ಹಳಿಯಾಳ: ಆಸ್ತಿಯಲ್ಲಿ ಪಾಲು ಕೇಳಿದ ಮಗನನನ್ನೆ ಕೊಲೆ ಮಾಡಿದ ಅಪ್ಪ-ಅಮ್ಮ ಹಾಗೂ ಅವರಿಗೆ ಸಹಕರಿಸಿದ ಇನ್ನೋರ್ವ ಮಗನಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹಳಿಯಾಳ ತಾಲೂಕಿನ ಬಿದ್ರೋಳ್ಳಿ ಗ್ರಾಮದಲ್ಲಿ 2019ರಲ್ಲಿ ಈ ಕೊಲೆ ನಡೆದಿತ್ತು.
ಪಾಂಡುರಂಗ ಕಿತ್ತೂರಕರ ಅವರು ತಮ್ಮ ಪತ್ನಿ ಲತಾ (ತುಳಸಾಯಿ) ಕಿತ್ತೂರಕರ್ ಹಾಗೂ ಕಿರಿಯ ಮಗ ಅಕ್ಷಯ (ಆಕಾಶ್) ಕಿತ್ತೂರಕರ ಜತೆ ಸೇರಿ ಕೇಶವ್ ಕಿತ್ತೂರಕರ್ ಕೊಲೆ ಮಾಡಿದ್ದರು. ಕೊಲೆ ಮಾಡಿದ ಮರುದಿನ ಬಿದ್ರೋಳ್ಳಿ ಗ್ರಾಮದ ಗಣಪತಿ ಯಲ್ಲಪ್ಪಾ ಕಿತ್ತೂರಕರ್ ಹಾಗೂ ಲಕ್ಷ್ಮಣ ಕೇದಾರಿ ಕಿತ್ತೂರಕರ್ ಅವರ ಸಹಾಯ ಪಡೆದು ಸಾಕ್ಷಿ ನಾಶದ ಪ್ರಯತ್ನ ನಡೆಸಿದ್ದ ಕುರಿತು ಅಂದಿನ ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ್ ಅವರು ಪ್ರಕರಣ ದಾಖಲಿಸಿಕೊಂಡು ಸಮಗ್ರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ ಅವರು ವಾದ ಮಂಡಿಸಿದ್ದರು. ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಲಯ ಶುಕ್ರವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಕೊಲೆ ಪ್ರಕರಣದಲ್ಲಿ ಮೂವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಯಲ್ಲಾಪುರ ಪೀಠಾಸಿನ ನ್ಯಾಯಾಧೀಶರಾದ ಕಿರಣ ಕಿಣಿ ಈ ತೀರ್ಪು ನೀಡಿದರು.
ನ್ಯಾಯಾಲಯದ ಸತತ ಆದೇಶಗಳು ಹಾಗೂ ವಾರಂಟ್ಗಳನ್ನು ಲೆಕ್ಕಿಸದೆ ಬರೋಬ್ಬರಿ 4 ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ವಂಚನೆ ಪ್ರಕರಣದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಕಾರವಾರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸುದೀರ್ಘ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗುರು ನಾಯಕ್ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು, ಇವರ ಕರ್ತವ್ಯನಿಷ್ಠೆ ಹಾಗೂ ಕಾರ್ಯವೈಖರಿಯನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.