ರಾಜ್ಯ ಮಟ್ಟದ ಕಾರ್ಯಾಗಾರ ಸಮಾರೋಪ

KannadaprabhaNewsNetwork |  
Published : Jan 11, 2025, 12:49 AM IST
48 | Kannada Prabha

ಸಾರಾಂಶ

ನಾವು ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಜೊತೆಗೆ ಕೆಲಸದ ಮೇಲೆ ತೃಪ್ತಿ ಇರಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮತ್ತು ಬೆಂಗಳೂರು ವಿಭಾಗದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಎಂ.ಆರ್. ಡಬ್ಲ್ಯೂಗಳು, ಜಿಲ್ಲಾ ಪುನಶ್ಚತನ ಸಂಯೋಜಕರು ಮತ್ತು ಡಿ.ಡಿ.ಆರ್.ಸಿ ನೊಡಲ್ ಅಧಿಕಾರಿಗಳಿಗೆ 5 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶೇಷಚೇತನರ ಪುನಶ್ಚೇತನ ಹಾಗೂ ಆರೈಕೆದಾರರ ಸಬಲೀಕರಣ ಕಾರ್ಯಾಗಾರದ ಸಮಾರೋಪ ಸಮಾರಂಭವು ಸುತ್ತೂರಿನಲ್ಲಿ ನಡೆಯಿತು.

ವಿಶೇಷಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ ಹಾಗೂ ವಿಶೇಷಚೇತನರು ಹಾಗೂ ಆರೈಕೆದಾರರು ನಡುವೆ ಕಾರ್ಯನಿರ್ವಹಿಸುವ ಸ್ವಯಂ ಸೇವಾಸಂಸ್ಥೆಗಳ ಫೋರಂ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸಮಾರೋಪದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನಿರ್ದೇಶಕ ಟಿ. ರಾಘವೇಂದ್ರ ಮಾತನಾಡಿ, ತರಬೇತಿ ಪಡೆದುಕೊಂಡ ಮೇಲೆ ಅದರ ಉಪಯೋಗ ಅನುಷ್ಠಾನ ಮಾಡಿದಾಗ ಮಾತ್ರ ಶಿಬಿರ ಯಶಸ್ವಿಯಾಗುತ್ತದೆ ಎಂದರು.

ನಾವು ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಜೊತೆಗೆ ಕೆಲಸದ ಮೇಲೆ ತೃಪ್ತಿ ಇರಬೇಕು, ಬೇರೆಯವರರಿಂದ ನಿಯಂತ್ರಣ ಇರಬಾರದು, ಮಾಡುವ ಕೆಲಸದ ಮೇಲೆ ಜವಾಬ್ದಾರಿ ಇರಬೇಕು. ಜೊತೆಗೆ ಇರುವ ಸೌಲಭ್ಯವನ್ನು ಫಲಾನುಭವಿಗೆ ತಲುಪಿಸಬೇಕು. 25 ರಿಂದ 30 ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಬೇಕು, ಯೋಜನೆಯ ಮಾಹಿತಿ ನಿಮಗೆ ಸರಿಯಾದ ತಿಳುವಳಿಕೆ ಇರಬೇಕು ಎಂದರು.

ನಮ್ಮದು ಯೋಜನೆ ಆಧಾರಿತ ಇಲಾಖೆ ಅಲ್ಲ. ಯೋಜನೆಯ ಜೊತೆಗೆ ವಿವಿಧ ಬಗೆಯ ವಿಕಲಚೇತನ ಸಮಸ್ಯೆಗಳು ಇದ್ದವೇ. ವಿಕಲಚೇತನ ಇಲಾಖೆ ಶೇ. 50ರಷ್ಟು ಸ್ವಯಂ ಸೇವಕರಿಂದ ಅವಲಂಭಿತವಾಗಿದೆ. ಇಲ್ಲಿ ಸ್ವಯಂ ಸೇವಕರ ಕಾರ್ಯ ವೈಖರಿಯನ್ನು ಗೌರವಿಸಬೇಕು ಎಂದು ಅವರು ಹೇಳಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಪ್ರೊ.ಎಂ. ಪುಷ್ಪಾವತಿ ಮಾತನಾಡಿ, ನಮ್ಮ ಸಂಸ್ಥೆ 21 ವಿಕಲಚೇತನಯಲ್ಲಿ 14 ವಿಕಲಚೇತನ ಬಗ್ಗೆ ಕೆಲಸ ಮಾಡುತ್ತಿದೆ, 4 ದಿನದ ಮಗುವಿನಿಂದ ಹಿಡಿದು 100 ವರ್ಷದ ಮುದುಕರವರೆಗೂ ನಾವು ಇಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು.

ನಿಮ್ಮ ಗ್ರಾಮಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ನಮ್ಮ ಅವಶ್ಯಕತೆ ಎಲ್ಲಿ ಇದೆ ಎಂಬುದನ್ನು ತಿಳಿದು ಬಂದರೆ ನಾವು ಖಂಡಿತವಾಗಿಯೂ ಸೇವೆ ಮಾಡಲು ಸಿದ್ಧ ಎಂದು ಅವರು ತಿಳಿಸಿದರು.

ಕಳೆದ ವರ್ಷ 74 ಸಾವಿರ ರೋಗಿಗಳನ್ನು ನಮ್ಮ ಸಂಸ್ಥೆಯಲ್ಲಿ ಸಂದರ್ಶನ ಮಾಡಿದ್ದೇವೆ. ಮೂರು ಕೋಟಿ ವೆಚ್ಚದಲ್ಲಿ ಟೆರಪಿ ಪಾರ್ಕ್ ಮಾಡಿದ್ದೇವೆ. ನಿಮ್ಮರಲ್ಲ ಮೇಲೆ ಗುರುತಾರ ಜವಾಬ್ದಾರಿ ಇದೆ. ಅರ್ಲಿ ಇಂಟರ್ವೆನ್ಶನ್ ಮಾಡಿ ಅವರಿಗೆ ಅಗತ್ಯವಿರುವ ಚಿಕಿತ್ಸೆ ಜೊತೆಗೆ ಅವರ ಆಶಾ ಕಿರಣ ನೀವು ಆಗಬೇಕು ಎಂದು ಅವರು ತಿಳಿಸಿದರು.

ಅಂಗವಿಕಲ ವ್ಯಕ್ತಿಗಳ ರಾಜ್ಯ ಆಯುಕ್ತ ದಾಸ್‌ಸೂರ್ಯವಂಶಿ ಮಾತನಾಡಿ, ತಾವುಗಳು ಅಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು. ತಾವುಗಳು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವುದರಿಂದ ನಿಮ್ಮಗಳ ಸೇವೆ ಗಣನೀಯ ಎಂದರು.

ಇಲಾಖೆಯ ಜಂಟಿ ನಿರ್ದೇಶಕ ನಟರಾಜ ಮಾತನಾಡಿ, ಎಲ್ಲಾ ಶಿಬಿರಾರ್ಥಿಗಳಿಗೆ ಶುಭಾಶಯ ಕೋರಿದರು.

ಮಾಜಿ ಅಯುಕ್ತ ಕೆ.ವಿ. ರಾಜಣ್ಣ, ಮಾರ್ಗದರ್ಶಿ ಸಂಸ್ಥೆ ಮುಖ್ಯಸ್ಥೆ ಶಾಂತಲಕ್ಷ್ಮಿ, ಇಲಾಖೆಯ ರಾಜ್ಯ ಸಂಯೋಜಕ ನರಸಿಂಹ ಮೂರ್ತಿ, ಕೇಸಿಯರ್ಸ್ ವರ್ಲ್ಡ್ ವೇರ್ ಸಂಸ್ಥೆಯ ನಟೇಶ್, ಈಶಾನ್ಯ ಫೌಂಡೇಶನ್ ಸ್ವಾತಿ, ಅನುಪ್ ಸಿಂಹ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಮಾಂತೇಶ್, ಪ್ರವೀಣ್ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಯ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಎಂ.ಆರ್. ಡಬ್ಲ್ಯೂ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು