ಶಾಸಕ ರವಿಕುಮಾರ್ ಹುಟ್ಟುಹಬ್ಬ: ದೇಗುಲಗಳಲ್ಲಿ ಪೂಜೆ, ವಿವಿಧ ಸೇವಾ ಕಾರ್ಯ

KannadaprabhaNewsNetwork |  
Published : Jan 01, 2025, 12:02 AM IST
31ಕೆಎಂಎನ್ ಡಿ12 | Kannada Prabha

ಸಾರಾಂಶ

ಶಾಸಕ ರವಿಕುಮಾರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ವಿವಿಧ ಸೇವಾ ಕಾರ್ಯಗಳ ಮೂಲಕ ಸರಳವಾಗಿ ಆಚರಿಸುತ್ತಿದ್ದೇವೆ. ಶಾಸಕರಿಗೆ ಆಯುಸ್ಸು-ಆರೋಗ್ಯ-ರಾಜಕೀಯ ಭವಿಷ್ಯ ವೃದ್ಧಿಗಾಗಿ ದೇಗುಲದಲ್ಲಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಮತ್ತು ನಿತ್ಯ ಶಾಸಕ ರವಿಕುಮಾರ್‌ ಯುವ ಬ್ರಿಗೇಡ್ ಅಭಿಮಾನಿಗಳು ವಿಶೇಷ ಪೂಜೆ ಮತ್ತು ವಿವಿಧ ಸೇವಾ ಕಾರ್ಯ ಹಮ್ಮಿಕೊಂಡು ಶುಭಾಶಯ ಕೋರಿದರು.

ಭೂ ನ್ಯಾಯ ಮಂಡಳಿ ಸದಸ್ಯ ಅರುಣ್ ಪಣಕನಹಳ್ಳಿ ಮಾತನಾಡಿ, ಶಾಸಕ ರವಿಕುಮಾರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ವಿವಿಧ ಸೇವಾ ಕಾರ್ಯಗಳ ಮೂಲಕ ಸರಳವಾಗಿ ಆಚರಿಸುತ್ತಿದ್ದೇವೆ. ಶಾಸಕರಿಗೆ ಆಯುಸ್ಸು-ಆರೋಗ್ಯ-ರಾಜಕೀಯ ಭವಿಷ್ಯ ವೃದ್ಧಿಗಾಗಿ ದೇಗುಲದಲ್ಲಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಇದೇ ವೇಳೆ ವಿಕಾಸನ ಜೋಗುಳ ದತ್ತು ಕೇಂದ್ರದ ಮಕ್ಕಳಿಗೆ ಬೆಳಗಿನ ಉಪಾಹಾರ, ಹಣ್ಣು ಮತ್ತು ಸಿಹಿ ವಿತರಣೆ ಮತ್ತ ರಾತ್ರಿ ವೇಳೆಯ ಹೋಳಿಗೆ ಊಟ ಆಯೋಜಿಸಿದ್ದೇವೆ. ಮಧ್ಯಾಹ್ನ ಕೆಂಪೇಗೌಡ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಸಸಿಗಳನ್ನು ನೆಟ್ಟು ನೀರೆರೆದವು ಎಂದರು.

ನಗರಸಭಾ ಸದಸ್ಯರಿಂದ ಪೂಜೆ-ಹಣ್ಣುಹಂಪಲು ವಿತರಣೆ:

ಮುಡಾ ಅಧ್ಯಕ್ಷ ನಹೀಂ ನೇತೃತ್ವದಲ್ಲಿ ನಗರಸಭಾ ಸದಸ್ಯರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಶಾಸಕ ರವಿಕುಮಾರ್‌ ಹೆಸರಿನಲ್ಲಿ ಅರ್ಚನೆ ಅಭಿಷೇಕ-ಪೂಜೆ ಸಲ್ಲಿಸಿದರು. ಅಯಸ್ಸು ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿದರು. ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಗಳಲ್ಲಿರುವ ಗರ್ಭಿಣಿ-ಬಾಣಂತಿಯರಿಗೆ ಹಣ್ಣು-ಹಂಪಲು ವಿತರಿಸಿದರು.

ಈ ವೇಳೆ ನಗರಸಭಾ ಸದಸ್ಯರಾದ ಮಂಜು, ಶ್ರೀಧರ್, ಪೂರ್ಣಿಮಾ, ಮಂಗಳಾ, ಪವಿತ್ರಾ, ಸೌಭಾಗ್ಯ, ಗೀತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ, ಉಪಾಧ್ಯಕ್ಷೆ ನೀಲಾಮೂರ್ತಿ, ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯುಕುಮಾರ್, ಚಂದಗಾಲು ವಿಜಯ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್, ಉಮ್ಮಡಹಳ್ಳಿ ಉಮೇಶ್, ಆಟೋ ಕೃಷ್ಣ, ಚಿಕ್ಕಮಂಡ್ಯ ಮೋಹನ್, ವೀಣಾ, ವಿಜಯಲಕ್ಷ್ಮಿ ಮತ್ತಿತರರಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ