ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಮುರುಘಾ ಮಠದ ಆವರಣದಲ್ಲಿ ೨೪೦ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಬನದ ಹುಣ್ಣಿಮೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಜಡೆ ಮಠದ ಕರ್ತೃ ಗದ್ದುಗೆಗೆ ವಿಶೇಷವಾದ ಶಕ್ತಿ ಇದ್ದು, ಭಕ್ತರು ಶ್ರದ್ಧಾ ಭಕ್ತಿಯಿಂದ ನಡೆದುಕೊಂಡರೆ ಭಕ್ತರ ಕಷ್ಟಗಳು ಪರಿಹಾರವಾಗುವುದರ ಜತೆಗೆ ಭಕ್ತರ ಸಹಕಾರದಿಂದ ಹಿಂದಿನ ಕಾಲದಿಂದಲೂ ಮಠವು ಅಭಿವೃದ್ಧಿಯತ್ತ ಸಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಠದ ಅಭಿವೃದ್ದಿಗಾಗಿ ೨೫ ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿರುವುದು ಮಠಕ್ಕೆ ಇನ್ನಷ್ಟು ಮೆರಗು ತಂದಿದೆ ಎಂದರು.ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಜಡೆ ಮಠದಲ್ಲಿ ೪೮ ದಿನ ನಂದಾದೀಪ ಹಚ್ಚಿ ನಂತರ ಆರೋಗ್ಯ ಸುಧಾರಿಸಿ ರಾಜ್ಯ ಪ್ರವಾಸ ಕೈಗೊಂಡರು. ಅಷ್ಟೇ ಅಲ್ಲದೇ ಬಿ.ಎಸ್. ಯಡಿಯೂರಪ್ಪ ಕೂಡ ಮಠದ ಭಕ್ತರಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಿದ್ದರು ಎಂದರು.
ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ನಾಗೇಂದ್ರಪ್ಪ ಮಾತನಾಡಿ, ವಿಜ್ಞಾನ ಎಷ್ಟೋ ಮುಂದುರೆದರೂ ಸನಾತನ ಧರ್ಮ ಮತ್ತು ಗುರು ಪಂರಪರೆಯನ್ನು ಮರೆಯುವಂತಿಲ್ಲ. ಯಾತ್ರಿಂಕ ಜೀವನದಲ್ಲಿರುವ ಮನುಷ್ಯನಿಗೆ ಇಂದು ಆಧ್ಯಾತ್ಮಿಕ ವಿಚಾರಗಳು ಸ್ವಾಸ್ಥö್ಯತೆಯನ್ನು ನೀಡುತ್ತವೆ. ಮಾನವನ ಸಂಸ್ಕೃತಿ ಮಾತ್ರ ಬೆಳೆದಿಲ್ಲ ಎಂದರು.ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ಗೌಡ, ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಉಪಾಧ್ಯಕ್ಷ ಆರ್.ಬಿ. ರವಿಕುಮಾರ, ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ಜಿ.ಎಂ. ತೋಟಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಾಪಟ್, ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ನಾಗೇಂದ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾಜ ಸೇವಕ ಶಂಕರ್ ಶೇಟ್, ಜಿ.ಪಂ. ಮಾಜಿ ಸದಸ್ಯೆ ಕೆ.ಜೆ. ಲೋಲಾಕ್ಷಮ್ಮ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ, ಪೂರ್ಣಿಮಾ ಶಿವಯೋಗಿ, ಸುಧಾ ಶಿವಪ್ರಸಾದ್, ಮಾಲಾ ಶ್ರೀಧರ, ರೇಖಾ ಪಾಟೀಲ್, ಪ್ರದೀಪ್ಕುಮಾರ್, ಗಂಗಾಧರ ಮಾಸ್ತರ್, ಸಂದೀಪ್ ಯಲವಳ್ಳಿ, ರೇಣುಕಮ್ಮ ಗೌಳಿ ಇತರರು ಇದ್ದರು.