ನಂದಿತಾವರೆ ಗ್ರಾಮ ಫಲಕ ಚರಂಡಿ ಮೇಲೆ ಬಿದ್ದರೂ ನೋಡೋರಿಲ್ಲ?!

KannadaprabhaNewsNetwork |  
Published : Oct 10, 2024, 02:27 AM IST
 ಚರಂಡಿಯಲ್ಲಿ ಬಿದ್ದಿರುವ ಫಲಕ | Kannada Prabha

ಸಾರಾಂಶ

ಮಲೇಬೆನ್ನೂರು ಇಲ್ಲಿಗೆ ಸಮೀಪದ ನಂದಿತಾವರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ನಂದಿತಾವರೆ ಮತ್ತಿತರ ಗ್ರಾಮಗಳ ಹೆಸರಿರುವ ಫಲಕವೊಂದು ಬಹುದಿನಗಳಿಂದ ಚರಂಡಿಯಲ್ಲಿ ಬಿದ್ದಿದೆ. ಈ ಅವ್ಯವಸ್ಥೆ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಬಹುದು ಎಂಬ ಕನಿಷ್ಠಪ್ರಜ್ಞೆಯೇ ಇಲಾಖೆಗೆ ಇಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

- ಮೂರು ಹಳ್ಳಿಗಳ ಹೆಸರಿನ ಫಲಕ ಬಿದ್ದು ತಿಂಗಳುಗಳಾಯ್ತು

- ಅಧಿಕಾರಿಗಳಿಗೆ ಪುರುಸೊತ್ತಿಲ್ಲ, ಗ್ರಾಮಸ್ಥರಿಗೆ ಕಾಳಜಿ ಇಲ್ಲ- - - ಮಲೇಬೆನ್ನೂರು: ಇಲ್ಲಿಗೆ ಸಮೀಪದ ನಂದಿತಾವರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ನಂದಿತಾವರೆ ಮತ್ತಿತರ ಗ್ರಾಮಗಳ ಹೆಸರಿರುವ ಫಲಕವೊಂದು ಬಹುದಿನಗಳಿಂದ ಚರಂಡಿಯಲ್ಲಿ ಬಿದ್ದಿದೆ. ಈ ಅವ್ಯವಸ್ಥೆ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಬಹುದು ಎಂಬ ಕನಿಷ್ಠಪ್ರಜ್ಞೆಯೇ ಇಲಾಖೆಗೆ ಇಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ನಂದಿತಾವರೆ ಗ್ರಾಮದಲ್ಲಿ ವಿದ್ಯಾವಂತರು, ನೌಕರರು, ಸಾಮಾಜಿಕ ಕಳಕಳಿಯ ರೈತ ಸಂಘಟನೆಗಳ ಪದಾಧಿಕಾರಿಗಳು ವಾಸಿಸುತ್ತಿದ್ದಾರೆ. ಗ್ರಾಮದ ಚರಂಡಿಯಲ್ಲೇ ತಮ್ಮೂರಿನ ಫಲಕ ಬಿದ್ದು ಕೆಲವು ತಿಂಗಳೇ ಕಳೆದಿದ್ದರೂ, ಈ ಅವ್ಯವಸ್ಥೆ ಸರಿಪಡಿಸಲು ಯಾರೊಬ್ಬರೂ ಮುಂದಾಗಿಲ್ಲ. ಫಲಕ ಯಾಕೆ ಬಿತ್ತು, ಯಾವಾಗ ಬಿತ್ತು, ಮತ್ತೆ ಅಳವಡಿಸಬೇಕೋ/ ಬೇಡವೋ ಈ ಯಾವ ಚಿಂತೆಗಳೂ ಇಲಾಖೆ ಅಧಿಕಾರಿಗಳಿಗೆ, ಪ್ರಜ್ಞಾವಂತರಿಗೆ ಹೊಳೆದಿಲ್ಲ.

ನಂದಿತಾವರೆ ಗ್ರಾಮದಲ್ಲಿನ ಈ ಫಲಕದಲ್ಲಿ ನಂದಿತಾವರೆ ಅಂತ ಇದೆ. ಜೊತೆಗೆ ದೇವರಬೆಳಕೆರೆ ಮತ್ತು ಕುಣೆಬೆಳಕೆರೆ ಗ್ರಾಮಗಳಿಗೆ ತೆರಳಲು ಎಷ್ಟು ಕಿಲೋ ಮೀಟರ್‌ ಆಗುತ್ತದೆ ಎಂಬ ಮಾಹಿತಿಗಳೂ ಇದರಲ್ಲಿವೆ. ಈ ಫಲಕ ಆಯಾ ಗ್ರಾಮಗಳಿಗೆ ಮಹತ್ವವಾಗಿದೆ. ಗ್ರಾಮಸ್ಥರ ಸಂಬಂಧಿಗಳು ಅಥವಾ ಇನ್ಯಾವುದೋ ಜನಪರ ಉದ್ದೇಶಗಳಿಗೆ ಗ್ರಾಮಕ್ಕೆ ಆಗಮಿಸಬೇಕಾದ ಜನರಿಗೆ, ಪ್ರಯಾಣಿಕರಿಗೆ ಈ ಫಲಕ ಉಪಯೋಗಿಯಾಗಿದೆ. ಆದರೆ, ಫಲಕ ಚರಂಡಿ ಪಾಲಾಗಿದ್ದರಿಂದ ಪ್ರಯಾಣಿಕರಿಗೆ ಇದರ ಪ್ರಯೋಜನ ಸಿಗದಾಗಿದೆ.

ಈಗಲಾದರೂ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಫಲಕವನ್ನು ಭದ್ರವಾಗಿ, ಸೂಕ್ತ ಸ್ಥಳದಲ್ಲಿ ಅಳವಡಿಸಿ, ಪ್ರಯಾಣಿಕರಿಗೆ ನೆರವಾಗುವ ಅಗತ್ಯವಿದೆ.

- - -

-೯-ಎಂಬಿಆರ್೧:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ