ಚಿಕ್ಕಮಗಳೂರು: ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ. ಇಸ್ಲಾಂ ತನ್ನ ಮೂಲ ಸ್ವರೂಪ ಬದಲಿಸಿಕೊಳ್ಳಬೇಕು. 1400 ವರ್ಷಗಳ ಹಿಂದಿನ ಬರ್ಬರತೆಯನ್ನೇ ಇಂದಿಗೂ ಅಳವಡಿಸಿಕೊಳ್ಳುವುದು ಜಗತ್ತಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೂ ಒಳ್ಳೆಯದಲ್ಲ. ಭಯೋತ್ಪಾದಕರು ಎಂದರೆ ಬಹು ದೊಡ್ಡ ಪಾಲು ಮುಸಲ್ಮಾನರು ಎಂಬುದನ್ನು ಆ ಸಮುದಾಯ ಚಿಂತನೆ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದರು.
ಇಂದು ಎಲ್ಲಾ ಧರ್ಮ ಗ್ರಂಥಗಳನ್ನು ಚರ್ಚೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ. ಭಗವದ್ಗೀತೆ, ವೇದ, ಉಪನಿಷತ್ತು, ವಚನಗಳು, ಕುರಾನ್, ಬೈಬಲ್ ಗಳನ್ನು ಚರ್ಚೆಗೆ ಒಳಪಡಿಸಿ ಮಾನವ ಕುಲಕ್ಕೆ ಹಾಗೂ ಜಗತ್ತಿಗೆ ಹಿತಕಾರಿಯಾದ ಅಂಶಗಳನ್ನು ಅಷ್ಟೇ ಧರ್ಮ ಗ್ರಂಥಗಳಲ್ಲಿ ಉಳಿಸಿಕೊಳ್ಳಬೇಕು. ನೆಮ್ಮದಿ ಹಾಳು ಮಾಡುವ ಅಂಶಗಳನ್ನು ಧರ್ಮ ಗ್ರಂಥಗಳಿಂದ ತೆಗೆದು ಹಾಕಬೇಕು ಎಂದರು.
ಖಾಲಿ ಜಾಗದಲ್ಲಿ ಎಷ್ಟೇ ದೊಡ್ಡದಾದ ಮಸೀದಿಯನ್ನಾದರೂ ಕಟ್ಟಲಿ. ಕೇಳಿದಲ್ಲಿ ಅದಕ್ಕೆ ನಾವೇ ಜಾಗವನ್ನು ದಾನ ಕೊಡುತ್ತೇವೆ. ಆದರೆ ದೇವಸ್ಥಾನಗಳನ್ನು ಹೊಡೆದು ಮಸೀದಿ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ ಅವರು, ದೇವಸ್ಥಾನ ಒಡೆದು ಕಟ್ಟಿರುವ ಮಸೀದಿಗಳನ್ನು ಬಿಡಲೇಬೇಕು ಎಂದು ಒತ್ತಾಯಿಸಿದರು.