)
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಸನ ಜಿಲ್ಲೆ ಹಣ್ಣಿನಕೆರೆ ಗ್ರಾಮದ ನಿವಾಸಿ ಜಯಮ್ಮ (70) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತರ ಮಗಳು ಭಾಗ್ಯಲಕ್ಷ್ಮೀ ಹಾಗೂ ಕುಶಾಲ್ ಬಂಧಿತರಾಗಿದ್ದಾರೆ. ಮನೆಯಲ್ಲಿ ಸೋಮವಾರ ಸಂಜೆ ಮದ್ಯ ಸೇವನೆ ವಿಚಾರವಾಗಿ ಅಜ್ಜಿ, ಮಗಳು, ಮೊಮ್ಮಗನ ಮಧ್ಯೆ ಉಂಟಾದ ಜಗಳವು ಕೊಲೆ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಭಾಷ್ ನಗರದ ಮೋನಿಷಾ ಎನ್ಕ್ಲೇವ್ನ ಒಂದನೇ ಮಹಡಿಯ ಫ್ಲಾಟ್ ನಂ.107 ರಲ್ಲಿ ಭಾಗ್ಯಲಕ್ಷ್ಮಿ ಮತ್ತು ಅವರ ಮಗ ಕುಶಾಲ್ ವಾಸವಿದ್ದರು. ಮಗಳ ಮನೆಗೆ ಆಗಾಗ್ಗ ಭಾಗ್ಯಲಕ್ಷ್ಮೀ ತಾಯಿ ಜಯಮ್ಮ ಬಂದು ಹೋಗುತ್ತಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ ಮದ್ಯ ಸೇವಿಸಿ ಮನೆಯಲ್ಲಿ ತಾಯಿ-ಮಗ ಮಾಡುತ್ತಿದ್ದರು. ಇದರಿಂದ ಅಪಾರ್ಟ್ಮೆಂಟ್ನ ಇತರೆ ವಾಸಿಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಕುಶಾಲ್ ತಂದೆ ಕೃಷ್ಣನಾಯ್ಕ್ ಅವರ ಬಳಿ ನಿವಾಸಿಗಳು ದೂರು ನೀಡಿದರು.ಆಗ ಕುಶಾಲ್ನನ್ನು ಕುಡಿತ ಬಿಡಿಸಲು ಪುನರ್ವಸತಿ ಕೇಂದ್ರಕ್ಕೆ ತಂದೆ ಕೃಷ್ಣನಾಯಕ್ ದಾಖಲಿಸಿದರು. ಕೆಲ ದಿನಗಳ ಬಳಿಕ ಆತ ಮನೆಗೆ ಮರಳಿ ಮತ್ತೆ ಚಾಳಿ ಮುಂದುವರೆಸಿದ. ಮತ್ತೆ ಅಮ್ಮ ಮಗ ಕುಡಿದು ಗಲಾಟೆ ಮಾಡುತ್ತಿದ್ದರು. ಇತ್ತೀಚಿಗೆ ಮಗಳ ಮನೆಗೆ ಜಯಮ್ಮ ಬಂದಿದ್ದರು. ಮೂರ್ನಾಲ್ಕು ದಿನಗಳಿಂದ ಅವರ ಫ್ಲಾಟ್ ನಿಂದ ಜಾಸ್ತಿ ಗಲಾಟೆ ಕೇಳಿ ಬರುತ್ತಿತ್ತು. ಅಂತೆಯೇ ಸೋಮವಾರ ರಾತ್ರಿ ಸಹ ಜಗಳವಾಗಿದೆ. ಮದ್ಯ ಸೇವನೆಗೆ ಜಯಮ್ಮ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ತಾಯಿ-ಮಗ, ಅಜ್ಜಿ ಮೇಲೆ ಬ್ಯಾಟ್ ಮತ್ತು ದೊನ್ನೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿತ ಕಾರಣಕ್ಕೆ ಪತಿ ದೂರ