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ 144 ಪದವಿ, 14 ಚಿನ್ನದ ಪದಕ ಘಟಿಕೋತ್ಸವದಲ್ಲಿ 2018ರ ಬ್ಯಾಚ್ನ 144 ವಿದ್ಯಾರ್ಥಿಗಳಗೆ ಪದವಿ ಪ್ರದಾನ ಮಾಡಲಾಯಿತು. 14 ವಿಭಾಗದಲ್ಲಿ ಅತ್ಯುತ್ತಮ ಅಂಕಪಡೆದ 14 ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ ನೀಡಿ ಪೋತ್ಸಾಹಿಸಲಾಯಿತು.