ಪುರಸಭೆ : ಶಾಸಕರ ಮಧ್ಯೆ ಮಾತಿನ ಚಕಮಕಿ

KannadaprabhaNewsNetwork |  
Published : Nov 20, 2024, 12:31 AM IST
ಚಿತ್ರ 19ಬಿಡಿಆರ್‌4ಹುಮನಾಬಾದ್‌  ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಅವರ ಮಧ್ಯೆ ಮಾತಿನ ಚಕುಮಕಿ ನಡೆಯಿತು. | Kannada Prabha

ಸಾರಾಂಶ

ಹುಮನಾಬಾದ್‌: ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ರವರ ಮಧ್ಯೆ ಮಾತಿನ ಚಕುಮಕಿ ನಡೆದು ಕೆಲ ಕಾಲ ಸಭೆಯು ಉದ್ರಿಕ್ತಗೊಂಡಿತ್ತು.

ಹುಮನಾಬಾದ್‌: ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ರವರ ಮಧ್ಯೆ ಮಾತಿನ ಚಕುಮಕಿ ನಡೆದು ಕೆಲ ಕಾಲ ಸಭೆಯು ಉದ್ರಿಕ್ತಗೊಂಡಿತ್ತು.ಪಟ್ಟಣದ ಪುರಸಭೆಯಲ್ಲಿ ಒಂದು ವರ್ಷದ ಬಳಿಕ ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರಿ ಶಾಸಕರ ಕುಟುಂಬಕ್ಕೆ ಸೇರಿದ ಮೌನೇಶ್ವರ ಶಾಲೆಯು ಪುರಸಭೆಯ ಆಸ್ತಿಯಾಗಿದ್ದು, ಈ ಆಸ್ತಿಯನ್ನು ಶಾಲೆಗೆ ಬಾಡಿಗೆಗೆ ನೀಡಲಾಗಿದ್ದು, ವಾಪಸ್‌ ಪಡೆಯುವಂತೆ ಸಭೆಯ ನಡುವಳಿಕೆಯಲ್ಲಿ ನೋಂದಾಯಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.

ಬಳಿಕ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಅವರು ಮೌನೇಶ್ವರ ಶಾಲೆಯ ಜೊತೆಗೆ ಪುರಸಭೆಗೆ ಸೇರಿದ ರುದ್ರಂ ಬಾರ್‌, ಅಧ್ಯಕ್ಷರ ಮನೆ, ಸಾಯಿಬಾಬಾ ಮಂದಿರ ಹಿಂಬದಿಯ ಆಸ್ತಿಯು ಸಹಿತ ಪುರಸಭೆಗೆ ಸೇರಿದೆ. ಅದನ್ನು ಮರಳಿ ಪುರಸಭೆಗೆ ವಾಪಸ್‌ ಪಡೆಯುವಂತೆ ಸಭೆಯ ನಡುವಳಿಕೆಯಲ್ಲಿ ನಮೂದಿಸುವಂತೆ ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ ಕೆಲ ಸಮಯ ಶಾಸಕ ಹಾಗೂ ವಿಧಾನ ಪರಿಷತ್‌ ಸದಸ್ಯರ ಮಧ್ಯೆ ಮಾತಿನ ಚಕುಮಕಿಯ ಪ್ರಸಂಗ ಜರುಗಿತು.ಅದಕ್ಕೂ ಮುನ್ನ ವೀರಭದ್ರೇಶ್ವರ ದೇವಸ್ಥಾನಕ್ಕೆ ಸೇರಿದ 6.3 ಎಕರೆ ಗ್ರಾಮ ಠಾಣಾ ಜಮೀನು ಸುತ್ತಲು ಗೋಡೆ ನಿರ್ಮಾಣಕ್ಕೆ ಪುರಸಭೆಯಿಂದ ಅನುಮತಿ ನೀಡುವಂತೆ ಕೊರಲಾಗಿತ್ತು. ಅದಕ್ಕೆ ಶಾಸಕರು ದೇವಸ್ಥಾನ ಜಾಗದಲ್ಲಿ ಯಾವುದೇ ಅನಧಿಕೃತ ಕಟ್ಟಡವಿಲ್ಲದ ಕಾರಣ ಗೋಡೆ ನಿರ್ಮಾಣದ ಅವಶ್ಯಕತೆಯಿಲ್ಲ ಅಲ್ಲದೇ ಅದಕ್ಕೆ ಪೂರಕ ದಾಖಲೆಗಳು ಇಲ್ಲ ಎಂದು ವಾದಿಸಿದರು. ತನಿಖೆಗೆ ಆಗ್ರಹ :

ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಮಾತನಾಡಿ, ಪುರಸಭೆ ಉದ್ಯಾನವನದಲ್ಲಿ ನಿರ್ಮಿಸಲಾದ ಟೌನ್‌ ಹಾಲ್‌ ಪುರಸಭೆಗೆ ಹಸ್ತಾಂತರಿಸಿದ್ದು, ಇಗೀಗ ಅದರಲ್ಲಿರುವ ಎಸಿ, ವಿದ್ಯುತ್‌ ಉಪಕರಣಗಳು, ಕುರ್ಚಿ ಸೇರಿದಂತೆ ಅನೇಕ ಸಾಮಾನುಗಳು ಮಾಯವಾಗಿವೆ. ಈ ಕುರಿತು ತನಿಖೆ ನಡೆಸಿ ಶಿಘ್ರದಲ್ಲೇ ಟೆಂಡರ್‌ ಕರೆಯುವ ಮೂಲಕ ನಿರ್ವಹಣೆಗೆ ಖಾಸಗಿಯವರಿಗೆ ನೀಡುವಂತೆ ಆಗ್ರಹಿಸಿದರು.2019ರಲ್ಲಿ ಲಕ್ಷಾಂತರ ರುಪಾಯಿ ಅನುದಾನದಲ್ಲಿ ನಿರ್ಮಿಸಲಾದ ಯುಜಿಡಿ ಕಾಮಗಾರಿ ಅಪೂರ್ಣವಿದ್ದು, ಲೋಕಾಯುಕ್ತ ತನಿಖೆಗೆ ಸರ್ವ ಸದಸ್ಯರು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕ್ರಮಜಾ, ಸದಸ್ಯ ಅಫ್ಸರಮಿಯ್ಯ, ಎಂಎ ಬಾಸೀದ್‌, ರಮೇಶ ಕಲ್ಲೂರ, ಕಾಳಪ್ಪ (ಸುನೀಲ) ಪಾಟೀಲ್‌, ಧನಲಕ್ಷ್ಮಿ, ವಿಜಯಕುಮಾರ ಹಾಗೂ ವಿರೇಶ ಸೀಗಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ