ಕನ್ನಡಪ್ರಭ ವಾರ್ತೆ ಬೀದರ್
ಈ ಕುರಿತು ಪೌರಾಡಳಿತ ಸಚಿವ ರಹೀಂ ಖಾನ್ಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ, ಹೊರಗುತ್ತಿಗೆ ಆಧಾರದ ಮೇಲೆ ಕೇಲಸ ಮಾಡುವ ಕೂಲಿ ಕಾರ್ಮಿಕ/ಪೌರ ಕಾರ್ಮಿಕರು ಇವರಿಗೆ ಸುಮಾರು 06 ತಿಂಗಳುಗಳಿಂದ ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಿಲ್ಲ, ಇವರು ಜೀವನ ನಡೆಸುವುದೇ ಬಹಳಷ್ಟು ಕಷ್ಟ ಆಗುತ್ತಿದೆ, ಇದನ್ನು ನಮಗೆ ಬಂದು ಹೇಳಿದಾಗ ನಾವುಗಳು ಪೌರಾಯುಕ್ತರಿಗೆ ಕೆಳಲು ಹೋದಾಗ ಹಾರಿಕೆ ಉತ್ತರ ಕೊಡುವುದರ ಮುಖಾಂತರ ಕಚೇರಿಯಿಂದ ಹೊರಗಡೆ ಎದ್ದು ಹೊಗುತ್ತಾರೆ, ಹಾಗೂ ಎಸ್ಟಿಪಿ/ಐಎಸ್ಬಿರವರಿಗೆ ಬರಬೇಕಾದ ಅನುದಾನ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಅಂಬೇಡ್ಕರ್ ವಸತಿ ನಿಲಯ, ಮತ್ತು ಬಸವೇಶ್ವರ ವಸತಿ ನಿಲಯ, ಫಲಾನುಭವಿಗಳ ಹೆಸರಿಗೆ ಜಿಪಿಎಸ್ ನಂಬರ ಬಂದಿರುವ ಹಣ ಬಿಡುಗಡೆ ಮಾಡಿಕೊಂಡು ಫಲಾನುಭಿವಿಗಳಿಗೆ ಮುಟ್ಟಿರುವುದಿಲ್ಲ, ಈ ಹಣವನ್ನು ದುರ್ಬಳಕೆಯಾಗಿರುತ್ತದೆ ಇದು ಕೂಡ ಸಮಗ್ರ ತನಿಖೆ ನಡೆಸಬೇಕು. ಹೀಗೆ ಅನೇಕ ಕಡು ಬಡ ಜನರಿಗೆ ಯಾವುದೇ ಸರ್ಕಾರದ ಯೋಜನೆಯಡಿಯಲ್ಲಿ ಬರುವ ಸೌಲಭ್ಯವನ್ನು ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ಸರ್ಕಾರದ ಸೌಲಭ್ಯ ನೀಡುವಲ್ಲಿ ವಿಫಲರಾಗಿರುತ್ತಾರೆ. ಎಂದು ಆರೋಪಿಸಿದ್ದಾರೆ.ಅದೇ ರೀತಿ ಸುಮಾರು ವರ್ಷಗಳಿಂದ ಟೆಂಡರ್ ಆಗಲಾರದೆ ಮಳಿಗೆಗಳು ಬೇರೆಯವರ ಹೆಸರಿಗೆ ಇಲ್ಲಿಯವರೆಗೆ ಮಾಡಲಾರದೆ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಆದ್ದರಿಂದ ಪೌರಾಯುಕ್ತರನ್ನು ಅಮಾನತು ಮಾಡುವಂತೆ ಒತ್ತಾಯಿಸಲಾಯಿತು.