ಮುರ್ಕುಂಡೇಶ್ವರ ಟ್ರೋಫಿ: ಹೆಗಡೆ ತಂಡ ಚಾಂಪಿಯನ್

KannadaprabhaNewsNetwork |  
Published : Apr 08, 2025, 12:30 AM IST
ವಾಲಿಬಾಲ್ ಪಂದ್ಯಾವಳಿಯನ್ನು ರಾಜಗೋಪಾಲ ಅಡಿ ಉದ್ಘಾಟಿಸಿದರು  | Kannada Prabha

ಸಾರಾಂಶ

ಅಧ್ಯಕ್ಷತೆಯನ್ನು ಪ್ರದೀಪ್ ನಾಯ್ಕ್ ದೇವರಬಾವಿ ವಹಿಸಿದ್ದರು.

ಕಾರವಾರ: ಕುಮಟಾ ತಾಲೂಕಿನ ಕತಗಾಲದ ಅಕ್ಷರಕಲಾ ಯುವಕ ಸಂಘ ಆಶ್ರಯದಲ್ಲಿ ನಡೆದ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮುರ್ಕುಂಡೇಶ್ವರ ಸೌಹಾರ್ದ ಟ್ರೋಫಿಯಲ್ಲಿ ಹೆಗಡೆ ಶಾಂತಿಕಾಂಬಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕೃಷ್ಣಾನಂದ ವೆರ್ಣೇಕರ್ ಸಾರಥ್ಯದಲ್ಲಿ ನಡೆದ ರಾಘವೇಂದ್ರ ಪಿ.ನಾಯಕ ಪ್ರಾಯೋಜಕತ್ವದ ಮುರ್ಕುಂಡೇಶ್ವರ ಸೌಹಾರ್ಧ ಟ್ರೋಫಿಯ ಉದ್ಘಾಟನೆಯನ್ನು ಗೋಕರ್ಣದ ರಾಜಗೋಪಾಲ್ ಅಡಿ ಗುರೂಜಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಪ್ರದೀಪ್ ನಾಯ್ಕ್ ದೇವರಬಾವಿ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಅಂಕಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸೂರಜ್ ನಾಯ್ಕ್ ಸೋನಿ, ಗೋಪಾಲಕೃಷ್ಣ ನಾಯಕ್ ಅಂಕೋಲಾ, ರವಿಕುಮಾರ್ ಶೆಟ್ಟಿ ಕುಮಟಾ, ಮುರ್ಕುಂಡೇಶ್ವರ ಸೌಹರ್ದ ಕ್ರೆಡಿಟ್ ನ ಅಧ್ಯಕ್ಷ ರಾಘವೇಂದ್ರ ಪಿ.ನಾಯಕ, ಭಾಸ್ಕರ್ ಪಟಗಾರ, ರತ್ನಾಕರ ನಾಯ್ಕ್, ಎಸ್.ಎಂ. ಭಟ್ ಕತಗಾಲ, ಎಸ್.ಎಸ್. ಕೊರವರ ಪಾಲ್ಗೊಂಡಿದ್ದರು.

ನಾಗರಾಜ್ ಹೆಗಡೆ ಕಡತೋಕ, ಲಕ್ಷ್ಮೀನಾರಾಯಣ ಶಾನಭಾಗ ದಕ್ಕೆ, ರಾಮಚಂದ್ರ ಎನ್.ಪೈ, ಗಣಪತಿ ಎನ್. ಗುನಗಾ, ಅಣ್ಣಪ್ಪ ಮುಕ್ರಿ, ಕೆ.ಎನ್. ಮಂಜು ಅವರನ್ನು ಸನ್ಮಾನಿಸಲಾಯಿತು.

ಪಂದ್ಯಾವಳಿಯ ಪ್ರಥಮ ಬಹುಮಾನವನ್ನು ಪ್ರದೀಪ ನಾಯಕ್ ದೇವರಬಾವಿ ಹಾಗೂ ಗೋಪಾಲಕೃಷ್ಣ ನಾಯಕ್ ಅಂಕೋಲಾ ನೇತೃತ್ವದ "ಶಾಂತಿಕಾಂಬಾ ಹೆಗಡೆ " ತಂಡ, ದ್ವಿತೀಯ ಬಹುಮಾನವನ್ನು ಸೂರಜ್ ನಾಯ್ಕ್ ಸೋನಿ ಮತ್ತು ದೀಪಕ್ ಹನೇಹಳ್ಳಿ ನೇತೃತ್ವದ "ಗುಬ್ಬಿ ರವಿ ಫ್ರೆಂಡ್ಸ್ ಬೆಂಗಳೂರು " ತಂಡ, ತೃತೀಯ ಬಹುಮಾನವನ್ನು ಯುವ ಕ್ರೀಡಾ ಪ್ರೇಮಿಗಳಾದ ರೋಷನ್.ಎನ್.ನಾಯಕ ಕಾರೆಬೈಲ್ ಹಾಗೂ ಪ್ರಶಾಂತ್ ಎಸ್.ನಾಯಕ ಆಂದ್ಲೆ ಅವರ ನೇತೃತ್ವದ "ಚೆನ್ನೈ ಫ್ರೆಂಡ್ಸ್ " ತಂಡ ಹಾಗೂ ಚತುರ್ಥ ಬಹುಮಾನವನ್ನು ರವಿಕುಮಾರ್ ಶೆಟ್ಟಿ ನೇತೃತ್ವದ "ಕೇರಳ ಸ್ಪೈಕರ್ಸ್ " ತಂಡಗಳು ಪಡೆದುಕೊಂಡವು.

ದಿ.ರೇಖಾ ಗುರುದತ್ತ ಭಟ್ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಿದ ಪಂದ್ಯಾವಳಿಯನ್ನು 10 ಸಾವಿರ ಜನರು ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ