ಉರುಳು ಸೇವೆ ಹರಕೆ ಪೂರೈಸಿದ ಶಾಸಕ ಕಾಮತ್‌

KannadaprabhaNewsNetwork |  
Published : Jan 23, 2024, 01:49 AM IST
ಶಾಸಕ ವೇದವ್ಯಾಸ್‌ ಕಾಮತ್‌ ಉರುಳು ಸೇವೆ | Kannada Prabha

ಸಾರಾಂಶ

ರಾಮಮಂದಿರದ ವಿವಾದ ನ್ಯಾಯಾಲಯದಲ್ಲಿ ಇದ್ದಾಗ ‘ತೀರ್ಪು ಮಂದಿರದ ಪರವಾಗಿಯೇ ಬರಬೇಕು, ಅಲ್ಲಿಯೇ ಮಂದಿರ ನಿರ್ಮಾಣವಾಗಬೇಕು’ ಎಂದು ಆಗ ಬಿಜೆಪಿ ಮುಖಂಡರಾಗಿದ್ದ ವೇದವ್ಯಾಸ್‌ ಕಾಮತ್‌ ಅವರು ಮಂಗಳೂರಿನ ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆಯ ಸಂಕಲ್ಪವನ್ನು ಕೈಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರುರಾಮಮಂದಿರ ಪರವಾಗಿ ತೀರ್ಪು ಬಂದು ಈಗ ಮಂದಿರ ನಿರ್ಮಾಣ ಕೈಗೂಡಿದ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಶ್ರೀರಾಮ ಪ್ರಾಣಪ್ರತಿಷ್ಠೆಯ ದಿನವೇ ಸೋಮವಾರ ದೇವಸ್ಥಾನವೊಂದರಲ್ಲಿ ಉರುಳು ಸೇವೆ ನಡೆಸಿ ಹರಕೆ ತೀರಿಸಿದರು.

ರಾಮಮಂದಿರದ ವಿವಾದ ನ್ಯಾಯಾಲಯದಲ್ಲಿ ಇದ್ದಾಗ ‘ತೀರ್ಪು ಮಂದಿರದ ಪರವಾಗಿಯೇ ಬರಬೇಕು, ಅಲ್ಲಿಯೇ ಮಂದಿರ ನಿರ್ಮಾಣವಾಗಬೇಕು’ ಎಂದು ಆಗ ಬಿಜೆಪಿ ಮುಖಂಡರಾಗಿದ್ದ ವೇದವ್ಯಾಸ್‌ ಕಾಮತ್‌ ಅವರು ಮಂಗಳೂರಿನ ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆಯ ಸಂಕಲ್ಪವನ್ನು ಕೈಗೊಂಡಿದ್ದರು. ಈಗ ಅವರು ಶಾಸಕರಾಗಿದ್ದು, ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ತಮ್ಮ ಸಂಕಲ್ಪವನ್ನು ಈಡೇರಿಸಿಕೊಂಡರು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲದ ಬಿಜೆಪಿ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ, ಪಾಲಿಕೆ ಸದಸ್ಯರಾದ ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ಭರತ್, ಗಣೇಶ್ ಕುಲಾಲ್ ಮತ್ತಿತರರಿದ್ದರು.ಶ್ರೀ ರಾಮ ಪ್ರಾಣಪ್ರತಿಷ್ಠೆ: ಕೊರಗ ಸಮುದಾಯ, ಕರಸೇವಕರಿಗೆ ಸನ್ಮಾನ

ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ಪುಂಜಾಲಕಟ್ಟೆ ದೈಕಿನಕಟ್ಟೆ ಎಂಬಲ್ಲಿ ಕೊರಗ ಸಮುದಾಯದ ಎಂಟು ಕುಟುಂಬಗಳಿಗೆ ಹಾಗೂ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಇಬ್ಬರು ಕರಸೇವಕರನ್ನು ಮಾಜಿ ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಆದಿವಾಸಿ ಜನಾಂಗದವರು ರಾಮನ ಜೊತೆ ಬೆರೆಯುತ್ತಿದ್ದರು ಎಂಬ ಕಾರಣಕ್ಕಾಗಿ ಕೊರಗ ಸಮುದಾಯದ ಕುಟುಂಬವನ್ನು ಗುರುತಿಸಿ ಗೌರವಿಸಲಾಗಿದೆ ಎಂದು ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ರಮೇಶ್ ಕೊರಗ, ನಾರಾಯಣ ಕೊರಗ, ಐತ್ತಪ್ಪ ಕೊರಗ, ಸಂಜೀವ ಕೊರಗ, ತನಿಯ ಕೊರಗ ಸೇರಿದಂತೆ ಒಟ್ಟು 8 ಮಂದಿ ಕುಟುಂಬಕ್ಕೆ ಗೌರವ ನೀಡಲಾಗಿದೆ. ಇವರ ಜೊತೆಗೆ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡ ಲಿಂಗಪ್ಪ ಟೈಲರ್ ಹಾಗೂ ಪ್ರಭಾಕರ್ ಪಿ.ಎಂ. ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಂಜಿತ್ ಮೈರ, ವೆಂಕಪ್ಪ ಪರವ, ಜನಾರ್ದನ, ಕಾಂತಪ್ಪ ಪೂಜಾರಿ, ಯಶೋಧರ ಶೆಟ್ಟಿ ದಂಬೆ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ