- ಜಿಲ್ಲಾ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೌಕರರ ಸಂಘ ಜಿಲ್ಲಾಧಿಕಾರಿ ಮೀನಾಗೆ ಮನವಿ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಡಾಟಾ ಆಪರೇಟರ್ಗಳು ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಕಚೇರಿ ಆಪರೇಟರ್ಗಳಿಗೆ ನಿಗಧಿತ ಸಮಯಕ್ಕೆ ಸಂಬಳ ದೊರೆಯದಿರುವ ಹಿನ್ನೆಲೆಯಲ್ಲಿ ನಿತ್ಯದ ಖರ್ಚು ವೆಚ್ಚ ಹಾಗೂ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಸಂಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕಿನ ಹೋಬಳಿಯ ನಾಡ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಡಾಟಾ ಆಪರೇಟರ್ಗಳಾಗಿ ಕೆಲಸ ಮಾಡಲಾಗುತ್ತಿದ್ದರೂ ಹಲವಾರು ತಿಂಗಳಿಂದ ಸರಿಯಾದ ವೇತನ ಪಾವತಿಯಾಗುತ್ತಿಲ್ಲ ಹಾಗೂ ಪಿಎಫ್ ಹಣ ಸಂದಾಯದ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಹೇಳಿದರು.ಈಗಾಗಲೇ ಜಿಲ್ಲಾಧಿಕಾರಿಗಳ ಹಂತದಲ್ಲಿ ಟೆಂಡರ್ ಮಂಜೂರಾಗಿದ್ದರೂ ನಾಡ ಕಚೇರಿಗಳಿಗೆ ನಿಗಧಿತ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಹೀಗಾಗಿ ಬಾಕಿ ಉಳಿದ ವೇತನ ಪಾವತಿಸಬೇಕು. ಆಪರೇಟರ್ ಗಳಿಗೆ ಆರೋಗ್ಯ ಅಥವಾ ಸ್ವಂತ ಯಾವುದೇ ಸಮಸ್ಯೆಗಳಿದ್ದಲ್ಲಿ ಒಂದು ದಿನದಮಟ್ಟಿನ ರಜೆ ಸಿಗುತ್ತಿಲ್ಲ, ರಜೆ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವೈ.ಜಿ.ಕಿರಣ್, ಸಹ ಕಾರ್ಯದರ್ಶಿ ಮುರುಗೇಶ್, ಖಜಾಂಚಿ ಅರುಣ್ ಕುಮಾರ್, ಸದಸ್ಯರಾದ ಮುಕ್ತಿಯಾರ್ ಅಹ್ಮದ್, ಆಶಾ, ಡಿ.ಎಸ್.ದಿವ್ಯ, ಎಚ್.ಸಿ.ಸತೀಶ್, ಎಸ್. ರಂಜಿತ, ಎಂ.ಪುಷ್ಪಾವತಿ, ತಿಪ್ಪೇಶ್ನಾಯ್ಕ, ಶ್ರೀನಿವಾಸ್, ಎಚ್.ಜಿ.ಸಚಿನ್ಕುಮಾರ್ ಹಾಜರಿದ್ದರು.5 ಕೆಸಿಕೆಎಂ 3