ಬಿಜೆಪಿಯಿಂದ ಮೊಂಬತ್ತಿ ಮೆರವಣಿಗೆ

KannadaprabhaNewsNetwork |  
Published : Apr 24, 2025, 12:06 AM IST
23ಕೆಪಿಎಲ್30 ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ವತಿಯಿಂದ ಕಾಶ್ಮೀರ ಹತ್ಯೆಯನ್ನು ಖಂಡಿಸಿ, ಮೇಣಬತ್ತಿ ಮೆರವಣಿಗೆ ಮಾಡಲಾಯಿತು. | Kannada Prabha

ಸಾರಾಂಶ

ಭಾರತದ ಮೇಲೆ ಇಂಥ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ. ಇಂಥ ಘಟನೆಗೆ ಕಾರಣವಾದವರನ್ನು ಹುಡುಕಿ ಹೊಡೆಯಬೇಕು ಮತ್ತು ಇಂಥ ದುಷ್ಟ ಶಕ್ತಿಗಳ ಸಂಹಾರ ಮಾಡಬೇಕು.

ಕೊಪ್ಪಳ:

ಕಾಶ್ಮೀರದ ನರಮೇಧದಲ್ಲಿ ಮೃತಪಟ್ಟವರಿಗೆ ಬಿಜೆಪಿ ವತಿಯಿಂದ ನಗರದಲ್ಲಿ ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಬಸವೇಶ್ವರ ದೇವಸ್ಥಾನದಿಂದ ಅಶೋಕ ವೃತ್ತದ ವರೆಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಕೈಯಲ್ಲಿ ಮೇಣಬತ್ತಿ ಹಿಡಿದು ಹೆಜ್ಜೆ ಹಾಕಿದರು.

ಭಯೋತ್ಪಾದಕರು ಹಾಗೂ ಪಾಕಿಸ್ತಾನ ವಿರುದ್ಧ ಘೋಷಣೆ ಹಾಕಲಾಯಿತು. ಭಾರತದ ಮೇಲೆ ಇಂಥ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ. ಇಂಥ ಘಟನೆಗೆ ಕಾರಣವಾದವರನ್ನು ಹುಡುಕಿ ಹೊಡೆಯಬೇಕು ಮತ್ತು ಇಂಥ ದುಷ್ಟ ಶಕ್ತಿಗಳ ಸಂಹಾರ ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಡಾ. ಬಸವರಾಜ ಕ್ಯಾವಟರ, ನೀಲಕಂಠಯ್ಯ ಹಿರೇಮಠ, ಮಹಾಲಕ್ಷ್ಮಿ ಕಂದಾರಿ, ವೀಣಾ ಬನ್ನಿಗೋಳ, ಗಣೇಶ, ಉಮೇಶ ಕುರಡೇಕರ, ಸುನಿಲ ಹೆಸರೂರು, ಶರಣಯ್ಯ ಹಿರೇಮಠ, ಪ್ರದೀಪ ಹಿಟ್ನಾಳ, ವಕೀಲರಾದ ಪರ್ವತ ಗೌಡ, ಸೋಮಣ್ಣ ಹಳ್ಳಿ, ಮಹೇಶ ಹಾದಿಮನಿ, ಗೀತಾ ಮುತ್ತಾಳ, ಜಯಶ್ರೀ ಗೊಂಡಬಾಳ, ಚನ್ನಬಸು ಗಾಳಿ, ಮಲ್ಲಿಕಾರ್ಜುನ ಹಟ್ಟಿ, ರವಿ ಪಾಟೀಲ್, ರಮೇಶ ಕವಲೂರ, ರಾಜು ವಸ್ತ್ರದ ಸೇರಿದಂತೆ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ