ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಸಣ್ಣಪುಟ್ಟ ಸಮಾಜಗಳನ್ನೂ ಗುರುತಿಸಲಾಗಿದೆ. 50 ಲಕ್ಷಕ್ಕೂ ಅಧಿಕ ಇರುವ ಗಾಣಿಗ ಸಮಾಜವನ್ನು ಗುರುತಿಸದಿರುವುದು ಖೇದಕರ ಸಂಗತಿ. ವರದಿಯಲ್ಲಿ ಗಾಣಿಗ ಸಮಾಜವನ್ನು ಗುರುತಿಸದಿರುವುದು ವಿಫಲವಾಗಿದ್ದು, ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದರು. ಜಾತಿಗಣತಿ ವರದಿ ತಯಾರಿಸುವಾಗ ಯಾರೊಬ್ಬರೂ ಗಾಣಿಗ ಸಮಾಜದವರ ಮನೆಗೆ ಬಂದಿಲ್ಲ. ಈ ಕುರಿತು ಆಯೋಗ ಮಾಹಿತಿ ಪಡೆದಿಲ್ಲ ಎಂದರು.
ಇಂತಹ ಸಮಾಜವನ್ನು ಗುರುತಿಸದಿರುವುದು ಖಂಡನೀಯ. ಇನ್ನು ಈ ವರದಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರ ಯಾವುದೇ ನಿರ್ಣಯ ಮಾಡಬಾರದು. ಅಂಕಿಸಂಖ್ಯೆ ತಪ್ಪಾಗಿರುವ ಈ ವರದಿಯನ್ನು ನಂಬಿ ಏನಾದರೂ ನಿರ್ಣಯಗಳನ್ನು ಮಾಡಿದ್ದೇ ಆದರೆ, ಗಾಣಿಗ ಸಮಾಜ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುತ್ತದೆ ಎಂದು ಲೋಣಿ ಎಚ್ಚರಿಸಿದ್ದಾರೆ. ನಾವು ಇಷ್ಟಕ್ಕೆ ಸುಮ್ಮನಾಗದೆ ನ್ಯಾಯಾಲಯದ ಮೊರೆ ಹೋಗಿ ಈ ವರದಿಯನ್ನು ಜಾರಿ ಮಾಡದಂತೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.ನಿಗಮ ಮಂಡಳಿಯಲ್ಲೂ ಅನ್ಯಾಯ:
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕಾಂಗ್ರೆಸ್ ಪಕ್ಷ ನಮ್ಮ ಸಮಾಜದ ಒಬ್ಬರನ್ನೂ ಶಾಸಕರನ್ನಾಗಿ ಮಾಡಿಲ್ಲ. ಹಿಂದುಳಿದ ಸಮಾಜಕ್ಕೆ ಸರ್ಕಾರದಿಂದ ಹಾಗೂ ಆಯೋಗದಿಂದ ಅನ್ಯಾಯವಾದರೆ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ನಾವು ಸುಮ್ಮನೆ ಇರುವುದಿಲ್ಲ. ಈ ವಿಚಾರವಾಗಿ ಕಾನೂನು ಹೋರಾಟ ಸಹ ನಾವು ಮಾಡಲಿದ್ದೇವೆ. ನಮ್ಮ ಸಮಾಜಕ್ಕೆ ಇದುವರೆಗೂ ಸಚಿವ ಸ್ಥಾನಗಳು ಸಿಕ್ಕಿಲ್ಲ. ನಿಗಮ ಮಂಡಳಿಗೂ ಆಯ್ಕೆ ಮಾಡಿಲ್ಲ. ತಕ್ಷಣವೇ ಅನ್ಯಾಯ ಸರಿಪಡಿಸದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಹೀಗೆ ಮಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯಿಂದಲೂ ಅನ್ಯಾಯ ಮಾಡುತ್ತಿದೆ ಎಂಬ ಭಾವನೆ ನಮ್ಮ ಸಮಾಜದ ಜನರಲ್ಲಿ ಉದ್ಭವ ಆಗುತ್ತಿದೆ ಎಂದು ಅವರು ಹೇಳಿದರು.