ಬನ್ನಂಜೆ ಜೀವನಾಧಾರಿತ ‘ಇಂದು ಎನಗೆ ಗೋವಿಂದ‘ ಚಿತ್ರ ಮುಹೂರ್ತ

KannadaprabhaNewsNetwork |  
Published : Mar 17, 2026, 02:45 AM IST
16ಗೋವಿಂದ | Kannada Prabha

ಸಾರಾಂಶ

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಿರ್ಮಾಣದಲ್ಲಿ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಡಾ. ಗೋವಿಂದಾಚಾರ್ಯರ ಜೀವನ ಚರಿತ್ರೆ ಆಧರಿತ ‘ಇಂದು ಎನಗೆ ಗೋವಿಂದ’ ಚಲನಚಿತ್ರದ ಮುಹೂರ್ತ ಇಲ್ಲಿನ ರಥಬೀದಿಯ ಅದಮಾರು ಮಠದ ಆವರಣದಲ್ಲಿ ಸೋಮವಾರ ನಡೆಯಿತು.

ಉಡುಪಿ: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಿರ್ಮಾಣದಲ್ಲಿ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಡಾ. ಗೋವಿಂದಾಚಾರ್ಯರ ಜೀವನ ಚರಿತ್ರೆ ಆಧರಿತ ‘ಇಂದು ಎನಗೆ ಗೋವಿಂದ’ ಚಲನಚಿತ್ರದ ಮುಹೂರ್ತ ಇಲ್ಲಿನ ರಥಬೀದಿಯ ಅದಮಾರು ಮಠದ ಆವರಣದಲ್ಲಿ ಸೋಮವಾರ ನಡೆಯಿತು.ಕಾರ್ತಿಕ್ ಸರಗೂರು ನಿರ್ದೇಶಿಸುತ್ತಿರುವ ಈ ಚಲನಚಿತ್ರದ ಮುಹೂರ್ತವನ್ನು ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿ ಶುಭ ಹಾರೈಸಿ, ಡಾ.ಬನ್ನಂಜೆ ಕುರಿತ ಚಲನಚಿತ್ರ ಎಲ್ಲರ ಮೇಲೂ ಪ್ರಭಾವ ಬೀರಲಿ ಎಂದು ಆಶಿಸಿದರು.

ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಛಾಯಾಗ್ರಹಣಕ್ಕೆ ಚಾಲನೆ ನೀಡಿ, ದೇಶ- ವಿದೇಶಗಳಲ್ಲೂ ಬನ್ನಂಜೆಯವರ ದೊಡ್ಡ ಶಿಷ್ಯ ಬಳಗ ಇದೆ. ತಾವು ಅರಂಭಿಸಿದ ‘ಸುಗುಣಮಾಲಾ’ದಲ್ಲಿ ಅವರು ಬರೆದ ವೇದಗಳ ಸಂದೇಶ ಶತಮಾನದಲ್ಲೇ ಬಂದ ಅಮೂಲ್ಯ ಸಂದೇಶ ಎಂದು ಸ್ಮರಿಸಿದರು.ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕ್ಲಾಪ್ ಫಲಕ ಅನಾವರಣಗೊಳಿಸಿ, ಡಾ.ಬನ್ನಂಜೆ ಎಲ್ಲ ಸಾಧಕರಿಗೂ ಜ್ಞಾನದ ಹಸಿವು ತಣಿಸಿದ ಧೀಮಂತರು ಎಂದು ಬಣ್ಣಿಸಿದರು.ವಿದ್ವಾಂಸ ಡಾ.ಕೃಷ್ಣರಾಜ ಭಟ್ ಕುತ್ಪಾಡಿ ಸ್ವಾಗತಿಸಿ, ನಿರೂಪಿಸಿದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವಿಶ್ವಸ್ಥೆ ಡಾ.ವೀಣಾ ಬನ್ನಂಜೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ಕಲೆಗಳಿಗೆ ಪ್ರಕೃತಿ ನಿಕಟ ಸಂಬಂಧ: ಟಿ.ಪಿ. ರಮೇಶ್
ಮೂಡುಬಿದಿರೆ ಇನ್ಸ್‌ಪೆಕ್ಟರ್ ಪ್ರಕರಣ: ಪೀಡಿತೆಯರಿದ್ದರೆ ದೂರು ನೀಡಲು ಸಲಹೆ