ಶಾಸಕ ಶಿವರಾಮ ಹೆಬ್ಬಾರಗೆ ವಿಪ್‌ ಜಾರಿ

KannadaprabhaNewsNetwork | Published : Aug 21, 2024 12:31 AM

ಸಾರಾಂಶ

ಪಕ್ಷದ ವಿಪ್‌ಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು. ಈಗಾಗಲೇ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆಯಲಾಗುತ್ತಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ: ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರರಿಗೆ ಬುಧವಾರ ನಡೆಯಲಿರುವ ಪಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಜಿಲ್ಲಾಧ್ಯಕ್ಷ ಎಸ್.ಎನ್. ಹೆಗಡೆ ವಿಪ್ ಜಾರಿ ಮಾಡಿದ್ದಾರೆ.

ಬಿಜೆಪಿಯ ಜಿಲ್ಲಾಧ್ಯಕ್ಷರು ಶಾಸಕ ಶಿವರಾಮ ಹೆಬ್ಬಾರರಿಗೆ ಆ. ೧೬ರಂದೇ ವಿಪ್ ಜಾರಿ ಮಾಡಿ, ಆ. ೨೧ರಂದು ಪಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕಲ್ಪನಾ ಗಜಾನನ ನಾಯ್ಕ (ಅಧ್ಯಕ್ಷ ಸ್ಥಾನದ ಅಭ್ಯರ್ಥಿ), ಸೋಮೇಶ್ವರ ನಾಯ್ಕ (ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ) ಅವರಿಗೆ ಮತದಾನ ಮಾಡಬೇಕೆಂದು ವಿಪ್ ಜಾರಿ ಮಾಡಲಾಗಿದೆ.

ಹೆಬ್ಬಾರ ಬಣದ ೧೦ ಸದಸ್ಯರು, ಬಿಜೆಪಿಯ ೫ ಸದಸ್ಯರು, ಕಾಂಗ್ರೆಸ್ಸಿನ ೩ ಸದಸ್ಯರು, ಪಕ್ಷೇತರ ೧ ಸದಸ್ಯರು ಇದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ ಬಣದ ಎಲ್ಲ ಸದಸ್ಯರು, ಕಾಂಗ್ರೆಸ್ ಪಕ್ಷದ ನರ್ಮದಾ ನಾಯ್ಕ ಅವರಿಗೆ ಬೆಂಬಲಿಸುವ ಬಗ್ಗೆ ನಿರ್ಣಯಿಸಲಾಗಿದೆ ಎನ್ನಲಾಗಿದೆ.

ಶಾಸಕರು ಕಳೆದ ೨- ೩ ದಿನಗಳಿಂದ ಯಲ್ಲಾಪುರದಲ್ಲೇ ಇದ್ದರೂ ಅವರಿಗೆ ವಿಪ್ ನೋಟಿಸ್ ನೀಡದೇ, ತೀರಾ ಅಪರೂಪಕ್ಕೊಮ್ಮೆ ತಾಪಂ ಸಭಾಭವನದಲ್ಲಿ ಏನಾದರೂ ಕಾರ್ಯಕ್ರಮಗಳು ಇದ್ದ ಸಂದರ್ಭದಲ್ಲಿ ತಾಪಂ ಆವಾರದಲ್ಲಿರುವ ಶಾಸಕರ ಭವನಕ್ಕೆ ಹೆಬ್ಬಾರ ಹೋಗುತ್ತಾರೆ. ಅದು ಅರಿವಿದ್ದರೂ ಬಿಜೆಪಿಯವರು ಶಾಸಕರ ಕಚೇರಿಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಶಾಸಕರಿಗೆ ನೇರವಾಗಿ ಅಂಚೆ ಮೂಲಕವೂ ವಿಪ್‌ ಕಳುಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.

ಪಕ್ಷದ ವಿಪ್‌ಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು. ಈಗಾಗಲೇ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆಯಲಾಗುತ್ತಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಿಜೆಪಿ ಸದಸ್ಯರಿಂದ ಪಪಂ ಚುನಾವಣೆ ಬಹಿಷ್ಕಾರ

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸೋಮು ನಾಯ್ಕ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಆ. 21ರಂದು ನಡೆಯಲಿರುವ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಯಲ್ಲಾಪುರ ಶಾಸಕರಿಗೆ ಬಿಜೆಪಿಯಿಂದ ವಿಪ್ ಜಾರಿಯಾದ ನಂತರ ಸೋಮು ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಪ್ರಕರಣ ದಾಖಲಾದಂತೆ ಕಾಣುತ್ತಿದ್ದು, ರಾಜಕಾರಣದಲ್ಲಿ ಈ ಘಟನೆ ಕಪ್ಪುಚುಕ್ಕೆ ಎಂದು ಆರೋಪಿಸಿದರು.

ಅಪಹರಣ ಶಂಕೆ: ಪಪಂ ಸದಸ್ಯ ಶ್ಯಾಮಿಲಿ ಪಾಠಣಕರ ಮಾತನಾಡಿ, ಸೋಮು ನಾಯ್ಕ ಅವರ ಅಪಹರಣವಾಗಿರುವ ಶಂಕೆಯಿದೆ. ಸೋಮವಾರ ರಾತ್ರಿಯಿಂದ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಾಮು ನಾಯ್ಕ, ಉಮೇಶ ಭಾಗ್ವತ, ಜಿ.ಎನ್. ಗಾಂವ್ಕರ್, ಪ್ರದೀಪ ಯಲ್ಲಾಪುರಕರ, ಆದಿತ್ಯ ಗುಡಿಗಾರ, ಕಲ್ಪನಾ ನಾಯ್ಕ, ಗಣಪತಿ ಮುದ್ದೇಪಾಲ್ ಇತರರು ಇದ್ದರು.ಇಂದು ಯಲ್ಲಾಪುರ ಪಪಂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯೆ ನರ್ಮದಾ ನಾಯ್ಕ ಅಧ್ಯಕ್ಷೆ, ಅಮಿತ್ ಅಂಗಡಿ ಉಪಾಧ್ಯಕ್ಷ, ಅಬ್ದುಲ್ ಅಲಿ ಕೆ. ಹಮೀದ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಹೆಬ್ಬಾರ ಬಣದ ೧೦ ಸದಸ್ಯರು, ಬಿಜೆಪಿಯ ೫ ಸದಸ್ಯರು, ಕಾಂಗ್ರೆಸ್ಸಿನ ೩ ಸದಸ್ಯರು, ಪಕ್ಷೇತರ ೧ ಸದಸ್ಯರು ಇದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ ಬಣದ ಎಲ್ಲ ಸದಸ್ಯರು, ಕಾಂಗ್ರೆಸ್ ಪಕ್ಷದ ನರ್ಮದಾ ನಾಯ್ಕ ಅವರಿಗೆ ಬೆಂಬಲಿಸುವ ಬಗ್ಗೆ ನಿರ್ಣಯಿಸಲಾಗಿದೆ ಎನ್ನಲಾಗಿದೆ. ಆದರೆ, ರಾಜಕೀಯದಲ್ಲಿ ಏನೂ ಆಗಬಹುದು ಎಂಬುದನ್ನು ಅಲ್ಲಗಳೆಯಲಾಗದು.

Share this article