ಮೂಡುಬಿದಿರೆ: ಬೆಳೆಯುತ್ತಿರುವ ಮೂಡುಬಿದಿರೆ ಪೇಟೆಯಲ್ಲಿ ಅಪಾಯಕಾರಿಯಾಗಿದ ಬೆಳೆದಿರುವ ವಾಹನಗಳ ಪಾರ್ಕಿಂಗ್, ನಿಯಮೋಲ್ಲಂಘನೆಯ ಅಬ್ಬರ ಸೇರಿದಂತೆ 32ಕ್ಕೂ ಅಧಿಕ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಅಗತ್ಯ ಪರಿಹಾರ ಕಂಡುಕೊಳ್ಳಲು ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಆ. 27 ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜೊತೆ ಜಂಟಿ ಸಭೆ ಕರೆದಿರುವುದಾಗಿ ತಿಳಿದು ಬಂದಿದೆ. ವರ್ಷಗಳಿಂದ ಪರಿಹಾರ ಕಾಣದ ಸಂಚಾರ ಹಾಗೂ ಇತರ ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ''''''''ನಮ್ಮ ಮೂಡುಬಿದಿರೆ ಫೋರಂ'''''''' ಬುಧವಾರ ತಹಶೀಲ್ದಾರ್ ಅವರನ್ನು ಭೇಟಿಯಾಗಿ 31 ರಂದು ಪ್ರತಿಭಟನೆ ನಡೆಸುವ ಬಗ್ಗೆ ಮನವಿ ಸಲ್ಲಿಸಿದ ವೇಳೆ ಈ ಮಾಹಿತಿ ಲಭಿಸಿದೆ. ''''''''ನಮ್ಮ ಮೂಡುಬಿದಿರೆ ಫೋರಂ'''''''' ಕಳೆದ ಹಲವು ವರ್ಷಗಳಿಂದ ಫೋರಂ ವತಿಯಿಂದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುತ್ತಲೇ ಇದೆ. ಮನವಿಗಳು, ಸಭೆಗಳು, ದೂರವಾಣಿ ಸಂಪರ್ಕ ಹಾಗೂ ಫೋಟೋ ಮತ್ತು ವೀಡಿಯೋ ಸಾಕ್ಷ್ಯಗಳ ಮೂಲಕ ಸಮಸ್ಯೆಗಳನ್ನು ತಿಳಿಸಲಾಗಿದ್ದು, ಒಟ್ಟು 32 ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸಿ, ಅಗತ್ಯವಿರುವ ಪರಿಹಾರಗಳೊಂದಿಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ಬಳಿಕ 6 ಪ್ರಮುಖ ಸಮಸ್ಯೆಗಳಿಗೆ 10 ದಿನಗಳೊಳಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳು, ತಹಸೀಲ್ದಾರ್ ಹಾಗೂ ಮೂಡುಬಿದಿರೆ. ಸಮಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಹಲವು ಸಮಸ್ಯೆಗಳು ಇನ್ನೂ ಬಗೆಹರಿ ಉಳಿದಿವೆ ಎಂದು ಫೋರಂ ಅಸಮಾಧಾನ ವ್ಯಕ್ತಪಡಿಸಿದೆ.
ನಮ್ಮ ಮೂಡುಬಿದಿರೆ ಫೋರಂನ ಯಾಸೀರ್, ದಿನೇಶ್ ಶೆಣೈ , ಕೌಸ್ತುಬ್ ಜೈನ್, ಅಡ್ವಕೇಟ್ ಇರ್ಷಾ ಪ್ರಕಾಶ್ ಸಪಲಿಗ ಹಾಗೂ ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.