ಕೊರಟಗೆರೆ: ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಹೊಳವನಹಳ್ಳಿ ಗ್ರಾಮದ ನಾಗರಕೆರೆ ತುಂಬಿದ್ದು, ಕೆರೆಯ ಏರಿ ಬಿರುಕು ಬಿಟ್ಟಿದ್ದರಿಂದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿದ್ದು, ಹೊಳವನಹಳ್ಳಿ ಗ್ರಾಮದ ನಾಗರಕೆರೆಗೆ ಸಾಕಷು ನೀರು ಬಂದಿದೆ. ಇದರಿಂದಾಗಿ ಏರಿ ಮೇಲೆ ಸ್ವಲ್ಪ ಬಿರುಕು ಕಾಣಿಸಿದೆ. ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಗ್ರಾಪಂ ಪಿಡಿಒ ವಸಂತಕುಮಾರ್, ಆರ್.ಐ. ಜಯಪ್ರಕಾಶ್, ಸಲ್ಮಾನ್, ಜಯರಾಮು, ಸಣ್ಣರಂಗಪ್ಪ, ನರಸಿಂಹಮೂರ್ತಿ, ಉಮೇಶ್, ಮಲ್ಲಿಕಾರ್ಜುನಯ್ಯ, ರಾಜೇಶ್, ಕಾಮಣ್ಣ, ಶಂಶಾದ್, ಶ್ರೀನಿವಾಸ್ ರಾಮಣ್ಣ, ಸೇರಿದಂತೆ ಇತರರು ಇದ್ದರು.