-ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಕೋಡಿಬಿದ್ದ ಹಿನ್ನೆಲೆ ಶಾಸಕ ಟಿ.ರಘುಮೂರ್ತಿ ಬಾಗಿನ
-----ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಇತ್ತೀಚೆಗೆ ಬಂದ ಉತ್ತಮ ಮಳೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಕೆರೆಗಳು ತುಂಬಿಹರಿಯುತ್ತಿರುವುದು ಸಂತಸ ತಂದಿದೆ. ವಿಶೇಷವಾಗಿ ನಗರಂಗೆರೆ ಕೆರೆ ಈ ವರ್ಷವೂ ತುಂಬಿ ಕೋಡಿ ಬಿದಿದ್ದ ಪರಿಣಾಮ ಈ ಭಾಗದ ಜನರಲ್ಲಿ ಸಂತೋಷ ಮನೆ ಮಾಡಿದೆ. ಗ್ರಾಮದ ಜನರಲ್ಲಿ ಹೊಸ ಉತ್ಸಾಹ ಕಾಣಲಾಗುತ್ತಿದೆ, ಕಳೆದ ೨೦೨೨ರಲ್ಲಿ ಭಾರಿ ಪ್ರಮಾಣದ ಜನರನ್ನು ಸೇರಿಸಿ ತೆಪ್ಪೋತ್ಸವ ಆಚರಿಸಲಾಗಿತ್ತು. ಮತ್ತೊಮ್ಮೆ ಗ್ರಾಮದ ಕೆರೆ ತುಂಬಿದ್ದು, ಈ ಭಾಗದಲ್ಲಿ ಇನ್ನೂ ಮುಂದೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಅವರು, ಬುಧವಾರ ಮಧ್ಯಾಹ್ನ ಕೋಡಿಬಿದ್ದ ನಗರಂಗೆರೆ ಕೆರೆಗೆ ಭೇಟಿ ನೀಡಿ, ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿದರು. ಪ್ರಸ್ತುತ ಈ ವರ್ಷದ ಮಳೆಯಲ್ಲಿ ಮೊದಲ ಬಾರಿಗೆ ಈ ಕೆರೆಕೋಡಿಬಿದ್ದಿರುವುದು ವಿಶೇಷ. ಗ್ರಾಮದ ಕೆರೆಯ ನೀರು ಸರಾಗವಾಗಿ ಹರಿಯುತ್ತಿದ್ದು, ಏನಾದರೂ ಸಮಸ್ಯೆ ಇದ್ದರೆ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಕೆಡಿಪಿ ಸದಸ್ಯ ಅಂಗಡಿರಮೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಫೇಸ್ವಾಮಿ, ಸದಸ್ಯರಾದ ಎಂ.ಕುಮಾರಸ್ವಾಮಿ, ಹಿದಾಯಿತ್ ವುಲ್ಲಾ, ಶೈಲಪ್ಪ, ಎನ್.ಮಂಜುನಾಥ, ಗ್ರಾಮದ ಮುಖಂಡರಾದ ಸಿ.ಓಬಯ್ಯ, ತಿಪ್ಫೇರುದ್ರಪ್ಪ, ಮೈಲಾರಪ್ಪ, ಸಣ್ಣಬೋರಣ್ಣ, ಪಾಲನೇತ್ರನಾಯಕ, ಮೈನಾಬಾಬು, ಡೈರಿಮಂಜಣ್ಣ, ಶಲ್ಯದ್ಯಾಮಣ್ಣ, ಅಂಗಡಿ ಬಸವರಾಜು, ವಸಂತಕುಮಾರ್, ಸುದರ್ಶನ್, ಮಂಜುನಾಥಯ್ಯ ಮುಂತಾದವರು ಪಾಲ್ಗೊಂಡಿದ್ದರು.----
ಪೋಟೋ: ೯ಸಿಎಲ್ಕೆ೧ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿನ ಅರ್ಪಿಸಿದರು.