ಸ್ವಾವಲಂಬಿ ಜೀವನಕ್ಕೆ ಕೌಶಲ್ಯ ತರಬೇತಿ ಮುಖ್ಯ: ಮುನಿರಾಜು

KannadaprabhaNewsNetwork |  
Published : Aug 27, 2024, 01:34 AM IST
ಮುನಿರಾಜು  | Kannada Prabha

ಸಾರಾಂಶ

ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಮಾಡುವುದಕ್ಕೆ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಬಹಳ ಮುಖ್ಯವಾಗಿವೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಮಾಡುವುದಕ್ಕೆ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಬಹಳ ಮುಖ್ಯವಾಗಿವೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ಜನಶಿಕ್ಷಣ ಸಂಸ್ಥಾನ ವತಿಯಿಂದ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಹೊಲಿಗೆ ತರಬೇತಿಯನ್ನು ನೀಡಲಾಯಿತು .ತರಬೇತಿ ಪಡೆದ 60 ಜನರಿಗೆ ಪ್ರಮಾಣಪತ್ರವನ್ನು ನೀಡಲಾಯಿತು. ಚಿಕ್ಕಬಾಣಾವರದ ಸ್ರೀ ಶಕ್ತಿ ಸಂಘದ ಮುಖ್ಯಸ್ಥೆ ಭಾಗ್ಯಮ್ಮ ನೇತೃತ್ವದಲ್ಲಿ ವಿಧವೆವೇತನ, ವೃದ್ಧಾಪ್ಯ ವೇತನ ಪ್ರಮಾಣ ಪತ್ರವನ್ನು ಶಾಸಕ ಎಸ್. ಮುನಿರಾಜು ವಿತರಿಸಿದರು.ಬಳಿಕ ಮಾತನಾಡಿದ ಶಾಸಕ ಎಸ್ ಮುನಿರಾಜು, ಮಹಿಳೆಯರು ಕೇವಲ ಮನೆಗೆ ಸೀಮಿತವಾಗಿಲ್ಲ, ಸಮಾಜದಲ್ಲಿ ಪುರುಷರಂತೆ ಎಲ್ಲಾ ರಂಗದಲ್ಲೂ ಸರಿಸಮನಾಗಿ ದುಡಿಯುತ್ತಿದ್ದಾರೆ ಪ್ರಧಾನಿ ಮೋದಿ ಅವರು ಕೂಡ ಮಹಿಳಾ ಮೀಸಲಾತಿ 33% ಅಂಗೀಕಾರ ಮಾಡಿ ರಾಜಕೀಯ ವಲಯದಲ್ಲೂ ಸ್ಥಾನಮಾನ ನೀಡಿದ್ದಾರೆ ಎಂದರು.

ಹೆಚ್ಚಿನ ರೀತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತು ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಒಂದು ಸದಾವಕಾಶವಾಗಿದೆ ಸಲಹೆ ನೀಡಿದರು.

ಭಾಗ್ಯಮ್ಮ ಮಾತನಾಡಿ, ನಮ್ಮ ಶಾಸಕರಾದ ಎಸ್.ಮುನಿರಾಜು ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಸ್ವಯಂ ಪ್ರೇರಿತವಾಗಿ ಕೆಲಸ ಮಾಡಲಿ ಎಂದು ಅವರಿಗೆ ಉಚಿತವಾಗಿ ಹೊಲಿಗೆ ತರಭೇತಿಯನ್ನು ಕಲಿಸಿಕೊಡಲಾಗಿದೆ.ಇದರಿಂದ ಮಹಿಳೆಯರು ಸ್ವಂತವಾಗಿ ಕೆಲಸವನ್ನು ಮಾಡಬಹುದು ಇದರಿಂದ ಮಹಿಳೆಯರು ಸ್ವಾವಲಂಭಿಯಾಗಿ ಬದುಕಬಹುದು ಎಂದು ತಿಳಿಸಿದರು.ಈ ವೇಳೆ ಸುಜಾತ ಮುನಿರಾಜು, ಚಿಕ್ಕಬಾಣಾವರ ಗ್ರಾಪಂ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ , ಮುಖಂಡರಾದ ಬಿ.ಎಂ ಚಿಕ್ಕಣ್ಣ , ವೆಂಕಟೇಶ್ , ಮಹಮ್ಮದ್ ಕಬೀರ್ ಅಹಮ್ಮದ್ ಮತ್ತಿತರರಿದ್ದರು.

ರಸ್ತೆಗಳ ಡಾಂಬರೀಕರಣ

ಕಾಮಗಾರಿಗೆ ಚಾಲನೆ:

ರಾಜಗೋಪಾಲನಗರ ವಾರ್ಡಿನ ಅನ್ನಪೂರ್ಣ ಲೇಔಟ್ ಹಾಗೂ ಇತರೆ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಮುನಿರಾಜು ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡಿನ ಅನ್ನಪೂರ್ಣೇಶ್ವರಿ ನಗರದ ಜಿಟಿ ರೆಸಿಡೆನ್ಸಿ ಹಾಗೂ ವೀರ ಬ್ರಹ್ಮೇಂದ್ರ ಮಠ ಬಳಿಯ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ವಾರ್ಡ್ ಅಧ್ಯಕ್ಷ ಆರ್ ಸಿ ಹರೀಶ್,ವೈ.ಜಿ ನಾಗರಾಜ್, ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ದಿನೇಶ್, ಶ್ರೀನಿವಾಸ್, ಮುಖಂಡರಾದ ವೆಂಕಟೇಶ್, ರಾಮಸ್ವಾಮಿ, ಜವರಪ್ಪ ರಾಮ್, ಬಿಬಿಎಂಪಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ನರಸಿಂಹಮೂರ್ತಿ, ಸಹಾಯಕ ಅಭಿ ಅಂಯಂತರರಾದ ಪ್ರವೀಣ್. ಸಹಾಯಕರಾದ ರಮೇಶ್, ಸಿದ್ದಪ್ಪ, ಪುಟ್ಟಸ್ವಾಮಿ ಹಾಗೂ ಸ್ಥಳೀಯ ಮುಖಂಡರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಿಂದ ಭೂರಹಿತರಿಂದ ಹೋರಾಟಕ್ಕೆ ನಿರ್ಣಯ
ಚಿನ್ನಕ್ಕಿಂತ ಆರೋಗ್ಯ, ನೆಮ್ಮದಿ ಮುಖ್ಯ: ಮಹಂತೇಶ್‌