ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಆಕಾಶದಲ್ಲಿ ನಿಗೂಢ ಆಕೃತಿ ಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ಸುಮಾರು 5 ಗಂಟೆಯ ವೇಳೆ ನಡೆದಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಆಕಾಶದಲ್ಲಿ ನಿಗೂಢ ಆಕೃತಿ ಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ಸುಮಾರು 5 ಗಂಟೆಯ ವೇಳೆ ನಡೆದಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ಗೋಲಾಕಾರದ ಈ ಆಕೃತಿ, ಜನರಲ್ಲಿ ತೀವ್ರ ಕುತೂಹಲ ಹಾಗೂ ಆತಂಕ ಮೂಡಿಸಿತು. ಸಂಜೆ ಸುಮಾರು ಒಂದು ಗಂಟೆ ಕಾಲ ಸತತ ಕಾಣಿಸಿಕೊಂಡ ಈ ನಿಗೂಢ ಆಕೃತಿ ಕಂಡು ಗ್ರಾಮಸ್ಥರ ಕೆಲಕ್ಷಣ ದಂಗಾದರು. ಹಲವರು ತಮ್ಮ ಮೊಬೈಲ್ನಲ್ಲಿ ಈ ನಿಗೂಢ ಆಕೃತಿಯನ್ನು ಸೆರೆ ಹಿಡಿದರು. ನಮ್ಮ ಗ್ರಾಮಕ್ಕೆ ಏಲಿಯನ್ಸ್ ಬಂದಿರಬಹುದು ಎಂದು ಜನ ಮಾತಾಡಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.