ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಹೊರಗುತ್ತಿಗೆ ವೈದ್ಯರ ನೇಮಿಸಿ
ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗೆ ಬರುವ ಒಳ ಹಾಗೂ ಹೊರ ರೋಗಿಗಳಿಗೆ ವೈದ್ಯರು ಯಾವುದೇ ಲೋಪವಿಲ್ಲದಂತೆ ಚಿಕಿತ್ಸೆ ನೀಡಬೇಕು, ಶಿಶು ಹಾಗೂ ತಾಯಿ ಮರಣವನ್ನು ತಡೆಯಬೇಕು, ವೈದ್ಯರ ಕೊರತೆಯಿದ್ದರೆ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ರೋಗಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕೆಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಪುಟ್ಟ ಕಂದಮ್ಮಗಳಿಗೆ ಪೌಷ್ಟಿಕ ಆಹಾರ ಕಲ್ಪಿಸುವ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಪೌಷ್ಟಿಕ ಆಹಾರ ಮಕ್ಕಳಿಗೆ ದೊರೆಯುವಂತೆ ಸಿಡಿಪಿಒ ಇಲಾಖೆ ನೋಡಿಕೊಳ್ಳಬೇಕು. ಕಟ್ಟಡಗಳು ಶಿಥಿಲವಾಗಿದ್ದರೆ ತಕ್ಷಣವೇ ದುರಸ್ತಿಗೊಳಿಸಲು ಸೂಚಿಸಿದರು. ಎಷ್ಟು ಕೇಂದ್ರಗಳಲ್ಲಿ ಕಾರ್ಯಕರ್ತೆಯರಿಲ್ಲ ಹಾಗೂ ಸಹಾಯಕರಿಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಲೂ ಸೂಚಿಸಲಾಗಿದೆ ಎಂದರು.
ಶೇ. ೯೫ರಷ್ಟು ಅನುದಾನ ಬಳಕೆತಾಲೂಕು ಪಂಚಾಯ್ತಿಯಲ್ಲಿ ಶೇ ೯೫ರಷ್ಟು ಅನುದಾನವನ್ನು ಬಳಸಿಕೊಳ್ಳಲಾಗಿದೆ ಮುಂದಿನ ವರ್ಷ ಶೇ ೧೦೦ರಷ್ಟು ಪ್ರಗತಿ ಕಾಣಬೇಕೆಂದು ಇಒ ರವರಿಗೆ ಸೂಚಿಸಲಾಗಿದೆ ಎಂದರಲ್ಲದೆ ಸರ್ಕಾರ ಗ್ರಾಮೀಣ ಜನರ ಬದುಕು ಹಸನಾಗಲೆಂದು ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ, ಅದನ್ನು ಅನುಷ್ಠಾನ ಮಾಡುವುದು ಅಧಿಕಾರಿಗಳ ಹೊಣೆ. ಅಧಿಕಾರಿಗಳು ಜವಾಬ್ದಾರಿಯಿಂದ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ಪಾಲಿಸಿದರೆ ಎಲ್ಲಾ ಯೋಜನೆಗಳು ಅರ್ಹರಿಗೆ ತಲುಪಿ ಸರ್ಕಾರದ ಉದ್ದೇಶ ಈಡೇರುವುದರಲ್ಲಿ ಅನುಮಾನವೇ ಇಲ್ಲವೆಂದರು.ಸಭೆಯಲ್ಲಿ ತಾಪಂ ಇಒ ರವಿಕುಮಾರ್, ಸಿಡಿಪಿಒ ಮುನಿರಾಜು, ಬಿಸಿಯೂಟ ಅಧಿಕಾರಿ ಯುವರಾಜು, ಬಿಇಒ ಗುರುಮೂರ್ತಿ, ಟಿಹೆಚ್ಒ ಸುನೀಲ್ ಕುಮಾರ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು.